Thursday, June 19, 2025

Latest Posts

ದರ್ಶನ್​ ಉಳಿಸಲು ಹೋಮ ಮಾಡಿದ್ರೆ ತಪ್ಪೇನು? ಗಿರಿಜಾ ಲೋಕೇಶ್

- Advertisement -

ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳು ಬರುತ್ತಿದ್ದರೂ, ಒಂದು ಸಿನಿಮಾನೂ ಹಿಟ್​ ಆಗುತ್ತಿಲ್ಲ. ಕನ್ನಡ ಚಿತ್ರರಂಗದ ಒಳಿತು, ಸಂಕಷ್ಟ ನಿವಾರಣೆಗೆ ಸಂಕಲ್ಪ, ಕನ್ನಡ ಚಿತ್ರರಂಗದ ಏಳಿಗೆಗಾಗಿ ವಿಶೇಷ ಪೂಜೆ, ಗಣಪತಿ ಹೋಮ, ಮೃತ್ಯುಂಜಯ ಹೋಮ ಬಳಿಕ ಸರ್ಪ ಶಾಂತಿ ಹೋಮ ನಡಿದಿದೆ. 8 ಮಂದಿ ಪುರೋಹಿತರ ತಂಡದಿಂದ ನಡೆಸಲಾಗಿದ್ದ ವಿಶೇಷ ಹೋಮ ಹವನದಲ್ಲಿ ಇಡೀ ಕನ್ನಡ ಚಿತ್ರೋದ್ಯಮ ಭಾಗಿಯಾಗಿತ್ತು. ಈ ಮಧ್ಯೆ ದರ್ಶನ್ ಉಳಿಸಲು ‘ಹೋಮ’ಮಾಡಿದ್ರೆ ತಪ್ಪೇನು ಅಂತ ಹಿರಿಯ ನಟಿ ಗಿರಿಜಾ ಲೋಕೇಶ್ ಹೇಳಿದ ಮಾತು ಎಲ್ಲೆಡೆ ಚರ್ಚೆಗೆ ಗುರುಯಾಗಿದೆ.

ದೊಡ್ಡಣ್ಣ ಹಾಗೂ ಅವರ ಪತ್ನಿ ಈ ವಿಶೇಷ ಪೂಜೆಯನ್ನು ಉಡುಪಿಯ ಖ್ಯಾತ ಜ್ಯೋತಿಷಿ ಪ್ರಕಾಶ್ ಅಣ್ಣಮ್ಮಯ್ಯ ನೇತೃತ್ವದಲ್ಲಿ ನಡೆಸಿದ್ದಾರೆ. ಕಲಾವಿದರ ಸಂಘದಲ್ಲಿ ಹೋಮ-ಹವನ ಅನ್ನೋ ವಿಚಾರ ಹೊರಬೀಳ್ತಿದ್ದಂತೆ ಹಲವು ಊಹಾ ಪೋಹಗಳು ಕೇಳಿಬಂದವು. ಈ ಪೂಜೆಯನ್ನ ಪರಪ್ಪನ ಅಗ್ರಹಾರದಲ್ಲಿರೋ ನಟ ದರ್ಶನ್​ ಅವರಿಗಾಗಿ ಮಾಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ನಟ ದರ್ಶನ್ ಜೈಲಿನಿಂದ ಬಿಡುಗಡೆಯಾಗಲು ಇಂದು ಹೋಮ ನಡೆಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆಯಲ್ಲ ಎಂದಾಗ, ಇದರ ಮಧ್ಯೆ ದರ್ಶನ್ ಉಳಿಸಲು ‘ಹೋಮ’ ಮಾಡಿದ್ರೆ ತಪ್ಪೇನು ಅಂತ ಹಿರಿಯ ನಟಿ ಗಿರಿಜಾ ಲೋಕೇಶ್ ಹೇಳಿದ್ದಾರೆ. ಈಗ ದರ್ಶನ್ ಮೇಲೆ ಆರೋಪ ಬಂದಿದೆ ಅಂತ ಆತನನ್ನು ದೂರ ತಳ್ಳೋದು ತಪ್ಪು. ಆಳಿಗೊಂದು ಕಲ್ಲು ಹೊಡೆಯೋದು ಸರಿಯಲ್ಲ. ಇಡೀ ಸಮಗ್ರ ಇಂಡಸ್ಟ್ರಿ ಒಳಿತಿಗೆ ಮಾಡ್ತಿರೋ ಹೋಮ ಇದು. ನಟ ದರ್ಶನ್ ಕೂಡ ನಮ್ಮ ಚಿತ್ರರಂಗ ಕುಟುಂಬದ ಭಾಗ, ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಕೂಡ ಸಾಕಷ್ಟಿದೆ. ಒಬ್ಬ ಸ್ಪುರದ್ರೂಪಿ ನಟ ಈ ಮಟ್ಟಕ್ಕೆ ಬೆಳೆದು ಇಂದು ಯಾವುದೋ ಕೆಟ್ಟ ಘಳಿಗೆಯಲ್ಲಿ ಕ್ರೂರ ಮನಸ್ಥಿತಿ ತಂದು ಅವರ ಕೈಯಲ್ಲಿ ಕೆಟ್ಟ ಕೆಲಸ ಮಾಡಿಸಿರಬಹುದು. ಅವರಿಂದ ಅನೇಕರ ಜೀವನಕ್ಕೆ ದಾರಿಯಾಗಿದೆ. ಅನೇಕರಿಗೆ ಅವರು ಸಹಾಯ ಮಾಡಿದ್ದಾರೆ ಎಂದರು.

