Tuesday, October 14, 2025

health tips

ಸುಂದರ ಕೇಶರಾಶಿಗಾಗಿ ಅನುಸರಿಸಿ ಈ 10 ಸೂತ್ರಗಳನ್ನ..

ಮುಖ ಎಷ್ಟೇ ಅಂದವಿದ್ದರೂ, ಆ ಅಂದವನ್ನ ಇಮ್ಮಡಿಗೊಳಿಸೋಕ್ಕೆ ದಟ್ಟವಾದ ಕೂದಲಿಂದ ಮಾತ್ರ ಸಾಧ್ಯ. ಆದ್ರೆ ಈಗಿನ ಕಾಲದಲ್ಲಿ ಕೂದಲನ್ನ ದಟ್ಟವಾಗಿ ಇರಿಸೋದೇ ದೊಡ್ಡ ಚಾಲೆಂಜ್. ಇಂದಿನ ಕಾಲದ ಯುವಕ ಯುವತಿಯರ ದೊಡ್ಡ ಸಮಸ್ಯೆ ಎಂದರೆ ಕೂದಲುದುರುವ ಸಮಸ್ಯೆ. ದೇಹದಲ್ಲಿ ವಿಟಮಿನ್ ಕೊರತೆ, ನೀರಿನ ಸಮಸ್ಯೆ, ಹೀಗೆ ಅನೇಕ ಸಮಸ್ಯೆಯಿಂದ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ. ...

ಟೀ ಟೈಮ್ ಸ್ನ್ಯಾಕ್ಸ್ ಅವಲಕ್ಕಿ ಚಿವ್ಡಾ ರೆಸಿಪಿ

ಅವಲಕ್ಕಿ ಚೂಡಾ, ಇದನ್ನ ಬೆಳಗ್ಗಿನ ಉಪಹಾರ ಜೊತೆಗೂ ತಿನ್ನಬಹುದು, ಟೀ ಟೈಮ್ ಸ್ನ್ಯಾಕ್ಸ್ ಆಗಿಯೂ ತಿನ್ನಬಹುದು. ಉತ್ತರಕರ್ನಾಟಕದ ಜನ ಬೆಳಿಗ್ಗೆ ಉಪ್ಪಿಟ್ಟು- ಅವಲಕ್ಕಿ ಜೊತೆ ಚೂಡಾ ಇದ್ರೆನೇ ಮಜಾ ಅಂತಾರೆ. ಮದುವೆ ಮುಂಜಿ ಕಾರ್ಯಕ್ರಮದಲ್ಲಿ ಬೆಳಗ್ಗಿನ ಉಪಹಾರದ ಜೊತೆ ಅವಲಕ್ಕಿ ಅಥವಾ ಚುರ್ಮುರಿ ಚೂಡಾ ಇದ್ರೇನೆ ಕಾರ್ಯಕ್ರಮದ ತಿಂಡಿ ಕಂಪ್ಲೀಟ್ ಇದ್ದಂಗೆ. ಹಾಗಾದ್ರೆ ಇನ್ಯಾಕೆ...

ಜೇನುತುಪ್ಪದಲ್ಲಿದೆ ಚಮತ್ಕಾರಿ ಔಷಧಿಯ ಗುಣ

ನಿಸರ್ಗದಿಂದ ಸಿಕ್ಕ ಉಡುಗೊರೆಗಳಲ್ಲಿ ಜೇನುತುಪ್ಪವೂ ಒಂದು. ಭಾರತದಲ್ಲಿ ಜೇನುತುಪ್ಪಕ್ಕೆ ಧಾರ್ಮಿಕ ಪ್ರಾಮುಖ್ಯತೆ ನೀಡಲಾಗಿದೆ. ಪೂಜಾ ಕೈಂಕರ್ಯಗಳಲ್ಲಿ, ದೇವರಿಗೆ ಅಭಿಶೇಕ ಮಾಡುವ ಸಂದರ್ಭದಲ್ಲಿ, ಪ್ರಸಾದ ತಯಾರಿಸುವಾಗ ಜೇನುತುಪ್ಪವನ್ನ ಬಳಸಲಾಗುತ್ತದೆ. ಇನ್ನು ಆಯುರ್ವೇದದ ಔಷಧಿಗಳನ್ನ ಸೇವಿಸುವಾಗ ಅದರೊಟ್ಟಿಗೆ ಜೇನುತುಪ್ಪವನ್ನ ಬಳಸಲಾಗುತ್ತದೆ. ಜೇನುತುಪ್ಪ ಆರೋಗ್ಯಕರವಷ್ಟೇ ಅಲ್ಲದೇ, ಸೌಂದರ್ಯಕರವೂ ಹೌದು. ಹಾಗಾದ್ರೆ ಜೇನುತುಪ್ಪ ಬಳಕೆಯಿಂದಾಗುವ ಲಾಭಗಳೇನು ನೋಡೋಣ...

ನಿಮ್ಮ ಸೌಂದರ್ಯ ಇಮ್ಮಡಿಗೊಳಿಸುತ್ತೆ ಸ್ಟೀಮಿಂಗ್..!

