Saturday, June 21, 2025

Latest Posts

ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಬಲಿ..!

- Advertisement -

www.karnatakatv.net: ರಾಯಚೂರು: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಬಲಿಯಾಗಿರುವ ಘಟನೆ ರಾಯಚೂರು ನಗರದಲ್ಲಿ ನಡೆದಿದೆ.

ನಗರದ ಸುರಕ್ಷಾ ಆಸ್ಪತ್ರೆಯಲ್ಲಿ ರೋಗಿ ಸಂಬoಧಿಕರು ಆ್ಯಂಬುಲೇನ್ಸ್ ಗಾಜು ಪುಡಿ ಮಾಡಿ ಗಲಾಟೆ ಮಾಡಿದರೆ. ನಿನ್ನೆ ರಾಯಚೂರು ಹೊರವಲಯದ ಹೊಸೂರು ನಿವಾಸಿಯಾಗಿದ ದೀಪಾ ಸುರಕ್ಷಾ ಆಸ್ಪತ್ರೆಗೆ ದಾಖಲಾಗಿದ್ರು. ಆಸ್ಪತ್ರೆ ವೈದ್ಯರು ರೋಗಿಗೆ ಬಿಳಿ ರಕ್ತಕಣಗಳು ಕಡಿಮೆಇದ್ದುದ್ದರಿಂದ ಆಸ್ಪತ್ರೆಗೆ ದಾಖಲಿಸಿಕೊಂಡಿದ್ದರು. ಇಂದು ದೀಪಾರನ್ನು ಹೆಚ್ಚಿನ ಚಿಕಿತ್ಸೆಗೆ ಹೈದ್ರಾಬಾದ್ ಗೆ ರವಾನೆ ಮಾಡಲು ವೈದ್ಯರು ಸೂಚನೆ ನೀಡಿದರು. ವೈದ್ಯರ ಸೂಚನೆಯಂತೆ ಸುರಕ್ಷಾ ಆಸ್ಪತ್ರೆಯಿಂದ ದೀಪಾರನ್ನು ಕರೆದುಕೊಂಡು ಹೋಗುವಾಗ ದಾರಿಯಲ್ಲಿ ಮೃತಪಟ್ಟಿದ್ದಾಳೆ. ಮೃತ ದೀಪ ಸಂಬoಧಿಕರು
ಆ್ಯಂಬುಲೇನ್ಸ್ ನಲ್ಲಿ ಆಕ್ಸಿಜನ್ ಇಲ್ಲದೆ ಇರೋದಕ್ಕೆ ದೀಪಾ ಸಾವನ್ನಪ್ಪಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಆಸ್ಪತ್ರೆ ಇಂದ ಕೇವಲ 200 ಮೀಟರ್ ದೂರ ಹೋದ ತಕ್ಷಣ ದೀಪಾ ಸಾವನ್ನಪ್ಪಿದರೆ ಇದಕ್ಕೆಲ್ಲ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಮೃತ ಸಂಬOಧಿಕರು ಆಸ್ಪತ್ರೆ ಆವರಣದಲ್ಲಿ ಗಲಾಟೆ ನಡೆಸಿ ಆ್ಯಂಬುಲೇನ್ಸ್ ನ ಗಾಜು ಪುಡಿ ಮಾಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಸದರ್ ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅನಿಲ್ ಕುಮಾರ, ಕರ್ನಾಟಕ ಟಿವಿ- ರಾಯಚೂರು

- Advertisement -

Latest Posts

Don't Miss