ತಮ್ಮ ಸಂಕಷ್ಟದಿಂದ ಹೊರಬಂದು ದರ್ಶನ್ ಮುಂದೆ ಉತ್ತಮ ಜೀವನ ನಡೆಸಬೇಕು ಎಂಬುದು ನಮ್ಮ ಆಶಯವಾಗಿದೆ. ಹಾಗಾಗಿ ಇಂದು ಪೂಜೆಯಲ್ಲಿ ನಟ ದರ್ಶನ್​ಗೂ ಒಳಿತಾಗಲಿ ಎಂದು ಬೇಡುವುದರಲ್ಲಿ ತಪ್ಪೇನಿದೆ ಎಂದು ಕೇಳಿದ್ರು.
ಹೋಮ ಹವನದ ನೇತೃತ್ವವನ್ನು ಚಿತ್ರರಂಗದ ಹಿರಿಯರಾದ ದೊಡ್ಡಣ್ಣ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ವಹಿಸಿಕೊಂಡಿದ್ದಾರೆ. ಇಂದಿನ ಹೋಮ ಹವನಕ್ಕೆ ವೈಯಕ್ತಿಕವಾಗಿ ಯಾರಿಗೂ ಆಹ್ವಾನ ನೀಡಿಲ್ಲ, ಇಡೀ ಕನ್ನಡ ಚಿತ್ರರಂಗದವರನ್ನು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ರಾಕ್ ಲೈನ್ ಮತ್ತು ದೊಡ್ಡಣ್ಣ ಕರೆದಿದ್ದರು. ಅಲ್ಲದೆ ಕೊಲೆ ಆರೋಪದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರ ಬಿಡುಗಡೆಗೆ ಈ ಹೋಮ-ಹವನ ನಡೆಯುತ್ತಿದೆ ಎಂಬ ಮಾತುಗಳೂ ಸಹ ಕೇಳಿಬಂತು. ಅದಕ್ಕೆ ರಾಕ್ ಲೈನ್ ಸ್ಪಷ್ಟನೆ ನೀಡಿ ದರ್ಶನ್ ಅವರಿಗೋಸ್ಕರ ಮಾಡಿದ್ದರೆ ನಾನು ನನ್ನ ಮನೆಯಲ್ಲಿ ಅಥವಾ ಅವರ ಮನೆಯಲ್ಲಿ ಮಾಡಿಸುತ್ತಿದ್ದೆ. ಕಲಾವಿದರ ಸಂಘದಲ್ಲಿ ಹೋಮ, ಹವನ ಮಾಡಿಸುತ್ತಿರಲಿಲ್ಲ ಎಂದಿದ್ದಾರೆ.

*ಸ್ವಾತಿ.ಎಸ್.

- Advertisement -

Latest Posts

Don't Miss