political news
ಆಮ್ ಆದ್ಮಿ ಪಕ್ಷದ ಪ್ರಮುಖ ವ್ಯಕ್ತಿಯಾಗಿರುವ ನಿವೃತ್ತ ಪೋಲಿಸ್ ಅಧಿಕಾರಿಯಾಗಿರುವ ಭಾಸ್ಕರ್ ರಾವ್ ಅವರು ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಅಧಿಕಾರಕ್ಕೆ ರಾಜಿನಾಮೆ ನೀಡಿ ಅರವಿಂದ್ ಕೇಜ್ರಿವಾಲ ನಾಯಕತ್ವದ ಆಮ್ ಆದ್ಮಿ ಪಕ್ಷ ಸೇರಿದ್ದ ಭಾಸ್ಕರ್ ರಾವ್ ಅವರು ಬುದುವಾರ ಪೊರಕೆ ಪಕ್ಷ ತೊರೆದು ಕಮಲ ಪಕ್ಷಕ್ಕೆ ಜೈ ಎಂದಿದ್ದಾರೆ.
ಭಾಸ್ಕರ್ ರಾವ್ ಅವರನ್ನು ಇತ್ತೀಚೆಗೆ ಪಕ್ಷದ ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ರಾಜ್ಯದಲ್ಲಿ ಪಕ್ಷವು ನೆಲೆ ಕಂಡುಕೊಳ್ಳಲು ವೇದಿಕೆ ರೂಪಿಸಿಕೊಳ್ಳುತ್ತಿದೆ. ಈ ವೇಳೆಯಲ್ಲಿ ರಾವ್ ಪಕ್ಷದಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿದ್ದರು.
ಇನ್ನೇನು ಮಾರ್ಚ ನಾಲ್ಕರಂದು ದೆಹಲಿ ಮುಖ್ಯಮಂತ್ರಿ ಪಕ್ಷದ ಪ್ರಚಾರಕ್ಕಾಗಿ ದಾವಣಗೆರೆಗೆ ಆಗಮಿಸಲಿದ್ದಾರೆ. ಈ ಹೆತ್ತಿನಲ್ಲೆ ಈ ರೀತಿಯಾಗಿ ಬಾಸ್ಕರ್ ರಾವ್ ಅವರು ನಿರ್ದಾರ ತೆಗೆದುಕೊಂಡಿರುವುದು ಕೇಜ್ರಿವಾಲ ಪಕ್ಷಕ್ಕೆ ಆತಂಕ ಸೃಷ್ಠಿಮಾಡಿದೆ.