ಅಭ್ಯಾಸದ ವೇಳೆ ಕೈಗೆ ಪೆಟ್ಟು ಮಾಡಿಕೊಂಡ ರೋಹಿತ್ ಶರ್ಮಾ : ಆತಂಕದಲ್ಲಿರುವ ತಂಡ

ಟಿ20 ವಿಶ್ವಕಪ್ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಆಡಲಿದ್ದ ಭಾರತಕ್ಕೆ ಆತಂಕವಾಗಿದೆ. ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಅಭ್ಯಾಸ ಮಾಡುತ್ತಿದ್ದಾಗ ಕೈಗೆ ಚೆಂಡಿನ ಹೊಡೆತ ಬಿದ್ದು ಪೆಟ್ಟಾಗಿದೆ. ಇದರಿಂದ ತಂಡಕ್ಕೆ ಆತಂಕ ಶುರುವಾಗಿದೆ.

ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದ ರೋಹಿತ್ ಅವರಿಗೆ ಎಸ್ ರಘು ಅವರು ಬಾಲ್ ಹಾಕುತ್ತಿದ್ದರು, ಈ ಸಮಯದಲ್ಲಿ ಬಲಗೈಗೆ ಬಾಲ್ ರಭಸವಾಗಿ ಬಿದ್ದಿದ್ದು, ನೋವುಂಟು ಮಾಡಿದೆ. ತಂಡದ ಆಪ್ತ ಸಮಾಲೋಚಕ ಪ್ಯಾಡಿ ಅಪ್ಟನ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಆಡಲು 2 ದಿನ ಮಾತ್ರ ಬಾಕಿ ಇದೆ.

 

 

 

About The Author