Saturday, July 27, 2024

Latest Posts

ಕುಂದಾನಗರಿಯಲ್ಲಿ ಖಾಕಿ ಪರೇಡ್

- Advertisement -

www.karnatakatv.net : ಬೆಳಗಾವಿ: ನಗರದಲ್ಲಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆಯಲ್ಲಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿದ್ರು. ಈ ಮೂಲಕ ಚುನಾವಣೆ ವೇಳೆ ಶಾಂತಿ ಕಾಪಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ರು.

ಸೆ.03 ರಂದು ನಡೆಯಲಿರುವ  ಚುನಾವಣೆಯಲ್ಲಿ ಸಾರ್ವಜನಿಕರು ಮುಕ್ತ ಹಾಗೂ ನಿರ್ಭೀತವಾಗಿ ಮತ ಚಲಾಯಿಸುವಂತೆ ಪೊಲೀಸರು ಈ ಮೂಲಕ ತಿಳಿಸಿಕೊಟ್ರು.  ಮಾರ್ಕೆಟ್ ಪೊಲೀಸ್ ಠಾಣೆಯಿಂದ ಪ್ರಾರಂಭವಾದ ಪಥಸಂಚಲನಕ್ಕೆ ಡಿಸಿಪಿ ಡಾ.ವಿಕ್ರಮ್ ಆಮ್ಟೆ ಚಾಲನೆ ನೀಡಿದ್ರು. ಎಸಿಪಿ ಸದಾಶಿವ ಕಟ್ಟಿಮನಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್ಐ ವಿಠ್ಠಲ ಯಾದವಾಡ, ಸೇರಿದಂತೆ ಕೆಎಸ್‍ಆರ್‍ಪಿ, ಮಾರ್ಕೆಟ್ ಠಾಣೆ ಪೊಲೀಸ್ ಸಿಬ್ಬಂದಿ ಈ ಪರೇಡ್ ನಲ್ಲಿ ಭಾಗಿಯಾಗಿದ್ದರು.  

ನಾಗೇಶ ಕುಂಬಳಿ, ಕರ್ನಾಟಕ ಟಿವಿ -ಬೆಳಗಾವಿ

- Advertisement -

Latest Posts

Don't Miss