Sunday, June 1, 2025

Latest Posts

ಕೆರೆ ಕೋಡಿ ತುಂಬಿ ರೈತರ ಜಮೀನಿಗೆ ನುಗ್ಗಿದ ನೀರು

- Advertisement -

www.karnatakatv.net ರಾಯಚೂರು: ಜಿಲ್ಲೆಯಲ್ಲಿ ಮುಂದುವರೆದ ಮಳೆಯ ಅವಾಂತರ ಕೆರೆ ಕೋಡಿ ತುಂಬಿ ರೈತರ ಜಮೀನುಗಳಿಗೆ ನುಗ್ಗಿದ ನೀರು. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗೋನವಾರ ಗ್ರಾಮದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಭರ್ತಿಯಾಗಿರುವ ಗೋನವಾರ ಕೆರೆ. ಮತ್ತೆ ನೆನ್ನೆ ಮಸ್ಕಿ ತಾಲ್ಲೂಕಿನಲ್ಲಿ ಮಳೆಯಾಗಿದೆ

ಮಳೆ ನೀರು ಮತ್ತೆ ಕೆರೆಗೆ ಹರಿದು ಬಂದಿದ್ರಿಂದ ಕೆರೆಯ ಒಂದು ಭಾಗ ಹೊಡೆದಿದ್ದು, ಗ್ರಾಮಕ್ಕೆ ನೀರು ನುಗ್ಗುವ ಆತಂಕದಿಂದ  ಜೀವನ ಸಾಗಿಸುತ್ತಿದ್ದ ರೈತರು. ನೂರಾರು ಎಕರೆ ಜಮೀನಿಗೆ ನುಗ್ಗಿದ ಕೆರೆ ನೀರು. ನಾಟಿ ಮಾಡಿದ್ದ ಭತ್ತ ಹಾಗೂ ಬಿತ್ತನೆ ಮಾಡಿದ್ದ ಸೂರ್ಯಕಾಂತಿ, ತೊಗರಿ ಬೆಳೆಗಳೆಲ್ಲಾ ನೀರು ಪಾಲು ಆಗಿರುವುದು ಎದ್ದು ಕಾಣುತ್ತದೆ. ಇನ್ನಾದರು ರೈತರಿಗೆ ಸರ್ವೆ ಮಾಡಿ ಪರಿಹಾರ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದರು.

- Advertisement -

Latest Posts

Don't Miss