Wednesday, June 18, 2025

Latest Posts

ಯುವ ಜನೋತ್ಸವ ಬಗ್ಗೆ ಸಿದ್ದು ವ್ಯಂಗ್ಯ

- Advertisement -

ಹುಬ್ಬಳ್ಳಿ ಏರ್ಪಡಿಸಿರುವ ಯುವ ಜನೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ  ನರೇಂದ್ರ ಮೋದಿ ಅವರು ಯುವಕರನ್ನು ಕುರಿತು  ವೇದಿಕೆಯ ಮೇಲೆ ಭಾಷಣ ಮಾಡಿದ್ದಾರೆ  ಇಂದು ಸ್ವಾಮಿ ವಿವೇಕಾನಂದರ ಜಯಂತಿಯ ನಿಮಿತ್ತ ಹುಬ್ಬಳ್ಳಿಗೆ ಮೋದಿ ಆಗಮಿಸಲಿದ್ದಾರೆ .

ಯುವಜನೋತ್ಸವ ವಿರುದ್ದ ಸಿದ್ದು ವ್ಯಂಗ್ಯ

ಮೋದಿಯವರ ಆಗಮನ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ರೀತಿ ವ್ಯಂಗ್ಯ ಮಾಡಿದ್ದಾರೆ.ಹುಬ್ಬಳ್ಳಿಯಲ್ಲಿ ನಡೆಸುತ್ತಿರುವುದು ಯುವ ಜನೋತ್ಸವ ಅಲ್ಲ . ಬದಲಿಗೆ ಯುವ ವಿನಾಶೋತ್ಸವ ಮಾಡುತ್ತಿದ್ದಾರೆ . ಪ್ರಧಾನಿಯವರು ಯಾವ ಮುಖ ಹೊತ್ತುಕೊಂಡು ರಾಜ್ಯಕ್ಕೆ ಪದೆ ಪದೇ ಬರುತ್ತಿದ್ದಾರೋ ಗೊತ್ತಿಲ್ಲ.

ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಭವಿಷ್ಯ ಹಾಳುಮಾಡುತ್ತಿದ್ದಾರೆ . ನಿರುದ್ಯೋಗ ಸಮಸ್ಯೆ ಉಂಟಾಗಿದೆ . ಸರ್ಕಾರಿ ಉದ್ಯೋಗ ಪಡೆದುಕೊಳ್ಳಬೇಕೆಂದರೆ ವಿದ್ಯಾರ್ಹತೆ ಒಂದೆ ಬೇಕಾಗಿಲ್ಲ. ಅದರ ಜೊತೆಗೆ ಆರ್ಥಿಕವಾಗಿ ಸದೃಡರಾಗಿರಬೇಕು ಏಕೆಂದರೆ ಉದ್ಯೋಗ ಪಡೆದುಕೊಳ್ಳಲು ಆಡಳಿತದ ನಾಯಕರಿಗೆ ಲಂಚ ಕೊಡಬೇಕು. ಹೀಗೆ ಒಂದಲ್ಲ ಎರಡಲ್ಲ ಯಾವುದೆ ಯೋಜನೆ ಸಾರ್ವಜನಿಕರು ಪಡೆದುಕೊಳ್ಳಬೇಕೆಂದರೆ  ಕಮಿಷನ್ ಕೊಡಲೇಬೇಕು ಇಷ್ಟೆಲ್ಲಾ ಸಮಸ್ಯೆ ಗಳು ಇದ್ದರೂ ಯುವ ಜನೋತ್ಸವ ಹೆಸರಿನಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ ನಿಜಕ್ಕೂ ಇದು ಯುವ ವಿನಾಶೋತ್ಸವ ಎಂದು ವ್ಯಂಗ್ಯವಾಡಿದ್ದರು

 

ಕಾಂತಾರಗೆ ನಾನು ಫಿದಾ..! – ನಟಿ ಶ್ರೀಲೀಲಾ

ಬಿಹಾರಿ ಹುಡುಗನ ಕನ್ನಡ ಪ್ರೇಮ..!

ನಟಿ ಐಶ್ವರ್ಯ ರೈ ಹೆಸರಲ್ಲಿ ನಕಲಿ ಪಾಸ್ ಪೋರ್ಟ್ ಬಳಕೆ ಮಾಡಿದ್ದ ವಿದೇಶಿಗರು ಪೊಲೀಸರ ವಶ

- Advertisement -

Latest Posts

Don't Miss