Sunday, September 8, 2024

Latest Posts

ಪಾಂಡುವಿಗೆ ಯಾರ ಶಾಪದಿಂದ ಮಕ್ಕಳಾಗಲಿಲ್ಲ..? ಕುಂತಿಗೆ ಮಕ್ಕಳು ಪಡೆಯುವ ವರ ಕೊಟ್ಟವರ್ಯಾರು..?

- Advertisement -

ಕುಂತಿಭೋಜ ಏರ್ಪಡಿಸಿದ್ದ ಸ್ವಯಂವರದಲ್ಲಿ ಮಹಾಬಲನಾದ, ತೇಜಸ್ಸಿನಿಂದ ಕೂಡಿದ್ದ ಪಾಂಡುರಾಜನನ್ನು ಕುಂತಿದೇವಿ ವರಿಸುತ್ತಾಳೆ. ಕುಂತಿಯನ್ನು ಮದುವೆಯಾದ ಬಳಿಕ ಪಾಂಡುರಾಜ ಮಾದ್ರಿಯನ್ನ ಕೂಡ ವರಿಸುತ್ತಾನೆ. ಹೀಗೆ ತನ್ನ ಪತ್ನಿಯರೊಡನೆ ಸುಖವಾಗಿ ಸಂಸಾರ ಮಾಡುತ್ತಿದ್ದ ಪಾಂಡು ಕುಂತಿ ಮತ್ತು ಮಾದ್ರಿಯೊಂದಿಗೆ ಒಮ್ಮೆ ಬೇಟೆಗೆಂದು ಕಾಡಿಗೆ ಬರುತ್ತಾನೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಸುಂದರ ಕಾನನದಲ್ಲಿ ಹಾಯಾಗಿ ಓಡಾಡಿಕೊಂಡಿದ್ದ ಎರಡು ಜಿಂಕೆಗಳು ಪಾಂಡುವಿನ ಕಣ್ಣಿಗೆ ಬೀಳುತ್ತದೆ. ಆ ಎರಡು ಜಿಂಕೆಯನ್ನು ಹಿಂಬಾಲಿಸಿಕೊಂಡು ಬಂದ ಪಾಂಡುರಾಜ, ಅವೆರಡು ಜಿಂಕೆ ರತಿ ಸುಖ ಅನುಭಿವಸುತ್ತಿದ್ದ ಸಂದರ್ಭದಲ್ಲೇ ಗುರಿಯಿಟ್ಟು ಬಾಣ ಬಿಡುತ್ತಾನೆ. ಆ ಬಾಣ ತಾಗಿದ ಜಿಂಕೆಗಳು ತಮ್ಮ ನಿಜರೂಪ ತಾಳುತ್ತದೆ. ಆ ಜಿಂಕೆಗಳು ಋಷಿ ಮತ್ತು ಅವನ ಪತ್ನಿಯಾಗಿರುತ್ತಾಳೆ.

ಪಾಂಡುವಿನ ಮೇಲೆ ಸಿಟ್ಟಾದ ಋಷಿ, ನಮ್ಮ ರತಿಕ್ರೀಡೆ ಮುಗಿದ ಬಳಿಕ ನೀನು ನ್ನಮ್ಮನ್ನು ಹೊಡೆಯಬಹುದಿತ್ತು. ಆದ್ರೆ ನಾನು ರತಿಸುಖ ಅನುಭವಿಸುವಾಗ ನೀನು ನಮ್ಮನ್ನು ಕೊಲ್ಲಲು ಯತ್ನಿಸಿದ್ದಿಯಾ. ನೀನು ಕೂಡ ರತಿ ಸುಖ ಅನುಭವಿಸುವ ಸಂದರ್ಭದಲ್ಲೇ ನಿನಗೆ ಸಾವು ಬರಲಿ ಎಂದು ಶಾಪ ಹಾಕಿ ಇಬ್ಬರೂ ಜೀವ ಬಿಡುತ್ತಾರೆ.

