ಬಿಜೆಪಿ ಸರ್ಕಾರ ನೂರು ಕೋಟಿ ಅನುದಾನ ಹಿಂದಕ್ಕೆ ಪಡೆದಿದೆ ಅಂತಾ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗಂಭೀರ ಆರೋಪ ಮಾಡಿದ್ದಾರೆ.
ತುಮಕೂರು ಜಿಲ್ಲೆ ಕೊರಟಗೆರೆಯ ಪ.ಪಂ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಜಂಪೇನಹಳ್ಳಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವ್ರು, ಅನುದಾನ ವಿಚಾರಗಳನ್ನ ಸೋಮವಾರ ನಡೆಯುವ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇನೆ.. ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಬಿಡುಗಡೆ ಆಗಿದ್ದ ಎತ್ತಿನಹೊಳೆ ಯೋಜನೆಯ 50 ಕೋಟಿ, ಜಿಲ್ಲಾಪಂಚಾಯತ್ನ 14 ಕೋಟಿ, ಪಂಚಾಯತ್ ನ 6 ಕೋಟಿ ಪ್ರವಾಸೋದ್ಯಮ ಇಲಾಖೆಯ 4 ಕೋಟಿ ಮತ್ತು ಪಿಡಬ್ಲ್ಯುಡಿ ಇಲಾಖೆಯ 25 ಕೋಟಿಗೂ ಅಧಿಕ ಅನುದಾನವನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿದೆ. ಪಟ್ಟಣದ ವೈಡ್ಮಾಮ್ಯಾಪಿಂಗ್ ರಸ್ತೆಗೆ 9 ಕೋಟಿ ಅನುದಾನ ಬಿಡುಗಡೆ ಆಗಿದೆ ಎಂದು ಹೇಳಿದರು.
ಅಂತರ್ಜಲ ಮಟ್ಟ ಏರಿಕೆ ಮಾಡಬೇಕು ಅಂದರೆ ಕೆರೆಗಳನ್ನ ಅಭಿವೃದ್ಧಿ ಮಾಡೋದು ಅನಿವಾರ್ಯ. ಪಟ್ಟಣಕ್ಕೆ ಕುಡಿಯುವ ನೀರನ್ನ ನೀಡುವ ಜಂಪೇನಹಳ್ಳಿ ಕೆರೆ ಅಭಿವೃದ್ಧಿ ಹಾಗೂ ಪುನಶ್ಚೇತನ ನನ್ನ ಜವಾಬ್ದಾರಿ ಅಂತಾ ಹೇಳಿದ್ರು.
ಕೆ.ರಾಜು ಕರ್ನಾಟಕ ಟಿವಿ