Sunday, June 22, 2025

Latest Posts

ಶೀಘ್ರವೇ ಕಾಂಗ್ರೆಸ್ ಸೇರಲಿರೋ ಶಾಸಕ ಶ್ರೀನಿವಾಸ್..!

- Advertisement -

Political News:

Feb:24: ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ ಗೆ ಶಾಕ್ ಮೇಲೆ ಶಾಕ್ ಎದುರಾಗ್ತಿದೆ. ಇತ್ತ ಶಾಸಕ ಶ್ರೀನಿವಾಸ್ ಕಾಂಗ್ರೆಸ್ ಸೇರೋದು ಪಕ್ಕಾ ಆಗಿದ್ದು, ಜೆಡಿಎಸ್ ಸ್ಥಳೀಯ ಮುಖಂಡರೆಲ್ಲಾ ಗುಬ್ಬಿ ವಾಸು ಪರ ನಿಂತಿದ್ದಾರೆ. ಕ್ಷೇತ್ರದ ಹಲವು ಗ್ರಾಮ ಪಂಚಾಯ್ತಿಗಳಲ್ಲಿ ಜೆಡಿಎಸ್​​ ಗೆ ಗುಡ್ ಬೈ ಹೇಳಿ, ಗುಬ್ಬಿ ವಾಸು ಟೀಮ್​ಗೆ ಸಪೋರ್ಟ್ ಮಾಡ್ತಿದ್ದಾರೆ.

ಸೋಲಿಲ್ಲದ ಸರದಾರ. ಗುಬ್ಬಿ ಶಾಸಕ ಶ್ರೀನಿವಾಸ್ ಹವಾ ಕ್ಷೇತ್ರದಲ್ಲಿ ದಿನೇ ದಿನೇ ಜೋರಾಗ್ತಿದೆ. ಜೆಡಿಎಸ್​​ ಗೆ ರಾಜೀನಾಮೆ ಕೊಡ್ತೇನೆ. ಕಾಂಗ್ರೆಸ್ ಸೇರ್ತೇನೆ ಅಂತ ಈಗಾಗ್ಲೇ ಶಾಸಕ ಶ್ರೀನಿವಾಸ್ ಬಹಿರಂಗವಾಗಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಶೀಘ್ರವೇ ಗುಬ್ಬಿ ಶಾಸಕ ಶ್ರೀನಿವಾಸ್ ಕಾಂಗ್ರೆಸ್ ಸೇರೋದು ಪಕ್ಕ ಆಗಿದೆ. ಯಾವಾಗ ಜೆಡಿಎಸ್ ಬಿಡೋದಾಗಿ ಘೋಷಣೆ ಮಾಡಿದ್ರೆ, ಅಂದಿನಿಂದಲೇ ಗುಬ್ಬಿ ಕ್ಷೇತ್ರದಲ್ಲಿ ಜೆಡಿಎಸ್​ ಜೊತೆಗಿದ್ದ ಸ್ಥಳೀಯ ನಾಯಕರೆಲ್ಲಾ ಗುಬ್ಬಿ ವಾಸು ಬಣಕ್ಕೆ ಶಿಫ್ಟ್ ಆಗಿದ್ದಾರೆ..

ಯೆಸ್, ಪಂಚಾಯ್ತಿ ಮಟ್ಟದಲ್ಲಿ ಜೆಡಿಎಸ್​​ಗೆ ರಾಜೀನಾಮೆ ಕೊಡ್ತಿರೋ ಸ್ಥಳೀಯ ನಾಯಕರೆಲ್ಲಾ ಗುಬ್ಬಿ ವಾಸುಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇತ್ತೀಚೆಗಷ್ಟೇ ಗುಬ್ಬಿಯ ಬೆಲವತ್ತ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರಾಜೀನಾಮೆ ಪರ್ವ ಮುಂದುವರಿದಿದೆ. ಜೆಡಿಎಸ್​ ನಲ್ಲಿದ್ದ ಬಹುತೇಕ ನಾಯಕರು ರಾಜೀನಾಮೆ ಕೊಟ್ಟು, ಗುಬ್ಬಿ ವಾಸು ಬಣಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಗುಬ್ಬಿ ಕ್ಷೇತ್ರದಲ್ಲಿ ವಾಸುಗೆ ಮತ್ತಷ್ಟು ಬೆಂಬಲ ದೊರೆತಿದೆ..
ಫ್ಲೋ..
ಗುಬ್ಬಿ ವಾಸು ಕಾಂಗ್ರೆಸ್ ಸೇರೋದು ಫಿಕ್ಸ್. ಯಾವಾಗ ಅನ್ನೋದು ಮಾತ್ರ ಸಸ್ಪೆನ್ಸ್. ಇತ್ತೀಚೆಗಷ್ಟೇ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರನ್ನೂ ಭೇಟಿಯಾಗಿರೋ ಶ್ರೀನಿವಾಸ್, ಶೀಘ್ರವೇ ಗುಬ್ಬಿಯ ಕಾಂಗ್ರೆಸ್ ಅಭ್ಯರ್ಥಿ ಆಗ್ತಿದ್ದಾರೆ. ಒಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು, ಬಳಿಕ ಜೆಡಿಎಸ್​​ ನಿಂದ ಸತತವಾಗಿ ಗೆದ್ದಿರೋ ಶ್ರೀನಿವಾಸ್ ಗೆ ಗುಬ್ಬಿ ಕ್ಷೇತ್ರದಲ್ಲಿ ಎದುರಾಳಿಯೇ ಇಲ್ವೇನೋ ಎನ್ನುವಂತಾಗಿದೆ. ಬಿಜೆಪಿಯಿಂದ ಇನ್ನೂ ಅಭ್ಯರ್ಥಿ ಘೋಷಣೆ ಆಗಿಲ್ಲ. ಜೆಡಿಎಸ್​​ನಿಂದ ನಾಗರಾಜ್​​ ಘೋಷಣೆ ಆಗಿದ್ರೂ, ಗುಬ್ಬಿ ಶ್ರೀನಿವಾಸ್ ಎದುರು ಪೈಪೋಟಿ ನೀಡೋದ್ರಲ್ಲಿ ವಿಫಲವಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಒಟ್ನಲ್ಲಲಿ, ಗುಬ್ಬಿ ಕ್ಷೇತ್ರದಲ್ಲಿ ಶ್ರೀನಿವಾಸ್ ಮತ್ತೊಮ್ಮೆ ಆಯ್ಕೆ ಆಗ್ತಾರೆ ಅಂತ ಜನ ಹೇಳ್ತಿದ್ದು, ಅದಕ್ಕೆ ತಕ್ಕಂತೆ ವಾಸುಗೆ ಜನ ಬೆಂಬಲ ವ್ಯಕ್ತವಾಗ್ತಿದೆ.

ಎಎಪಿ ಅಭ್ಯರ್ಥಿ ಆಗಿರೋ ಆನೇಕಲ್ ದೊಡ್ಡಯ್ಯಗೆ ಜನರೇ ನೀಡಿದ್ರು ಭರ್ಜರಿ ಗಿಫ್ಟ್…!

ಹಾಸನದಲ್ಲಿ ಚುನಾವಣಾ ಪ್ರಚಾರಕ್ಕೆ ಇಳಿದ ರೇವಣ್ಣ ಕುಟುಂಬ

ಮೀನೂಟದ ಬಗ್ಗೆ ಸ್ಪಷ್ಟನೆ ಕೊಟ್ಟ ಸಿ ಟಿ ರವಿ

- Advertisement -

Latest Posts

Don't Miss