ಯಮನ ಪಾಶ, ಯೆಮೆನ್ ಗಲ್ಲು ಶಿಕ್ಷೆಯಿಂದ ಪಾರಾಗೋದು ಅಷ್ಟು ಸುಲಭವಲ್ಲ. ಜುಲೈ 16ರಂದು ಯೆಮೆನ್ನಲ್ಲಿ ನಿಗದಿಯಾಗಿದ್ದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ. ನಿಮಿಷಾ ಪ್ರಿಯಾ, ಕೇರಳದ ನರ್ಸ್. 2017ರಲ್ಲಿ ಯೆಮೆನ್ನಲ್ಲಿರುವ ತಮ್ಮ ವ್ಯವಹಾರ ಪಾಲುದಾರ ತಲಾಲ್ ಅಯ್ಯೋ ಮಹಿ ಅವರನ್ನು ಕೊಂದಿದ್ದಾರೆ ಎನ್ನಲಾದ ಆರೋಪ ಇವರ ಮೇಲಿದೆ.
ನಿಮಿಷಾ ಅವರ ಪ್ರಕಾರ, ಆತ್ಮರಕ್ಷಣೆಗೆ ಈ ಕೊಲೆಯಾಗಿದ್ದಾಗಿ ಹೇಳಿದ್ದಾರೆ.ಆದರೆ ತಲಾಲ್ ಅವರ ಕುಟುಂಬ ಈ ಆಕ್ಷೇಪಣೆ ಅನ್ನು ಒಪ್ಪಿಕೊಳ್ಳದೇ, ಕಾನೂನು ಕ್ರಮ ಮುಂದುವರಿಸಿದೆ.
ಸ್ಯಾಮ್ಯುಯೆಲ್ ಜೆರೋಮ್ ಬಾಸ್ಕರನ್, ಸೇವ್ ನಿಮಿಷ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್ ಸದಸ್ಯರು, ತಲಾಲ್ ಅವರ ಕುಟುಂಬವು ಕ್ಷಮಾದಾನ ಅಥವಾ ಬ್ಲಡ್ ಮನಿ ಸ್ವೀಕರಿಸಲು ಇನ್ನೂ ಒಪ್ಪಿಲ್ಲ ಎಂದು ಹೇಳಿದ್ದಾರೆ.
ಯೆಮೆನ್ನಲ್ಲಿ ಬಲಿಯಾದವರ ಕುಟುಂಬವನ್ನು ರಕ್ತದ ಹಣವನ್ನು ಸ್ವೀಕರಿಸಲು ಮನವೊಲಿಸಲು ಕೇರಳದ ಆಧ್ಯಾತ್ಮಿಕ ನಾಯಕರೊಬ್ಬರ ಮಧ್ಯಪ್ರವೇಶ ಸೇರಿದಂತೆ ವಿವಿಧ ಭಾಗಗಳ ನಿರಂತರ ರಾಜತಾಂತ್ರಿಕ ಪ್ರಯತ್ನಗಳ ನಂತರ, ಯೆಮೆನ್ ಸ್ಥಳೀಯ ಅಧಿಕಾರಿಗಳು ಮರಣದಂಡನೆಯನ್ನು ವಿಳಂಬಗೊಳಿಸಲು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದರು.
ಪ್ರಕರಣದ ಆರಂಭದಿಂದಲೂ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿರುವ ಭಾರತ ಸರ್ಕಾರ, ಇತ್ತೀಚಿನ ದಿನಗಳಲ್ಲಿ ನಿಮಿಷಾ ಪ್ರಿಯಾ ಅವರ ಕುಟುಂಬವು ಬಲಿಪಶುವಿನ ಕುಟುಂಬದೊಂದಿಗೆ ಪರಸ್ಪರ ಒಪ್ಪಬಹುದಾದ ಪರಿಹಾರವನ್ನು ತಲುಪಲು ಹೆಚ್ಚಿನ ಸಮಯವನ್ನು ಕೋರಲು ಸಂಘಟಿತ ಪ್ರಯತ್ನಗಳನ್ನು ಮಾಡಿದೆ
ಸದ್ಯ ಅವರ ಕುಟುಂಬ ಮತ್ತು ಇತರ ಕಾನೂನು ಪ್ರತಿನಿಧಿಗಳು ಯೆಮೆನ್ನಲ್ಲಿ ಮಾತುಕತೆಗಳನ್ನು ಮುಂದುವರಿಸುತ್ತಿರುವುದರಿಂದ ಮುಂದಿನ ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿದೆ.
ವರದಿ : ಲಾವಣ್ಯ ಅನಿಗೋಳ