National News: ವಂದೇ ಭಾರತ್ ರೈಲಿನಲ್ಲಿ ಹಾವು ಬಿಟ್ಟಿದ್ದ ಆರೋಪಿ ಬಂಧನ

National News: ಮುಂಬೈ -ಸೋಲಾಪುರ ವಂದೇ ಭಾರತ್ ರೈಲಿನ ಶೌಚಾಲಯದಲ್ಲಿ ಓರ್ವ ವ್ಯಕ್ತಿ ಹಾವನ್ನು ಬಿಟ್ಟು ಮಜಾ ತೆಗೆದುಕ“ಳ್ಳುವ ಪ್ರಯತ್ನ ಮಾಡಿದ್ದಾನೆ. ಸದ್ಯ ರೈಲ್ವೆ ರಕ್ಷಣಾ ಇಲಾಖೆ ಆತನನ್ನು ಬಂಧಿಸಿದ್ದಾರೆ.

50 ದಿನಗಳ ಹಿಂದೆ ಈತ ಹಾವಿನ ಜತೆ ಮುಂಬೈ-ಸೋಲಾಪುರ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ ಶೌಚಾಲಯದಲ್ಲಿ ಬೇಕಂತಲೇ ಹಾವು ಬಿಟ್ಟು , ಮಜಾ ತೆಗೆದುಕ“ಂಡಿದ್ದಾನೆ. ಕೆಲ ಸಮಯ ಪ್ರಯಾಣಿಕರು ಕಂಗಾಲಾಗಿಯೇ ರೈಲಿನಲ್‌ಲಿ ಚಲಿಸಿದ್ದಾರೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರು ಸಿಸಿಟಿವಿ ಪರಿಶೀಲಿಸಿದಾಗ ಸತ್ಯ ಬೆಳಕಿಗೆ ಬಂದಿದೆ.

ಸದ್ಯ ಈತನ ಬಂಧನವಾಗಿದ್ದು, ನಾಸಿಕ್ ನಿವಾಸಿ ಜಗನ್ ಅರ್ಜುನ್ ಭಾಲೆ(37) ಬಂಧಿತ ಆರೋಪಿಯಾಗಿದ್ದಾನೆ. ವಿಚಾರಣೆ ನಡೆಸಿದಾಗ, ಎಲ್ಲರಿಗೂ ಕಂಗಾಲು ಮಾಡಲೆಂದೇ ಈ ಕೆಲಸ ಮಾಡಿದ್ದಾಗಿ ಹೇಳಿದ್ದಾನೆ. ಸದ್ಯ ಈತನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಕೋರ್ಟ್ ಆದೇಶಿಸಿದೆ.

About The Author