- Advertisement -
political news
ಬೆಂಗಳೂರು(ಫೆ.15): ಬಿಹಾರದಲ್ಲಿ ಬಜರಂಗದಳದ ಕಾರ್ಯಕರ್ತರ ಮೇಲೆ ಪೊಲಿಸರು ಲಾಠಿ ಚಾರ್ಜ್ ಮಾಡಿದ್ದಾರೆ, ಈ ಘಟನೆಯಲ್ಲಿ 12 ಮಂದಿ ಜನ ಗಾಯಗೊಂಡಿದ್ದು, ಇನ್ನೂ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿರುವುದು ಕಂಡುಬಂದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಪ್ರಕರಣದ ಬಗ್ಗೆ ಹೇಳೋದಾದ್ರೆ, ನಳಂದದ ಬಿಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಅಂಬರ್ ಚೌಕ್ ಬಳಿಯ ಹನುಮಾನ್ ದೇವಸ್ಥಾನದಲ್ಲಿ ಭಜರಂಗಬಲಿಯ ಆರತಿಯನ್ನು ನಡೆಸಲಾಯಿತು. ಈ ವೇಳೆ ಬಿಹಾರ ಪೊಲೀಸ್ ಠಾಣೆಯ ಪೊಲೀಸರು ಬಜರಂಗದಳದ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ ಎನ್ನಲಾಗಿದೆ.
ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿದ್ದ ವೇಳೆ, ಪೊಲೀಸರ ಮೇಲೆ ಭಜರಂಗದಳದ ನಾಯಕರು ಏಕಾಏಕಿ ಕಿರಿಕಾಡಿದ್ದಾರೆ, ಈ ವೇಳೆ ಅಕ್ಕ ಪಕ್ಕ ಇರುವ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ.
- Advertisement -