ಇದಾದ ಬಳಿಕ ಅರಮನೆಯನ್ನು ತ್ಯಜಿಸಿದ ಕುಂತಿ ಮತ್ತು ಮಾದ್ರಿ ಮತ್ತು ಪಾಂಡು ರಾಜ ಅರಣ್ಯದಲ್ಲಿ ವಾಸ ಮಾಡತೊಡಗಿದರು. ಮಕ್ಕಳಾಗದಿದ್ದರೆ ಎಷ್ಟು ಅಪಮಾನವಾಗುತ್ತದೆ. ಧೃತರಾಷ್ಟ್ರನಿಗೆ ನೂರು ಮಕ್ಕಳ ವರವಿದೆ. ನನಗೆ ಒಂದೂ ಮಗುವಾಗದಿದ್ದರೆ, ರಾಜ್ಯದ ಜನ ನನ್ನ ಬಗ್ಗೆ ಏನೆಂದುಕೊಂಡಾರು ಎಂದೆಲ್ಲ ಚಿಂತಿಸುತ್ತ, ಕುಂತಿಯ ಬಳಿ ತನ್ನ ನೋವನ್ನು ಹೇಳಿಕೊಳ್ಳುತ್ತಾನೆ.

ಆಗ ಕುಂತಿ, ದುರ್ವಾಸ ಮುನಿಗಳು ನನಗೆ ಸಂತಾನಭಾಗ್ಯಕ್ಕೆ ಬೇಕಾದ ಮಂತ್ರವನ್ನು ಹೇಳಿದ್ದಾರೆ. ಆ ಮಂತ್ರ ಪಠಿಸಿದರೆ, ಬೇಕಾದ ದೇವತೆಗಳು ಬಂದು ನಮಗೆ ಪುತ್ರರನ್ನು ನೀಡುತ್ತಾರೆ ಎನ್ನುತ್ತಾಳೆ. ಇದಕ್ಕೆ ಪಾಂಡು ರಾಜ ಸಮ್ಮತಿಸಿದ್ದು, ಯಮನಿಂದ ಯುಧಿಷ್ಠಿರ, ವಾಯುವಿನಿಂದ ಭೀಮ ಮತ್ತು ಇಂದ್ರನಿಂದ ಅರ್ಜುನನ್ನು ಪಡೆಯುತ್ತಾಳೆ. ಮಾದ್ರಿಗೂ ಕೂಡ ಈ ಮಂತ್ರ ಹೇಳಿಕೊಟ್ಟು, ಅವಳು ಅಶ್ವಿನಿ ದೇವತೆಗಳಿಂದ ನಕುಲ ಸಹದೇವರನ್ನ ಪಡೆಯುವಂತೆ ಮಾಡುತ್ತಾಳೆ.

ಕೆಲ ವರ್ಷಗಳ ಬಳಿಕ ಪಾಂಡು ಮತ್ತು ಮಾದ್ರಿ, ವಾಯು ವಿಹಾರಕ್ಕೆಂದು ಹೋಗುತ್ತಾರೆ. ಅಲ್ಲಿ ಮಾದ್ರಿಯೆಡೆಗೆ ಪಾಂಡು ಆಕರ್ಷಿತನಾಗುತ್ತಾನೆ. ಈ ಸಂದರ್ಭದಲ್ಲಿ ರತಿಕ್ರೀಡೆ ನಡೆಸುವಾಗ ಪಾಂಡು ಸಾವನ್ನಪ್ಪುತ್ತಾನೆ. ಪಾಂಡುವಿನ ಸಾವಿನಿಂದ ದುಃಖಿತಳಾದ ಮಾದ್ರಿ ಸತಿ ಸಹಗಮನದ ಪದ್ಧತಿ ಮೂಲಕ ಪ್ರಾಣತ್ಯಾಗ ಮಾಡುತ್ತಾಳೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

- Advertisement -

Latest Posts

Don't Miss