Saturday, July 5, 2025

Latest Posts

Village visit: ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಸಂತೋಷ್ ಲಾಡ್

- Advertisement -

ಹುಬ್ಬಳ್ಳಿ: ರಾಜ್ಯದಲ್ಲಿ ಹಲವು ದಿನಗಳಿಂದ ಮಳೆ ಸುರಿಯುತ್ತಿದ್ದು ರಾಜ್ಯದ ಹಲವು ಜಿಲ್ಲೆಗಳಲ್ಲಿ  ಜನ ಜೀವನ ಅಸ್ತವ್ಯಸ್ತವಾಗಿದೆ. ಸಾಕಷ್ಟು ಜನ ಮನೆ ಮಠ ಆಸ್ತಿ ಪಾಸ್ತಿ ಕಳೆದುಕೊಂಡಿದ್ದಾರೆ.ಹಾಗಾಗಿ ಹುಬ್ಬಳ್ಳಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಮಳೆ ಪೀಡಿತ ಪ್ರದೇಶಗಳಿಗೆ ಬೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಕುಂದಗೋಳ ಕ್ಷೇತ್ರದ ವಿವಿಧೆಡೆ ಭೇಟಿ ನೀಡುವ ಸಂದರ್ಭದಲ್ಲಿ ಶೆರೆವಾಡ ಕ್ರಾಸ್ ನಲ್ಲಿ ಬಸ್ ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳನ್ನು ಮಾತನಾಡಿಸಿ ಅವರ ಸಮಸ್ಯೆಗಳನ್ನು ಆಲಿಸಿದರು ಈ ವೇಳೆ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳೆಗೆ ತೆರಳಲು ಪ್ರತಿದಿನ ಬಸ್ ನಿಂದ ಆಗುತ್ತಿರುವ ಸಮಸ್ಯೆಯನ್ನು ವಿವರಿಸಿದರು.

ವಿದ್ಯಾರ್ಥಿಗಳ ಕಷ್ಟವನ್ನು ಆಲಿಸಿದ ಸಚಿವರು ಆದಷ್ಟು ಬೇಗ ಸರಿಪಡಿಸುವುದಾಗಿ ತಿಳಿಸಿದರು.ನಱಮತರ ವಿದ್ಯಾರ್ಥಿ ಗಳಿಗೆ ಚೆನ್ನಾಗಿ ಓದುವಂತೆ ಹೇಳಿ ಸೆಲ್ಯೂಟ್ ಹೊಡೆದು ಅಲ್ಲಿಂದ ತೆರಳಿದರು.ನಂತರ ಶೆರೆವಾಡ ಗ್ರಾಮದಲ್ಲಿ ಬಿದ್ದ ಮನೆಗಳ ಪರಿಶೀಲನೆ ನಡೆಸಿದರು. ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಮಡರು. ಇವರು ಜೊತೆ ಕುಂದಗೋಳ ಶಾಸಕ ಎಂಆರ್ ಪಾಟೀಲ, ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ ಸಾಥ್ ನೀಡಿದರು.

ಅತಿವೃಷ್ಟಿ ಒಳಗಾದ ಹೊಲಗಳಿಗೆ ಭೇಟಿ ನೀಡಿದ ಸಂತೋಷ್ ಲಾಡ್:ಕುಂದಗೋಳದ ಬೆಟದೂರಿನ ಸಮೀಪದ ಫಕ್ಕೀರಪ್ಪ ಅವರ ಹೊಲಕ್ಕೆ ಭೇಟಿ ನೀಡಿ ಕೃಷಿ ಇಲಾಖೆಯ ಅಧಿಕಾರಿ ಭಾರತಿ ಮೆಣಸಿನಕಾಯಿ ಅವರಿಂದ ಮಾಹಿತಿ ಪಡೆದುಕೊಂಡರು. ಸರಿಯಾದ ರೀತಿಯಲ್ಲಿ ಕೃಷಿ ಬೆಳೆಗಳ ಕುರಿತು ವರದಿ ಮಾಡಬೇಕು. ಅನಗತ್ಯ ಮಾಹಿತಿ ನೀಡಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಶಾಸಕರಾದ ಎಂ.ಆರ್.ಪಾಟೀಲ, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಉಪವಿಭಾಗಾಧಿಕಾರಿ ಅಶೋಕ ತೇಲಿ ಸೇರಿದಂತೆ ಇತರರು ಇದ್ದರು

 

Rain : ಕಾರ್ಕಳದಾದ್ಯಂತ ಧಾರಾಕಾರ ಮಳೆಗೆ ಹಲವೆಡೆ ಹಾನಿ…!

Police : ಪುತ್ತೂರು: ಅಪರಿಚಿತ ಶವ ಪತ್ತೆ: ತನಿಖೆ ಆರಂಭ

Mining: ದೇವಸ್ಥಾನಕ್ಕೆ ಸೇರಿದ ಸ್ಥಳದಲ್ಲಿರುವ ಕಲ್ಲುಬಂಡೆಗಳಿಗೆ ಕನ್ನ

- Advertisement -

Latest Posts

Don't Miss