Karkala News : ಆಂಗ್ಲ ಭಾಷೆ ಸಂವಹನ ತರಬೇತಿಯು ಉದ್ಯೋಗ ಗಳಿಸಲು ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲು ಅವಶ್ಯಕ ಎಂದು ಕೆನರಾ ಬ್ಯಾಂಕ್ ಕಾರ್ಕಳ ಶಾಖೆಯ ಪ್ರಬಂಧಕ ಬಾಗ್ಬತ್ ಮಝಿ ಹೇಳಿದರು.
ಅವರು ಕಾರ್ಕಳ ಎಂ.ಪಿ.ಎಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತಿಚೆಗೆ ನಡೆದ ಸ್ಪೋಕನ್ ಇಂಗ್ಲಿಷ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಕಿರಣ್.ಎಂ ವಹಿಸಿದ್ದು, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಡಾ. ವಿದ್ಯಾಧರ್ ಹೆಗ್ಡೆ, ಸಂಪನ್ಮೂಲ ವ್ಯಕ್ತಿ ಸ್ಟ್ಯಾನಿಸ್ಲೋಸ್ ರೆಬೆಲ್ಲೊ, ಐಕ್ಯೂಎಸಿ ಸಂಚಾಲಕಿ ಸುಷ್ಮಾ ರಾಂ.ಕೆ, ಕಾರ್ಯಕ್ರಮದಲ್ಲಿ ಗ್ರಂಥಪಾಲಕ ವೆಂಕಟೇಶ್, ಸಹಾಯಕ ಪ್ರಾದ್ಯಾಪಕ ಮೈತ್ರಿ.ಬಿ, ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು. ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾದ್ಯಾಪಕ ನವೀನ್ ಸ್ವಾಗತಿಸಿದರು. ಕು. ಕೃತಿ, ಕು.ರಕ್ಷಿತ, ಕು.ಅನನ್ಯ ಅತಿಥಿಗಳನ್ನು ಪರಿಚಯಿಸಿದರು, ಕು.ಪೂರ್ಣಿಮ ಕಾರ್ಯಕ್ರಮ ನಿರೂಪಿಸಿ, ನಿರ್ವಹಣಾ ಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಕೆ.ಸಿ ವಂದಿಸಿದರು.
Dr.MS Mooditthaya : ಉದ್ಯೋಗ ಸೃಷ್ಟಿಯಲ್ಲಿ ಬಹಳಷ್ಟು ಯೋಜನೆಗಳು ರೂಪಿಸಬೇಕಿದೆ : ಡಾ.ಎಂ.ಎಸ್.ಮೂಡಿತ್ತಾಯ
Mukyamantri chandru: ಬಿಬಿಎಂಪಿ ಕಚೇರಿ ಅಗ್ನಿ ಅವಘಡ ಆಕಸ್ಮಿಕವಲ್ಲ, ಅನುಮಾನಸ್ಪದವಾಗಿದೆ:
Prabhakar Kulal : ಯುವ ಜನತೆ ನಮ್ಮ ನೆಲದ ಸಂಸ್ಕೃತಿ ಅರಿತುಕೊಳ್ಳುವಂತಾಗಬೇಕು : ಪ್ರಭಾಕರ ಕುಲಾಲ್