ಬೆಂಗಳೂರು: ಆರಂಭಿಕ ಬ್ಯಾಟರ್ ಶರತ್ (53) ಅವರ ಆಕರ್ಷಕ ಅರ್ಧ ಶತಕದ ನೆರೆವಿನಿಂದ ಶಿವಮೊಗ್ಗ ಸ್ಟ್ರೈಕರ್ಸ್ ತಂಡ ಮಹಾರಾಜ ಟಿ20 ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ 13 ರನ್ಗಳ ಗೆಲುವು ದಾಖಲಿಸಿತು. ಇದರೊಂದಿಗೆ ಶಿವಮೊಗ್ಗ ತಂಡ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು.
ಮೈಸೂರಿನ ಶ್ರೀಕಂಠದತ್ತ ಒಡೆಯರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮೈಸೂರು ಫೀಲ್ಡಿಂಗ್ ಆಯ್ದುಕೊಂಡಿತು. ಶಿವಮೊಗ್ಗ ಸ್ಟ್ರೈಕರ್ಸ್ ಪರ ರೋಹನ್ ಕದಾಮ್ (18), ಬಿ.ಆರ್. ಶರತ್ (53ರನ್) ಮೊದಲ ವಿಕೆಟ್ಗೆ 56 ರನ್ ಸೇರಿಸಿದರು. 18 ರನ್ ಗಳಿಸಿದ್ದ ರೋಹನ್, ಆಲ್ರೌಂಡರ್ ಶುಭಾಂಗ್ ಹೆಗಡೆಗೆ ಕಾಟ್ ಅಂಡ್ ಬೌಲ್ಡ್ ಆದರು. ವಿನಯ್ ಸಾಗರ್ 1 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಬಿರುಸಿನ ಬ್ಯಾಟಿಂಗ್ ಮಾಡಿದ ಶರತ್ 32 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. 6 ಬೌಂಡರಿ, 2 ಸಿಕ್ಸರ್ ಸಿಡಿಸಿದ ಶರತ್ ಒಟ್ಟು 53 ರನ್ ಗಳಿಸಿ ಶ್ರೇಯಸ್ ಗೋಪಾಲ್ಗೆ ವಿಕೆಟ್ ಒಪ್ಪಿಸಿದರು.
ಕೆ. ಸಿದ್ದಾರ್ಥ್ 36 ರನ್, ಸ್ಟಾಲಿನ್ ಹೂವರ್ 16, ಅವಿನಾಶ್ 25, ನಾಯಕ ಕೆ.ಗೌತಮ್ 6, ದರ್ಶನ್ ಅಜೇಯ 10 ರನ್ ಗಳಿಸಿದರು. ಶಿವಮೊಗ್ಗ ಸ್ಟ್ರೈಕರ್ಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ 174 ರನ್ ಗಳಿಸಿತು. ಮೈಸೂರು ತಂಡದ ಪರ ವಿದ್ಯಾಧರ್ ಪಾಟೀಲ್ 39ಕ್ಕೆ 3, ಆದಿತ್ಯ ಗೋಯಾಲ್ ಹಾಗು ಶುಭಾಂಗ್ ಹೆಗಡೆ ತಲಾ 2 ವಿಕೆಟ್ ಪಡೆದರು.
ಎಡವಿದ ಮೈಸೂರು ವಾರಿಯರ್ಸ್
175 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಮೈಸೂರು ತಂಡ ಆಘಾತಗಳ ಮೇಲೆ ಆಘಾತ ಅನುಭವಿಸಿತು. ನಾಯಕ ಕರುಣ್ ನಾಯರ್ (0), ಮತ್ತೊರ್ವ ಆರಂಭಿಕ ಬ್ಯಾಟರ್ ನಿಹಾಲ್ ಉಳ್ಳಾಲ್ 13, ಚಿರಂಜೀವಿ 0, ಶ್ರೇಯಸ್ ಗೋಪಾಲ್ 7, ಆಲ್ರೌಂಡರ್ ಶುಭಾಂಗ್ ಹೆಗಡೆ 13, ಎಲ್.ಅಯ್ಯಪ್ಪ ಅಜೇಯ 27 ರನ್ ಗಳಿಸಿದರು. ಆರನೆ ವಿಕೆಟ್ಗೆ ಪವನ್ ದೇಶಪಾಂಡೆ ಜೊತೆಗೂಡಿದ ಶಿವರಾಜ್ 36 ರನ್ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು.
19 ರನ್ಗಳಿಸಿದ್ದ ಶಿವರಾಜ್ ಉತ್ತಮ್ ಅಯ್ಯಪಾಗೆ ವಿಕೆಟ್ ಒಪ್ಪಿಸಿದರು. ಏಕಾಂಗಿ ಹೋರಾಟ ಮಾಡಿದ ಪವನ್ ದೇಶಪಾಂಡೆ 6 ಬೌಂಡರಿ 2 ಸಿಕ್ಸರ್ ನೆರೆವಿನಿಂದ 64 ರನ್ ಗಳಿಸಿ ದರ್ಶನ್ ಎಸೆತದಲ್ಲಿ ಬೌಲ್ಡ್ ಆದರು.
ಮೈಸೂರು ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಗಳಿಸುವಲ್ಲಿ ಮಾತ್ರ ಯಶಸ್ವಿಯಾಯಿತು. ಶಿವಮೊಗ್ಗ ಪರ ಉತ್ತಮ್ ಅಯ್ಯಪ್ಪ 35ಕ್ಕೆ 2, ಕೆ.ಗೌತಮ್ 22ಕ್ಕೆ 2, ದರ್ಶನ 44ಕ್ಕೆ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಶಿವಮೊಗ್ಗ ಸ್ಟ್ರೈಕರ್ಸ್ 174/8
ಶರತ್ 53, ಕೆ. ಸಿದ್ದಾರ್ಥ್ 36
ವಿದ್ಯಾಧರ್ ಪಾಟೀಲ್ 39ಕ್ಕೆ 3, ಶುಭಾಂಗ್ 19ಕ್ಕೆ2
ಮೈಸೂರು ವಾರಿಯರ್ಸ್ 161/8
ಪವನ್ ದೇಶಪಾಂಡೆ 64, ಅಪ್ಪಣ್ಣ ಅಜೇಯ 27
ಉತ್ತಮ್ ಅಯ್ಯಪ್ಪ 35ಕ್ಕೆ 2, ಕೆ.ಗೌತಮ್ 22ಕ್ಕೆ 2