Wednesday, August 20, 2025

Darshan

Darshan Case: ಕಾರಾಗೃಹದಲ್ಲಿದ್ರೂ ‘ಕಾಟೇರ’ನಿಗೆ ಕಂಟಕ.. 3 ಎಫ್​ಐಆರ್​ನಲ್ಲೂ ದರ್ಶನ್​ಗೆ ಖಾಕಿ ಶಾಕ್!

ಬೆಂಗಳೂರು: ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್​ (Actor Darshan)ಗೆ ಇದೀಗ ಮತ್ತೊಂದು ಕಂಟಕ ಶುರುವಾಗಿದೆ. ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್​ಗೆ ರಾಜಾತಿಥ್ಯ ನೀಡಿದ ಪ್ರಕರಣ ಸಂಬಂಧ ಈವರೆಗೂ ಒಟ್ಟು ಮೂರು ಪ್ರತ್ಯೇಕ ಎಫ್​ಐಆರ್​ಗಳು ದಾಖಲಾಗಿವೆ.   ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ ಕೊಟ್ಟ ದೂರಿನನ್ವಯ ನಟ ದರ್ಶನ್, ವಿಲ್ಸನ್ ಗಾರ್ಡನ್...

Siddaramaiah : ತಪ್ಪಿತಸ್ಥ ಅಧಿಕಾರಿಗಳು ಕೂಡಲೇ ಅಮಾನತು- ಸಿಎಂ

ಪರಪ್ಪನ‌ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಮತ್ತಿತರರಿಗೆ ರಾಜಾತಿಥ್ಯ ಒದಗಿಸುತ್ತಿರುವ ಪ್ರಕರಣದ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಸೂಚಿಸಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.   https://youtu.be/mZCal8lu6YM?si=EbcmnphAECLhvYha ದರ್ಶನ್ ಮತ್ತು ಇತರರನ್ನು ಕೂಡಲೇ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆ ಹಾಗೂ ಕಾರಾಗೃಹಕ್ಕೆ ಭೇಟಿ ನೀಡಿ...

ಮುರಿದುಬಿತ್ತಾ ಪವಿತ್ರಾ-ದರ್ಶನ್ ಸಂಬಂಧ? ಕೊಲೆಯಲ್ಲಿ ಒಗ್ಗಟ್ಟು! ಕಾನೂನು ಹೋರಾಟ ಮಾತ್ರ ಪ್ರತ್ಯೇಕ!!

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೈಲು ಸೇರಿರುವ ಎಲ್ಲಾ ಹದಿನೇಳು ಆರೋಪಿಗಳು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಆದರೆ, ಇದೀಗ ಒಬ್ಬೊಬ್ಬರೇ ಕಾನೂನು ಹೋರಾಟಕ್ಕೆ ಇಳಿದಿದ್ದಾರೆ. ಮೊದಲು ಪವಿತ್ರಾಗೌಡ ಅವರು ದರ್ಶನ್ ಅವರಿಗಿಂತ ಮೊದಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಅವರು ಎ1 ಆರೋಪಿ. ಅವರಿಂದಲೇ ರೇಣುಕಾಸ್ವಾಮಿ ಅವರ ಕೊಲೆಯಾಗಿದೆ ಎಂಬ ಮಾತುಗಳು ಕೇಳಿಬಂದಿವೆ....

ದರ್ಶನ್​ ಉಳಿಸಲು ಹೋಮ ಮಾಡಿದ್ರೆ ತಪ್ಪೇನು? ಗಿರಿಜಾ ಲೋಕೇಶ್

ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳು ಬರುತ್ತಿದ್ದರೂ, ಒಂದು ಸಿನಿಮಾನೂ ಹಿಟ್​ ಆಗುತ್ತಿಲ್ಲ. ಕನ್ನಡ ಚಿತ್ರರಂಗದ ಒಳಿತು, ಸಂಕಷ್ಟ ನಿವಾರಣೆಗೆ ಸಂಕಲ್ಪ, ಕನ್ನಡ ಚಿತ್ರರಂಗದ ಏಳಿಗೆಗಾಗಿ ವಿಶೇಷ ಪೂಜೆ, ಗಣಪತಿ ಹೋಮ, ಮೃತ್ಯುಂಜಯ ಹೋಮ ಬಳಿಕ ಸರ್ಪ ಶಾಂತಿ ಹೋಮ ನಡಿದಿದೆ. 8 ಮಂದಿ ಪುರೋಹಿತರ ತಂಡದಿಂದ ನಡೆಸಲಾಗಿದ್ದ ವಿಶೇಷ ಹೋಮ ಹವನದಲ್ಲಿ ಇಡೀ...

