ವಿಜಯವಾಡ:ಹಲವು ದಿನಗಳಿಂದ ಭಿಕ್ಷೆ ಬೇಡುತಿದ್ದ ವಿಜಯವಾಡದ ಯಾದಿರೆಡ್ಡಿ ಎನ್ನುವ ಹಿರಿಯ ವ್ಯಕ್ತಿ ಕೆಲವು ದಿನಗಳ ಹಿಂದೆ ವಿಜಯವಾಡದ ಸಾಯಿಬಾಬ ದೇವಸ್ಥಾನಕ್ಕೆ 17 ಲಕ್ಷ ದೇಣಿಗೆಯನ್ನು ನೀಡಿದ್ದಾನೆ. ಯಾದಿ ರೆಡ್ಡಿ ಎನ್ನುವ ವ್ಯಕ್ತಿ ಹಲವು ವರ್ಷಗಳಿಂದ ಕೊದಂಡರಾಮ ಮತ್ತು ಸಾಯಿಬಾಬ ಹಾಗೂ ಕನಕದುರ್ಗ ದೇವಿ ದೇವಸ್ಥಾನಗಳ ಮುಂದೆ ಬಿಕ್ಷೇ ಬೇಡಿಕೊಂಡು ಜೀವನ ನಡೆಸುತಿದ್ದ ಇಷ್ಟು ದಿನಗಳ ಕಾಲ ತನಗೆ ಆಶ್ರಯ ನೀಡಿದ ದೇವಸ್ಥಾನಕ್ಕೆ ದೇಣಿಗೆ ನೀಡಿದ್ದಾನೆ
ಇನ್ನು ಈ ಯಾದಿರೆಡ್ಡಿಗೆ ಇಷ್ಟು ಹಣ ಎಲ್ಲಿಂದ ಬಂತು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಇವರು ತಲಂಗಾಣ ರಾಜ್ಯದ ನಲ್ಗೊಂಡ ಜಿಲ್ಲೆಯವರು ಚಿಕ್ಕ ವಯಸ್ಸಿನಲ್ಲಿಯೇ ತನ್ನ ತಂದೆ ತಾಯಿಯನ್ನು ಕಳೆದುಕೊಂಡಂತಹ ಯಾದಿರೆಡ್ಡಿ ಸಂಬಂಧಿಕರ ಮನೆಯಲ್ಲಿ ವಾಸಿಸುತಿದ್ದರಂತೆ, ಆದರೆ ಅಲ್ಲಿರಲಾಗದೆ ಗೂಡ್ಸ್ ರೈಲು ಹತ್ತಿ ವಿಜಯವಾಡಕ್ಕೆ ಬಂದರಂತೆ ಸ್ಥಳಿಯರ ನೆವಿನಿಂದ ಕೆಲ ದಿನಗಳ ಕಾಲ ದಿನಪತ್ರಿಕೆ ಮಾಡಿ ಜೀವನ ನಡೆಸಿದರಂತೆ ನಂತರ ಒಂದು ಆಟೋ ಕೊಂಡು ಅದರಿಂದ ಜೀವನ ನಡೆಸಿದರಂತೆ ನಂತರ ವಯಸ್ಸಾದಂತೆ ಕೆಲಸ ಮಾಡಲಾಗದೆ ಕೋದಂಡರಾಮ ದೇವಸ್ಥಾನದ ಮುಂದೆ ಭಿಕ್ಷೆ ಬೇಡಿ ಜೀವನ ನಡೆಸಿದನಂತೆ
ವಯಸ್ಸಾದ ಕಾರಣ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಹೋದಾಗ ನೀವು ಬಹಳ ದಿನ ಬದುಕುವುದಿಲ್ಲ ಯಅರಾದರೂ ಸಂಬಂಧಿಕರ ಮನೆಗೆ ಹೋಗಿ ಎಂದು ಸಲಹೆ ನೀಡಿದರಂತೆ ಆದರೆ ಎಲ್ಲಿಯೂ ಹೋಗದೆ ನ್ನಲ್ಲಿರುವ ದುಡ್ಡನ್ನು ಅನಾಥಾಶ್ರಮಗಳಿಗೆ ದೇವಸ್ಥಾನಗಳಿಗೆ ತೊಂದರೆಯಲ್ಲಿರುವವರಿಗೆ ಧನ ಸಹಅಯ ಮಾಡುತಿದ್ದಾರಂತೆ.
Jain sage: ಜೈನ್ ಮುನಿಗಳಿಗೆ ರಕ್ಷಣೆಯೇ ಇಲ್ಲ: ನ್ಯಾಯ ಸಿಗುವವರೆಗೂ ಸಲ್ಲೇಖನ ವ್ರತವೆಂದು ಕಣ್ಣೀರು…!