Political News: ಉಡುಪಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದ್ದು, ಮಳೆಯ ಅವಾಂತರವನ್ನು ಮಿತಿಯಲ್ಲಿ ಇಡಲು ಮುಂಜಾಗೃತಾ ಕ್ರಮದ ಬಗ್ಗೆ ಚರ್ಚೆ ಮಾಡಿದ್ದೆವು. ಕಳೆದ ಬಾರಿಯ ಮಳೆಯಿಂದಾದ ಸಮಸ್ಯೆಗೆ ಹೋಲಿಸಿದರೆ, ಈ ಬಾರಿ ನಾವು ಮಳೆಯನ್ನು ಎದುರಿಸಲು ಸರ್ವಸನ್ನದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಶೇ.5ರಷ್ಟು ಸವಲತ್ತನ್ನು ಅಲ್ಪಸಂಖ್ಯಾತರಿಗೆ ಏರಿಸಿದ ಬಗ್ಗೆ ಪ್ರತಿಕ್ರಿಯಿಸುವ ಹೆಬ್ಬಾಳ್ಕರ್, ಅದು ಕೇಂದ್ರ ಸರ್ಕಾರದ ನಿರ್ಧಾರ, ನಾವು ಅದಕ್ಕೆ ಅನುಮತಿ ನೀಡಿದ್ದೇವೆ ಅಷ್ಟೇ. ಬಿಜೆಪಿಯವರು ಈ ಬಗ್ಗೆ ಪ್ರತಿಭಟಿಸುತ್ತಿರಬಹುದು. ಅವರದ್ದು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ. ಅವರಿಗೆ ರಾಜಕಾರಣ ಮಾಡಲಿಕ್ಕೆ ಬೇರೆ ವಿಚಾರ ಉಳಿದಿಲ್ಲ. ಆಗ ಗ್ಯಾರಂಟಿಯನ್ನು ಟೀಕೆ ಮಾಡಿದರು. ಕಾಂಗ್ರೆಸ್ ಬಹುಮತ ಸಾಧಿಸಿ, ಗೆದ್ದರೂ ಕೂಡ, ಸರ್ಕಾರ 6 ತಿಂಗಳೂ ಉಳಿಯೋದಿಲ್ಲ ಅಂತಾ ಹೇಳಿದರು. ಜನರ ಭಾವನೆ ಜತೆ ಆಟವಾಡುವ ಬಿಜೆಪಿಗರಿಗೆ ಮಾತನಾಡಲು ಏನೂ ಉಳಿದಿಲ್ಲ ಅಂತಾ ಹೆಬ್ಬಾಳ್ಕರ್ ಹೇಳಿದ್ದಾರೆ.
ಇನ್ನು ಚಕ್ರವರ್ತಿಯವರ ಹೇಳಿಕೆ ಬಗ್ಗೆ ಮಾತನಾಡಿರುವ ಸಚಿವೆ, ಚಕ್ರವರ್ತಿ ಸೂಲಿಬೆಲೆಯವರು ಸುಳ್ಳಿನ ಚಕ್ರವರ್ತಿ. ಬಾಯಿ ತೆಗೆದರೆ, ರಾಮಾಯಣ, ಭಗವದ್ಗೀತೆ ಎಂದು ಹೇಳುತ್ತಾರೆ. ಆದರೆ ಅವರು ಎಷ್ಟು ಸುಳ್ಳು ಮಾತನಾಡುತ್ತಾರೆಂದು ರಾಜ್ಯದ ಜನರಿಗೆ ಗ“ತ್ತು. ಕಪ್ಪಗಿರೋದನ್ನು ಬೆಳ್ಳಗೆ ಮಾಡೋದ್ರಲ್ಲಿ, ಬೆಳ್ಳಗೆ ಇರೋದನ್ನು ಕಪ್ಪಗೆ ಮಾಡೋದ್ರಲ್ಲಿ ಬಹಳ ನಿಸ್ಸೀಮರು ಅಂತಾ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ದೇಶದಲ್ಲಿ ಸಂವಿಧಾನದ ಘನತೆ ಎತ್ತಿ ಹಿಡಿದ ಪಕ್ಷ ಅಂದ್ರೆ ಅದು ಕಾಂಗ್ರೆಸ್ ಪಕ್ಷ. ಹಾಗಾಗಿ ಚಕ್ರವರ್ತಿಯವರಿಂದ ನಾವು ಯಾವುದೇ ಪಾಠ ಕಲಿಯಬೇಕಾಗಿಲ್ಲ. ಉಡುಪಿಯಲ್ಲ ಅವರು 3 ದಿನದ ಪ್ರವಾಸದಲ್ಲಿದ್ದಾರೆ ಅಂತಾ ಕೇಳ್ಪಟ್ಟೆ ಅವರು ಪ್ರವಾಸ ಮಾಡಲಿ. ಆದರೆ ದ್ವೇಷ ದ ಭಾಷಣ, ಸುಳ್ಳು ಬಿತ್ತೋದನ್ನ, ವಿಷಬೀಜ ಬಿತ್ತೋದನ್ನು ಅವರು ಮಾಡಬಾರದು, ಯಾಕಂದ್ರೆ ಉಡುಪಿ ಜಿಲ್ಲೆಯ ಜನ ಶಾಂತಿಪ್ರಿಯರು ಅಂತಾ ಹೆಬ್ಬಾಳ್ಕರ್ ಚಕ್ರವರ್ತಿಗೆ ಟಾಂಗ್ ನೀಡಿದ್ದಾರೆ.