ರೇಣುಕಾಸ್ವಾಮಿ ಹತ್ಯೆ ಎ4 ಆರೋಪಿಯ ತಾಯಿ ಸಾವು

ಚಿತ್ರದುರ್ಗ: ರೇಣುಕಾಸ್ವಾಮಿಯ ಹತ್ಯೆ ಪ್ರಕರಣದ ಎ4 ಆರೋಪಿ ರಾಘವೇಂದ್ರ ಅಲಿಯಾಸ್ ರಘು ತಾಯಿ ಸಾವನ್ನಪ್ಪಿದ್ದಾರೆ.. ಆರೋಪಿಯ ತಾಯಿ ಮಂಜುಳಮ್ಮ ಇಂದು ಬೆಳಗ್ಗೆ ನಿಧನರಾಗಿದ್ದಾರೆ.. ಚಿತ್ರದುರ್ಗದ ಕೋಳಿಬುರುಜನಹಟ್ಟಿ ಮನೆಯಲ್ಲಿ ಮಂಜುಳಮ್ಮ ಕೊನೆಯುಸಿರೆಳೆದಿದ್ದಾರೆ..  ಬಂಧನಕ್ಕೂ ಮುಂಚೆಯೇ ರಘು ಪ್ರೇಮ ವಿವಾಹವಾಗಿ ಮನೆಯಿಂದ ಹೊರಗಿದ್ದರು..ಈ ಹಿನ್ನೆಲೆ ಮಂಜುಳಮ್ಮ ಅವರನ್ನು ರಾಘವೇಂದ್ರ ಸಹೋದರ ನೋಡಿಕೊಳ್ಳುತ್ತಿದ್ರು.. ಇದೀಗ ವಯೋಸಹಜ ಕಾಯಿಲೆಯಿಂದ ಮಂಜುಳಮ್ಮ ನಿಧನರಾಗಿದ್ದಾರೆ.. ಇತ್ತ ದರ್ಶನ್...

2027ರವರೆಗೂ ಚಾಲೆಂಜಿಂಗ್ ಸ್ಟಾರ್​​​​ಗೆ ಜೈಲು ಫಿಕ್ಸ್!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಾಲೆಜಿಂಗ್ ಸ್ಟಾರ್​ ದರ್ಶನ್​ ಹೆಸರು ಕೇಳಿ ಬಂದಾಗಿನಿಂದ ಎಲ್ಲೆಲ್ಲು ಅವರದ್ದೆ ಸುದ್ದಿ.. ಇದು ಸಾಧ್ಯನಾ.. ನಿಜನಾ ಅನ್ನುವ ಗೊಂದಲ ಎಲ್ಲರಲ್ಲಿಯೂ ಇದ್ದೆ ಇದೆ.. ಆದ್ರೆ ಇದಕ್ಕೆ ಅವರ ಗ್ರಹಗತಿ ಸರಿಯಿಲ್ಲ ಅದಕ್ಕೆ ಈಗೆ ಆಗಿದೆ ಅಂತ ಕೆಲವರು ಹೇಳುತ್ತಿದ್ದಾರೆ.. https://youtu.be/GXQIvyojk2w?si=DIzfbvFrdjmN7HcO ಆಗಿದ್ರೆ ದರ್ಶನ್​ ಅವರ ಭವಿಷ್ಯ ಹೇಗಿದೆ ಅವರಿಗೆ ಈ ಸಮಸ್ಯೆ...

ದರ್ಶನ್‌ ನಟನೆಯ ಶಾಸ್ತ್ರಿ ರೀ ರಿಲೀಸ್‌ಗೆ ಫ್ಯಾನ್ಸ್‌ ಜೈಹೋ

ನಟ ದರ್ಶನ್‌ ಅತ್ತ ರೇಣುಕಾಸ್ವಾಮಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನ ಎದುರಿಸುತ್ತಿದ್ದಾರೆ. ಇತ್ತ, ಅವರ ಅಭಿನಯದ ಶಾಸ್ತ್ರಿ ಸಿನಿಮಾ ಇದೀಗ ಮರುಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ಶುಕ್ರವಾರ ಜು.12 ರಂದು ರಾಜ್ಯಾದ್ಯಂತ ಸಿನಿಮಾ ಮರುಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆ ಆಗಿದ್ದೇ ತಡ, ಅವರ ಅಭಿಮಾನಿ ವರ್ಗ ಚಿತ್ರಮಂದಿರದ ಮುಂದೆ ಸಾಲುಗಟ್ಟಿ ಟಿಕೆಟ್‌ ಖರೀದಿಸಿ ಸಿನಿಮಾ...

