Friday, June 20, 2025

Latest Posts

ಟ್ರ್ಯಾಕ್ಟರ್ ಏರಿ ಸಂಸಾರ ನೊಗ ಹೊತ್ತ ವಿದ್ಯಾರ್ಥಿನಿ

- Advertisement -

www.karnatakatv.net : ರಾಯಚೂರು: ಈ ಯುಗದಲ್ಲಿಕಾಲೇಜ್ಗೆ ಹೋಗಿ ಎಂಜಾಯಿಮಡುವವರೆ ಹೆಚ್ಚು. ಅದರೆಇಲೋಬ್ಬಯುವತಿಓದಿನಲ್ಲೂಸೈ,  ಕೃಷಿಗೂಜೈಎಂದುಕುಟುಂಬನಿರ್ವಹಣೆಮಾಡಿಯುವತಿಯರಿಗೆಆದರ್ಶವಾಗಿದಳೆ. ಕೈಯಲ್ಲಿ ಪುಸ್ತಕ ಹಿಡಿಯಬೇಕಾದ ಹುಡುಗಿ ಟ್ರ್ಯಾಕ್ಟರ್ ಸ್ಟೆರಿಂಗ್ ಹಿಡಿದು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಳೆ.. ಯಾರಪ್ಪ ಈಕೆ ಅಂತೀರ… ಈಕೆಯ ಹೆಸರು ಹುಲಿಗೆಮ್ಮ ಅಂತ.. ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಜಕ್ಕಲದಿನ್ನಿ ಗ್ರಾಮದ ಯುವತಿ. ಡಿಗ್ರಿ ಮೊದಲ ವರ್ಷ ಮುಗಿಸಿ ೨ ನೇ ವರ್ಷ ಕ್ಕೆ ಕಾಲು ಇಡಬೇಕು ಎನ್ನುವಸ್ಟರಲ್ಲಿ  ತಂದೆ  ಅನಾರೋಗ್ಯ ದಿಂದ ಸಾವಿಗಿಡಾಗಿದ್ದರು. ಆದರೆ ಕುಟುಂಬ ನಿರ್ವಹಣೆ ‌ಗಾಗಿ ಹುಲಿಗೆಮ್ಮ ತಮ್ಮ ಸ್ವಂತ ಜಮೀನಿನಲ್ಲಿ  ಕೆಲಸ  ಮಾಡಲು ಮುಂದಾಗಿದ್ದಳು. ಹೊಲದಲ್ಲಿ ಬಿತ್ತನೆ ಮಾಡುವುದು , ಕುಂಟೆ ಹೊಡೆಯುವುದು , ರಸಗೊಬ್ಬರ ಹಾಕುವುದು , ಕಸ ತೆಗೆಯುವುದು , ಮಾಡುತ್ತಿದ್ದಳು . ತಮ್ಮ ಸ್ವಂತ ೩ ಎಕರೆ ಜೊತೆ ೧೫ ಎಕರೆ ಹೊಲವನ್ನೂ ಲೀಜಿಗೆ ಪಡೆದು ಮುಂಗಾರು  ಬಿತ್ತನೆಯಲ್ಲಿ ತೊಡಗಿದ್ದಾಳೆ. ಹುಲಿಗೆಮ್ಮ ತಂದೆ ಕಳೆದ ೨ ವರ್ಷಗಳ ಹಿಂದೆ ಪರ್ಶುವಾಯು ರೋಗಕ್ಕೆ ತುತ್ತಾಗಿದ್ದರು. ಆದರೆ ಹುಲಿಗೆಮ್ಮ  ಮನೆಯ ಹಿರಿಯ ಮಗಳಾಗಿದ್ದರಿಂದ  ಮನೆಯ ಜವಬ್ದಾರಿ  ಹೆಚ್ಚಾಗುತ್ತಲೇ ಬಂತು..  ಆದ್ದರಿಂದ ತಾನೂ ಹೊಲದಲ್ಲಿ ಕೆಲಸ ಮಾಡುತ್ತ ಕುಟುಂಬಕ್ಕೆ  ಆಧಾರ  ಸ್ತಂಭವಾಗಿ ನಿಂತುಕೊಳ್ತಾಳೆ.   ತನ್ನ  ಅಕ್ಕನನ್ನು ಅಗ್ರಿ ವಿಶ್ವವಿದ್ಯಾಲಯದಲ್ಲಿ  ಬಿಟೆಕ್ ಅಗ್ರಿ   ಓದಿಸಲು ಮುಂದಾಗಿದ್ದಾಳೆ. ಅವಳ ಧೈರ್ಯದಿಂದಲೆ  ನಾವು ವಿದ್ಯಾಭ್ಯಾಸ ಮಾಡಲು ಸಾಧ್ಯ ಅಂತಾಳೆ ಉಲಿಗೆಮ್ಮನ ಅಕ್ಕ  . ತಮ್ಮ ಮಗಳ ಕಷ್ಟಕ್ಕೆ ತಾಯಿ ಕೂಡ ಮಗಳಿಗೆ ಸಾತ್ ನಿಡುತ್ತಿದ್ದಾಳೆ. ಹೊಲದ ಮೇಲೆ ಸಾಲ ಪಡೆಯಲಾಗಿತ್ತು.  ಆದರೆ ಬ್ಯಾಂಕಿನಲ್ಲಿ  ಎಲ್ಲರ  ಸಾಲ ಮನ್ನ ಆಗಿದೆ..  ನಮ್ಮ ಹೊಲದ ಸಾಲ ಮಾತ್ರ ಹಾಗೆ ಇದೆ. ಏನು‌ಮಾಡಬೇಕೋ ತೋಚುತ್ತಿಲ್ಲ. ಸಾಲ ಹೇಗೆ ತೀರಿಸೋದು ಎಂಬ ಕೊರಗು ತಾಯಿಗೆ ಕಾಡುತ್ತಿತ್ತು. ಅದರೆ ಈ ಹೆಣ್ಣು ಮಗಳು ಮನೆಯ ಜವಾಬ್ದಾರಿ ಹೊತ್ತು ದುಡಿದು, ಕುಟುಂಬ ನಿರ್ವಹಣೆ ಮಾಡಿ ಜನರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ .

- Advertisement -

Latest Posts

Don't Miss