political news
ಕರ್ನಾಟಕ ವಿಧಾನಸಭೆ ಚುನವಣೆ ಸಮೀಪಿಸುತಿದ್ದಂತೆ ಒಬ್ಬರ ಮೇಲೆ ಒಬ್ಬರು ಕಿಡಿಕಾರಿ ಸಮಾವೇಶ ಮತ್ತು ಸಮಾರಂಭಗಳಲ್ಲಿ ಚುನಾವಣಾ ಪ್ರಚಾರದ ಜೊತೆಗೆ ಜಗಳ ಕಾದಾಟಗಳು ಸಹ ನಡೆಯುತ್ತಿವೆ.ಒಬ್ಬರನ್ನ ಇನ್ನೊಬ್ಬರು ಅವಹೇಳನಕಾರಿಯಾಗಿ ಮಾತನಾಡುವುದು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸುವುದು ನಡೆಯುತ್ತಿದೆ. ಅದೇ ರೀತಿ ಮಂಡ್ಯ ಜಿಲ್ಲೆಯ ಮಲೆ ಮದೇಶ್ವರ ಬೇಟ್ಟದಲ್ಲಿ ನೂತನ ವಿಗ್ರಹ ಅನಾವರಣ ಕಾರ್ಯಕ್ರಮಕ್ಕೆ ಸಂಸದೆ ಸುಮಾಲತ ಅಂಬರೀಶ ಆಗಮಿಸಿದ್ದರು ಅಲ್ಲಿ ರಾಜಕೀಯ ಡ್ರಾಮವೇ ನಡೆದುಹೋಯಿತು. ಅದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ
ಶ್ರೀಮಲೈ ಮಹದೇಶ್ವರಸ್ವಾಮಿ ದೇವಾಲಯ ಟ್ರಸ್ಟ್ನಿಂದ ಮಲೈ ಮಹದೇಶ್ವರಸ್ವಾಮಿಯ ನೂತನ ವಿಗ್ರಹ ಪ್ರತಿಷ್ಠಾಪನೆ ಮತ್ತು ದೇವಾಲಯದ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಜೆಡಿಎಸ್ ಪಕ್ಷದ ನಾಯಕರನ್ನು ದೇವಸ್ಥಾನದ ವೇದಿಕೆಯ ಕೆಳಗೆ ಸನ್ಮಾನಿಸಲಾಗಿತ್ತು.
ಆದರೆ ಸಂಸದೆ ಸುಮಲತಾ ಅವರನ್ನು ಕಾಂಗ್ರೆಸ್ ಪಕ್ಷದವರು ವೇದಿಕೆಗೆ ಕರೆತಂದು ಸನ್ಮಾನಿಸಲು ಮುಂದಾದ್ರು. ಇದರಿಂದ ಸಿಟ್ಟಿಗೆದ್ದ ಜೆಡಿಎಸ್ ಕಾರ್ಯಕರ್ತರು ಕೈಗೆ ಸಿಕ್ಕ ಚೇರ್ಗಳನ್ನು ಎತ್ತಿ ಹಾಕಿದರು. ಸಂಸದೆ ಸುಮಲತಾ ಎದುರು ದೊಡ್ಡ ಹೈಡ್ರಾಮಾವೇ ನಡೆಯಿತು. ಕಾಂಗ್ರೆಸ್ ಕಾರ್ಯಕರ್ತರು, ದೇವಸ್ಥಾನದ ಕಾರ್ಯಕ್ರಮದಲ್ಲಿ ರಾಜಕೀಯಬೇಡ ಸುಮ್ಮನಿರಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಸಮಾಧಾನ ಮಾಡಿದರು.ಇತ್ತ ಜೆಡಿಎಸ್ನವರು ಕಾಂಗ್ರೆಸ್ ನಾಯಕರ ಹಾಗೂ ಸುಮಲತಾರ ಫೋಟೋ ಮಾತ್ರ ಹಾಕಿದ್ದೀರ ಎಂದು ರೊಚ್ಚಿಗೆದ್ದು ಫ್ಲೆಕ್ಸ್ ಅನ್ನು ಹರಿದು ಹಾಕಿ ಗಲಾಟೆ ಮಾಡಿದರು.
ಇದರಿಂದ ಬೇಸರಗೊಂಡು ಮಾತನಾಡಿದ ಸುಮಲತಾ, ಬಿ.ಗೌಡಗೆರೆ ಗ್ರಾಮದ ಅಭಿವೃದ್ಧಿ ಕೆಲಸಗಳನ್ನು ನಾನೂ ಮಾಡಿದ್ದೇನೆ. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆಯೇ ಹೊರತು ಯಾರೋ ಮಾಡಿದ ಕೆಲಸಕ್ಕೆ ರಿಬ್ಬನ್ ಕಟ್ ಮಾಡೋದಕ್ಕೆ ನಾನಿಲ್ಲಿಗೆ ಬಂದಿಲ್ಲ. ಅಂತಹ ಚೀಪ್ ಪಬ್ಲಿಸಿಟಿ ನನಗೆ ಬೇಕಾಗಿಯೂ ಇಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಗರಂ ಆಗಿಯೇ ನುಡಿದರು.