ನನ್ನ ಮಗ ತಪ್ಪು ಮಾಡಿಲ್ಲ.. ದರ್ಶನ್ ಪರ ಸುಮಲತಾ ಬ್ಯಾಟಿಂಗ್

ಕೊಲೆ ಆರೋಪದಲ್ಲಿ ದರ್ಶನ್‌ ಬಂಧನವಾಗಿ ಮೂರು ವಾರಗಳೇ ಕಳೆದರೂ, ಮೌನವಾಗಿದ್ದ ಸುಮಲತಾ ಅವರು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. https://youtu.be/mW0vdMe-fJQ?si=bAkny84lPXWI135- "ನಾನು 44 ವರ್ಷಗಳಿಂದ ನಟಿಯಾಗಿ, ಕಲಾವಿದೆಯಾಗಿ ಸಾರ್ವಜನಿಕ ಜೀವನದಲ್ಲಿದ್ದೇನೆ ಮತ್ತು ಕಳೆದ 5 ವರ್ಷಗಳಿಂದ ಸಂಸದೆಯಾಗಿದ್ದೆ. ಅಲ್ಲದೇ, ನಾನು ಕಲಾವಿದೆಯಾಗಿ, ಪತ್ನಿಯಾಗಿ ಮತ್ತು ತಾಯಿಯಾಗಿ ಅಥವಾ ಸಂಸದೆಯಾಗಿ ಮತ್ತು ಒಂದು ವ್ಯಕ್ತಿಯಾಗಿ ನನ್ನ ಜೀವನದಲ್ಲಿ ಪ್ರತಿಯೊಂದು ಜವಾಬ್ದಾರಿಯನ್ನು...

ದರ್ಶನ್ ನನ್ನ ಹಿರಿಯ ಮಗ- ಸುಮಲತಾ ಮೊದಲ ಪ್ರತಿಕ್ರಿಯೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದು, ನಟಿ ಸುಮಲತಾ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಇನ್​ಸ್ಟಾಗ್ರಾಂನಲ್ಲಿ ಎರಡು ಪುಟಗಳ ಪತ್ರವನ್ನು ಹಂಚಿಕೊಂಡಿದ್ದಾರೆ.. ನಾನು 44 ವರ್ಷಗಳಿಂದ ನಟಿಯಾಗಿ, ಕಲಾವಿದೆಯಾಗಿ ಸಾರ್ವಜನಿಕ ಜೀವನದಲ್ಲಿದ್ದೇನೆ ಮತ್ತು ಕಳೆದ 5 ವರ್ಷಗಳಿಂದ ಸಂಸದೆಯಾಗಿದ್ದೆ. ಅಲ್ಲದೇ, ನಾನು ಕಲಾವಿದೆಯಾಗಿ, ಹೆಂಡತಿಯಾಗಿ ಮತ್ತು ತಾಯಿಯಾಗಿ ಅಥವಾ...

Darshan: ಜೈಲಿಂದಲೇ ಜಾಮೀನಿಗೆ ಬೇಡಿಕೆ ಇಟ್ರಾ ನಟ ದರ್ಶನ್!

ಬೆಂಗಳೂರು: ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರು ಜೈಲು ಪಾಲಾಗಿದ್ದಾರೆ. ದರ್ಶನ್ ಜೈಲಿನಲ್ಲಿ 11 ದಿನಗಳನ್ನು ಕಳೆದಿದ್ದಾರೆ. ನಿದ್ದೆ ಬರದ ರಾತ್ರಿಗಳನ್ನು ಸುಟ್ಟಿದ್ದಾರೆ. ನೆಮ್ಮದಿ ಇರದ ಹಗಲನ್ನು ಕಳೆದಿದ್ದಾರೆ. ಅವರನ್ನು ಕಾಣಲು ಈಗಾಗಲೇ ಅವರ ಪತ್ನಿ, ಪುತ್ರ, ತಾಯಿ ಮತ್ತು ಸಹೋದರ ಹೋಗಿ ಸಮಾಧಾನ ಹೇಳಿದ್ದಾಗಿದೆ. ಯಾರು ಎಷ್ಟೇ ಸಮಾಧಾನದ...
- Advertisement -spot_img

Latest News

ಒಳಮೀಸಲಾತಿಗೆ ಗ್ರೀನ್ ಸಿಗ್ನಲ್ – ಕಾಂಗ್ರೆಸ್, ಬಿಜೆಪಿ ಯಾರಿಗೆ ಲಾಭ?

ದಶಕಗಳ ಹೋರಾಟದ ನಂತರ ಪರಿಶಿಷ್ಟ ಜಾತಿಯೊಳಗಿನ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ...
- Advertisement -spot_img