ಬೆಂಗಳೂರು : ಡಿ ಬಾಸ್ ದರ್ಶನ್ ಅವರ ಒಂದು ಕಾಲದ ಆಪ್ತ.. ಪ್ರೊಡ್ಯೂಸರ್ ಆದರೂ ಹೀರೋ ರೇಂಜಿAಗ್ ಸೌಂಡ್ ಮಾಡುವ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಇದೀಗ ರಾಜಕೀಯಕ್ಕೆ ಎಂಟ್ರಿಯಾಗಿದ್ದಾರೆ.. ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧೆ ಮಾಡಿ ನಿರ್ದೇಶಕನಾಗಿ ಆಯ್ಕೆಯಾಗಿ ಇದೀಗ ಕಿಮ್ಸ್ ಆಸ್ಪತ್ರೆ ಅಧ್ಯಕ್ಷನಾಗಿದ್ದಾರೆ. ಇದೀಗ ಬೆಂಗಳೂರಿನ ಬೊಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಸಿದ್ಧತೆ ನಡೆಸಿದ್ದು ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಎಷ್ಟೋ ಸಿನಿಮಾ ನಟರು ರಾಜಕೀಯಕ್ಕೆ ಬಂದು ಫೇಲಾಗಿರವ ಉದಾಹರಣೆಗಳಿದೆ. ಹಾಗೆಯೇ ಕೆಲವು ಸಿನಿಮಾ ಮಂದಿ ರಾಜಕೀಯಲ್ಲಿ ಸಕಸ್ಸಸ್ ಆದವರೂ ಇದ್ದಾರೆ. ಆದ್ರೆ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಬಿಜೆಪಿಯ ಸತೀಶ್ ರೆಡ್ಡಿ ಭದ್ರಕೋಟೆ. ಇದನ್ನ ಸಿನಿಮಾ ಸ್ಟೆöÊಲ್ ಹುಂಬತನದಲ್ಲೇ ಗೆಲ್ತೀನಿ ಅಂತ ಉಮಾಪತಿ ಶ್ರೀನಿವಾಸಗೌಡ ಹೊರಟಂತೆ ಕಾಣ್ತಿದೆ. ಆದ್ರೆ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ಸಹ ಟಿಕೆಟ್ ಆಕಾಂಕ್ಷಿ ಹೀಗಾಗಿ ಪಕ್ಷ ಟಿಕೆಟ್ ವಿಚಾರದಲಲಿ ಏನು ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.. ಟಿಕೆಟ್ ಸಿಕ್ಕ ಮೇಲೂ ಗೆಲುವು ಸುಲಭವಾಗಿ ದಕ್ಕಲ್ಲ. ಯಾಕಂದ್ರೆ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಎಲ್ಲಾ ರೀತಿಯಲ್ಲೂ ಬಲಿಷ್ಟ. ಈಗಾಗಲೇ ಡಿ ಬಾಸ್ ಕರೆಸಿ ಒಂದು ಕರ್ಯಕ್ರಮ ಮಾಡಿ ಉಮಾಪತಿಗೆ ಟಾಂಗ್ ನೀಡಿದ್ದಾರೆ.. ಡಿ ಬಾಸ್ ಸಹ ಆ ಕರ್ಯಕ್ರಮದಲ್ಲಿ ಸತೀರ್ಶ ರೆಡ್ಡಿಯನ್ನ ಹಾಡಿಹೊಗಳಿದ್ದಾರೆ.. ಕೆಲ ತಿಂಗಳ ಹಿಂದೆ ನಡೆದ ಘಟನೆಯಿಂದ ಡಿ ಬಾಸ್ ಹಾಗೂ ಉಮಾಪತಿ ಸ್ನೇಹದಲ್ಲಿ ಬಿರುಕು ಮೂಡಿದೆ. ಈ ನಡುವೆ ಡಿ ಬಾಸ್ ಸತೀಶ್ ರೆಡ್ಡಿ ಬೆನ್ನಿಗೆ ನಿಂತಿದ್ದಾರೆ.. ಇನ್ನೊಂದೆಡೆ ಉಮಾಪತಿ ಸ್ಪರ್ಧೆ ಮಾಡೋಕೆ ಬೆಂಗಳೂರು ದಕ್ಷಣ ಸೇರಿಂತೆ ಬೇರೆ ಕ್ಷೇತ್ರಗಳೂ ಅನುಕೂಲಕರವಾಗಿತ್ತು. ಆದ್ರೆ, ಬೊಮ್ಮನಹಳ್ಳಿ ಕ್ಷೇತ್ರದಲ್ಲೇ ಗೆಲ್ಲಬೇಕು ಅನ್ನೋದು ಉಮಾಪತಿ ಹಠ.. ಇದು ಎಷ್ಟು ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕು..
ಕೆ.ಎಂ ಶಿವಕುಮಾರ್, ಪೊಲಿಟಿಕಲ್ ಬ್ಯೂರೋ, ಕರ್ನಾಟಕ ಟಿವಿ