Sunday, July 6, 2025

Latest Posts

ನವರಾತ್ರಿಯಲ್ಲಿ ಬನ್ನಿ ಮರದ ಪೂಜೆಯ ವಿಶೇಷ … !

- Advertisement -

Navaratri special:

ನವರಾತ್ರಿ ಹಬ್ಬದಲ್ಲಿ ನವದುರ್ಗೆಯರ ಆರಾಧನೆ ಜೊತೆಯಲ್ಲಿ ವಿಶೇಷವಾಗಿ ಬನ್ನಿ ಮರದ ಪೂಜೆಯನ್ನು ಮಾಡಲಾಗುತ್ತದೆ , ಬನ್ನಿ ಮರಕ್ಕೆ ರಾಮಾಯಣ ಮಹಾಭಾರತದಿಂದಲೂ ಅದ್ದರದ್ದೇ ಆದ ಮಹತ್ವವಿದೆ .ನವರಾತ್ರಿ ಹಬ್ಬ ಬಂದರೆ ಸಾಕು ಖಂಡದೀಪದ ಆರಾಧನೆ ಜೊತೆಗೆ , ಬನ್ನಿಮರದ ಆರಾಧನೆ ಮಾಡುತ್ತಾರೆ .

ಹಾಗಾದರೆ ಯಾವ ಕಾರಣಕ್ಕಾಗಿ ಬನ್ನಿಮರದ ಪೂಜೆ ಮಾಡಲಾಗುತ್ತದೆ ಎನ್ನುವುದು ಹಲವಾರು ಜನರಿಗೆ ತಿಳಿದಿರುವುದಿಲ್ಲ ,ಯಾವುದೇ ಪೂಜೆ ಮಾಡುವ ಮೊದಲು ಪೂಜೆಯ ಬಗ್ಗೆ ತಿಳಿದುಕೊಂಡು ಪೂಜೆ ಮಾಡಿದರೆ ಫಲಿತಾಂಶ ಸಂಪೂರ್ಣವಾಗಿ ಸಿಗುತ್ತದೆ.ಬನ್ನಿ ಮರಕ್ಕೆ ಪೂಜೆ ಮಾಡುವುದರಿಂದ ನಮ್ಮ ಕಷ್ಟಗಳು ಪರಿಹಾರವಾಗುತ್ತದೆ ಹಾಗು ಸಂತಾನವಿಲ್ಲದವರಿಗೆ ಮರವನ್ನು ಪೂಜಿಸಿದರೆ ಸಂತಾನವಾಗುತ್ತದೆ ಎಂಬ ನಂಬಿಕೆ ದೆ ಹಾಗು ಮಾದುವೆ ಯಾಗದ ಹುಡುಗ ಅಥವಾ ಹುಡುಗಿಗೆ ಕಂಕಣಭಾಗ್ಯ ಕೂಡಿ ಬರಲಿ ಎಂದು ಬನ್ನಿ ಮರಕ್ಕೆ ಪೂಜೆ ಸಲ್ಲಿಸುತ್ತಾರೆ .
ಕೆಲವರಂತು ನವರಾತ್ರಿ ಹಬ್ಬದಲ್ಲಿ ಪೂಜೆಯನ್ನು ಒಂಬತ್ತು ದಿನಗಳು ತಪ್ಪದೆ ಆಚರಣೆ ಮಾಡುತ್ತಾರೆ.

ಹಾಗಾದರೆ ಪೂಜೆ ಯಾವರೀತಿ ಮಾಡಬೇಕು ?
ಬನ್ನಿ ಪಾತ್ರವನ್ನು ಬಂಗಾರಕ್ಕೆ ಹೋಲಿಕೆ ಮಾಡುತ್ತಾರೆ , ನವರಾತ್ರಿಯ ಒಂಬತು ದಿನಗಳು ಸೂರ್ಯೋದಯಕ್ಕೆ ಮುಂಚೆ ಮರಕ್ಕೆ ಪೂಜೆ ಸಲ್ಲಿಸಬೇಕಾಗುತ್ತದೆ , ಪೂಜೆಗೆ ಬೇಕಾಗುವ ಸಾಮಗ್ರಿಗಳನ್ನು ಹಿಂದಿನ ದಿನವೇ ಸಿದ್ದತೆ ಮಾಡಿಕೊಳ್ಳಬೇಕು . ಮೊದಲು ಬನ್ನಿ ಮರವನ್ನು ಸ್ವಲ್ಪ ನ್ನೀರಲ್ಲಿ ತೊಳೆದು ಹರಷಿನ ,ಕುಂಕುಮ ಹಚ್ಚಬೇಕು , ನಂತರ ತಾಂಬೂಲಾ ಇಟ್ಟು ತುಪ್ಪದ ದೀಪಾರಾಧನೆ ಮಾಡಿದರೆ ಒಳ್ಳೆಯದು ,ದೀಪ ಹಚ್ಚುವಾಗ ನೀವು ಯಾವ ಕಾರಣ ದಿಂದ ಪೂಜೆ ಮಾಡುತ್ತಿದ್ದೀ ಎಂದು ಸಂಕಲ್ಪ ಮಾಡಿಕೊಳ್ಳಬೇಕು ,ಯಾವುದೇ ರೀತಿಯ ತೊಂದರೆಗಳಿದ್ದರೂ ನವರಾತ್ರಿಯ ದಿನ ಮರಕ್ಕೆ ಪೂಜೆ ಸಲ್ಲಿಸಿದರೆ ಖಂಡಿತ ಪರಿಹಾರ ವಾಗುತ್ತದೆ ಪೂಜೆ ಮುಗಿದ ನಂತರ ಮರಕ್ಕೆ ಅಥವಾ ಸುತ್ತು ಮರದ ಸುತ್ತ ಸುತ್ತಬೇಕು .ಹೀಗೆ ಒಂಬತ್ತು ದಿನಗಳು ಮಾಡಬೇಕು ಒಂಬತ್ತನೇ ದಿನ ಏನಾದರೂ ಪ್ರಸಾದ ಮಾಡಿ , ಮುತೈದೆಯರಿಗೆ ಅರಿಶಿನ, ಕುಂಕುಮ ಕೊಟ್ಟು ಪ್ರಸಾದ ಕೊಟ್ಟು ಆಶೀರ್ವಾದ ಪಡೆದುಕೊಳ್ಳ ಬೇಕು ವಿಜದಶಮಿಯ ನಂತರ ಬನ್ನಿ ಪಾತ್ರವನ್ನು ಮನೆಗೆ ತೆಗೆದುಕೊಂಡು ಬಂದು ಮನೆಯಲ್ಲಿ ಪೂಜೆ ಮಾಡಿದರೆ ನಮ್ಮ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎನ್ನೋದು ನಂಬಿಕೆಯಾಗಿದೆ .

ನವರಾತ್ರಿಯಲ್ಲಿ ಉಪವಾಸ ಮಾಡುವುದರಿಂದ ಪ್ರಯೋಜನಗಳೇನು…?

ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅರಳಿ ಮರದಲ್ಲಿದೆ ಪರಿಹಾರ…!

ಯಮಧರ್ಮರಾಜನನ್ನೇ ಹಿಮ್ಮೆಟ್ಟಿಸಿದ ಶಕ್ತಿಯುತವಾದ ಮಂತ್ರ..!

 

- Advertisement -

Latest Posts

Don't Miss