Sunday, September 8, 2024

Latest Posts

ಗೋಕುಲ್‍ ದಾಸ್‍ ಗಾರ್ಮೆಂಟ್ಸ್ ಕಾರ್ಖಾನೆಯ ಬಗ್ಗೆ ಆತಂಕ ಹೊರಹಾಕಿದ ಸಂಸದೆ ಸುಮಲತಾ..

- Advertisement -

ಮಂಡ್ಯ: ಶ್ರೀರಂಗಪಟ್ಟಣದ ಯುರೋ ಕ್ಲಾಥಿಂಗ್‍ ಗಾರ್ಮೆಂಟ್ಸ್ ಕಂಪೆನಿ ಒಡೆತನದ ಗೋಕುಲ್‍ ದಾಸ್‍ ಗಾರ್ಮೆಂಟ್ಸ್ ಕಾರ್ಖಾನೆಯು ಕೋವಿಡ್‍-19 ಕೊರೊನಾ ಕಾರಣದಿಂದಾಗಿ ಏಕಾಏಕಿ ಲೇ-ಆಫ್‍ ಘೋಷಣೆ ಮಾಡಿದೆ. ಈ ಬಗ್ಗೆ ಸಂಸದೆ ಸುಮಲತಾ ಅಂಬರೀಷ್ ಫೇಸ್‌ಬುಕ್ ಪೇಜ್‌ನಲ್ಲಿ ಆತಂಕ ಹೊರಹಾಕಿದ್ದಾರೆ.

ಶ್ರೀರಂಗಪಟ್ಟಣದ ಯುರೋ ಕ್ಲಾಥಿಂಗ್‍ ಗಾರ್ಮೆಂಟ್ಸ್ ಕಂಪೆನಿ ಒಡೆತನದ ಗೋಕುಲ್‍ ದಾಸ್‍ ಗಾರ್ಮೆಂಟ್ಸ್ ಕಾರ್ಖಾನೆಯು ಕೋವಿಡ್‍-19 ಕೊರೊನಾ ಕಾರಣದಿಂದಾಗಿ ಏಕಾಏಕಿ ಲೇ-ಆಫ್‍ ಘೋಷಣೆ ಮಾಡಿದೆ.

https://youtu.be/VgMi86sGmAg

ಹೀಗಾಗಿ ಅಲ್ಲಿನ ಕಾರ್ಮಿಕರು ಆತಂಕಗೊಂಡಿದ್ದಾರೆ. ವಜಾಗೊಳಿಸಿರುವ 1370ಕ್ಕೂ ಹೆಚ್ಚು ಕಾರ್ಮಿಕರ ಜೀವನ ಬೀದಿಗೆ ಬರುವಂತಾಗಿದೆ. ಅವರ ಸಂಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ಈಗಾಗಲೇ ನಾನು ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಶಿವರಾಮ್‍ ಹೆಬ್ಬಾರ್ ಅವರಿಗೆ ಜೂನ್‍ 10 ರಂದು ಪತ್ರದ ಮೂಲಕ ವಿನಂತಿ ಮಾಡಿಕೊಂಡಿದ್ದೇನೆ.

ಆರ್ಥಿಕ ಪರಿಸ್ಥಿತಿ ಕುಸಿದಿರುವ ಹಿನ್ನೆಲೆಯಲ್ಲಿ ಕಾರ್ಮಿಕ ವಲಯ ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಹೀಗಾಗಿ ಕೂಡಲೇ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್‍.ಯಡಿಯೂರಪ್ಪನವರು ಮತ್ತು ಕಾರ್ಮಿಕ ಸಚಿವರಾದ ಶ್ರೀ ಶಿವರಾಮ್ ಹೆಬ್ಬಾರ್ ಅವರು ಮಧ್ಯೆ ಪ್ರವೇಶಿಸಿ, ಕಾರ್ಮಿಕರಿಗೆ ಆಗಿರುವ ಸಮಸ್ಯೆ ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ತಮ್ಮಲ್ಲಿ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

- Advertisement -

Latest Posts

Don't Miss