‘ಬಿಜೆಪಿ ₹100 ಕೋಟಿ ಅನುದಾನ ಹಿಂಪಡೆದಿದೆ’

ಬಿಜೆಪಿ ಸರ್ಕಾರ ನೂರು ಕೋಟಿ ಅನುದಾನ ಹಿಂದಕ್ಕೆ ಪಡೆದಿದೆ ಅಂತಾ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್​ ಗಂಭೀರ ಆರೋಪ ಮಾಡಿದ್ದಾರೆ.

Karnataka TV Contact


ತುಮಕೂರು ಜಿಲ್ಲೆ ಕೊರಟಗೆರೆಯ ಪ.ಪಂ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಜಂಪೇನಹಳ್ಳಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವ್ರು, ಅನುದಾನ ವಿಚಾರಗಳನ್ನ ಸೋಮವಾರ ನಡೆಯುವ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇನೆ.. ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಬಿಡುಗಡೆ ಆಗಿದ್ದ ಎತ್ತಿನಹೊಳೆ ಯೋಜನೆಯ 50 ಕೋಟಿ, ಜಿಲ್ಲಾಪಂಚಾಯತ್ನ 14 ಕೋಟಿ, ಪಂಚಾಯತ್ ನ 6 ಕೋಟಿ ಪ್ರವಾಸೋದ್ಯಮ ಇಲಾಖೆಯ 4 ಕೋಟಿ ಮತ್ತು ಪಿಡಬ್ಲ್ಯುಡಿ ಇಲಾಖೆಯ 25 ಕೋಟಿಗೂ ಅಧಿಕ ಅನುದಾನವನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿದೆ. ಪಟ್ಟಣದ ವೈಡ್ಮಾಮ್ಯಾಪಿಂಗ್ ರಸ್ತೆಗೆ 9 ಕೋಟಿ ಅನುದಾನ ಬಿಡುಗಡೆ ಆಗಿದೆ ಎಂದು ಹೇಳಿದರು.


ಅಂತರ್ಜಲ ಮಟ್ಟ ಏರಿಕೆ ಮಾಡಬೇಕು ಅಂದರೆ ಕೆರೆಗಳನ್ನ ಅಭಿವೃದ್ಧಿ ಮಾಡೋದು ಅನಿವಾರ್ಯ. ಪಟ್ಟಣಕ್ಕೆ ಕುಡಿಯುವ ನೀರನ್ನ ನೀಡುವ ಜಂಪೇನಹಳ್ಳಿ ಕೆರೆ ಅಭಿವೃದ್ಧಿ ಹಾಗೂ ಪುನಶ್ಚೇತನ ನನ್ನ ಜವಾಬ್ದಾರಿ ಅಂತಾ ಹೇಳಿದ್ರು.
ಕೆ.ರಾಜು ಕರ್ನಾಟಕ ಟಿವಿ

ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲದಿಂದ ನೇರಪರಿಹಾರ,
ಕೊಳ್ಳೆಗಾಲದ ಪ್ರಸಿದ್ಧ ಮನೆತನದವರಾದ ಮೋಡಿ ಬೆಟ್ಟಪ್ಪನವರು
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು, ನಿಮ್ಮ ಧ್ವನಿಯ ಮೂಲಕ
ಸಮಸ್ಯೆಗಳನ್ನ ಅರಿತು ಪ್ರಶ್ನೆ ಶಾಸ್ತ್ರದಿಂದ ಹಾಗೂ ನಿಮ್ಮ ನಾಮ ನಕ್ಷತ್ರದಿಂದ
ಫೋನಿನ ಮೂಲಕ ಸಂಪೂರ್ಣ ಭವಿಷ್ಯವನ್ನು ನಿಖರವಾಗಿ ತಿಳಿಸುತ್ತಾರೆ.
ಸ್ತ್ರೀ ಪುರುಷ ವಶೀಕರಣ, ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲಬಾಧೆ, ಮಾಟ-ಮಂತ್ರ, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಕೊಳ್ಳೇಗಾಲ ಸ್ಮಶಾನಕಾಳಿ ಅಮ್ಮನವರ ಪೂಜಾ ಶಕ್ತಿಯಿಂದ ಕೇವಲ ೫ ದಿನದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ..
ಫೋನಿನ ಮೂಲಕವೇ ಪರಿಹಾರ
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155

About The Author