Political News: ರಾಜ್ಯದಲ್ಲಿ ಆಗಸ್ಟ್ 16ರಂದು ಅಸಹಕಾರ ಹೋರಾಟ ಮಾಡುತ್ತೇವೆ: ಗೋವಿಂದ ಕಾರಜೋಳ

Hubli News: ಹುಬ್ಬಳ್ಳಿ: ಒಳ ಮೀಸಲಾತಿಗಾಗಿ ಕಳೆದ ಮೂವತ್ತು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಕೊಡುವುದಾಗಿ ಹೇಳಿತ್ತು. ಅಧಿಕಾರಕ್ಕೆ ಬಂದರೂ ಮೀಸಲಾತಿ ನೀಡುತ್ತಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಎರಡು ವರ್ಷಗಳಿಂದ ಮೀಸಲಾತಿ ಕೊಡುತ್ತಿಲ್ಲ.‌ ಕೆಳ ವರ್ಗದ ಜನ ಮೇಲೆ ಬರಬಾರದೆಂದು ಸರ್ಕಾರ ಈ ರೀತಿ ಮಾಡುತ್ತಿದೆ. ಆಗಸ್ಟ್ 1ರೊಳಗೆ ಸರ್ಕಾರ ತನ್ನ ನಿಲವು ಸ್ಪಷ್ಟಪಡಿಸಬೇಕು. ಮೀಸಲಾತಿ ಜಾರಿ ಮಾಡಬೇಕು. ಮಾಡದೇ ಹೋದ್ರೆ ಇದೇ ಆಗಸ್ಟ 1ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಆಗಸ್ಟ್ 16ರಂದು ಅಸಹಕಾರ ಹೋರಾಟ ಮಾಡುತ್ತೇವೆ. ಯಾವುದೇ ಸಚಿವರನ್ನ ರಸ್ತೆಯಲ್ಲಿ ಓಡದಂತೆ ಪ್ರತಿಭಟನೆ ಮಾಡಿ ಬಿಸಿ ಮುಟ್ಟಿಸಲಾಗುತ್ತೆ ಎಂದು ಹೇಳಿದರು.

About The Author