ಮಹಿಳಾ ಮಣಿಯರು ತ್ವಚೆಯ ಸಮಸ್ಯೆ ಕಂಡುಬಂದಾಗ ಮನೆಮದ್ದು ಬಳಸಿ ಫೇಸ್‌ಪ್ಯಾಕ್, ಫೇಶಿಯಲ್ ಮಾಡಿಕೊಳ್ತಾರೆ. ಆದ್ರೆ ಇದಕ್ಕೂ ಮೊದಲು ಸ್ಟೀಮ್ ತೆಗೆದುಕೊಂಡರೆ ನೀವು ಉತ್ತಮ ಲಾಭ ಪಡೆದುಕೊಳ್ಳಬಹುದು. ಸ್ಟೀಮ್ ತೆಗೆದುಕೊಂಡಾಗ ತ್ವಚೆಯ ರಂಧ್ರಗಳು ತೆರೆದುಕೊಳ್ಳುತ್ತದೆ. ಇದರಿಂದ ಮುಖದ ಕೊಳೆ ಹೊರಹೋಗಿ , ಚರ್ಮ ಸ್ವಚ್ಛವಾಗುತ್ತದೆ. ಹೀಗಾಗಿ ನೈಸರ್ಗಿಕವಾಗಿ ಫೇಸ್‌ಪ್ಯಾಕ್, ಬ್ಲೀಚಿಂಗ್ ಬಳಸುವುದರ ಜೊತೆಗೆ ಸ್ಟೀಮ್ ಮಾಡುವುದಿಂದ...

ಚಿನ್ನದಂಥ ಗುಣವುಳ್ಳ ಗೋಲ್ಡನ್ ಮಿಲ್ಕ್ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ..?

ಗೋಲ್ಡನ್ ಮಿಲ್ಕ್. ಅಂದ್ರೆ ಚಿನ್ನದ ಹಾಲು ಕುಡಿಯುವುದರಿಂದ ನಿಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಅಲ್ಲದೇ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಅರೆ, ಇದೇನಿದು ಚಿನ್ನದ ಹಾಲು..? ಕಾಸ್ಟ್‌ಲೀ ಹಾಲಾ ಅಂತಾ ಶಾಕ್ ಆಗ್ಬೇಡಿ. ಚಿನ್ನದ ಹಾಲು ಅಂದ್ರೆ ಅರಿಶಿನ ಹಾಲು. ಇದರೊಂದಿಗೆ ಕೆಲ ಮಸಾಲೆ ಪದಾರ್ಥಗಳನ್ನ ಸೇರಿಸುತ್ತಾರೆ. ಹಾಗಾಗಿ ಇದು ಚಿನ್ನದಂಥ ಆರೋಗ್ಯ ಗುಣಗಳನ್ನ ಹೊಂದಿರುವುದರಿಂದ ಇದನ್ನ...

ನೆನೆಸಿಟ್ಟ ಶೇಂಗಾ ಸೇವನೆಯಿಂದಾಗುವ ಲಾಭಗಳೇನು..?

ನೆನೆಸಿದ ಬಾದಾಮಿ ಹೇಗೆ ಆರೋಗ್ಯಾಭಿವೃದ್ಧಿಗೆ ಸಹಾಯವೋ ಅದೇ ರೀತಿ ನೆನೆಸಿದ ಶೇಂಗಾ ತಿನ್ನುವುದರಿಂದಲೂ ಹಲವು ಆರೋಗ್ಯಕರ ಲಾಭಗಳಿದೆ. ಹಾಗಾದ್ರೆ ನೆನೆಸಿಟ್ಟ ಶೇಂಗಾ ತಿನ್ನುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ. 1.. ಮಧುಮೇಹದಿಂದ ದೂರವಿರಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಶೇಂಗಾ ಸೇವಿಸಿ. ಇದರಿಂದ ಬ್ಲಡ್ ಶುಗರ್ ಲೆವಲ್ ಕಂಟ್ರೋಲಿನಲ್ಲಿರುತ್ತದೆ. 2..ನೆನೆಸಿಟ್ಟ ಶೇಂಗಾ ಸೇವನೆಯಿಂದ ಸಂಧಿವಾತದ...

ಸ್ಕ್ರಬಿಂಗ್ ಮಾಡಿದ್ರೆ ನಿಮ್ಮ ಮುಖದ ಮೇಲಾಗುವ ಪರಿಣಾಮಗಳೇನು..? ಹೇಗೆ ಮಾಡೋದು..?

ಫೇಸ್ ಪ್ಯಾಕ್, ಫೇಸ್ ಮಾಸ್ಕ್, ಫೇಶಿಯಲ್ ಇವೆಲ್ಲದರ ಜೊತೆಗೆ ಸ್ಕ್ರಬಿಂಗ್ ಕೂಡ ತ್ವಚೆಯ ಅಂದ ಕಾಪಾಡುವುದರಲ್ಲಿ ಸಹಕಾರಿಯಾಗಿದೆ. ಸ್ಕ್ರಬಿಂಗ್ ಮಾಡುವುದರಿಂದ ನಿಮ್ಮ ಮುಖದ ಮೇಲಿನ ಡೆಡ್ ಸೆಲ್ಸ್ ತೊಲಗಿ ಹೊಸ ಸೆಲ್ಸ್ ಉತ್ಪತ್ತಿಯಾಗುತ್ತದೆ. ಸ್ಕ್ರಬಿಂಗ್ ನಂತರ ನಿಮ್ಮ ಮುಖ ಸಾಫ್ಟ್ ಆಗುವುದಲ್ಲದೇ, ರಿಫ್ರೆಶ್ ಆಗಿರತ್ತೆ. ಸ್ಕ್ರಬಿಂಗ್ ಮಾಡುವುದರಿಂದ ನಿಮ್ಮ ಮುಖದ ಮೇಲಿನ ಜಿಡ್ಡು ತನ,...

ಬಾಳೆಹಣ್ಣು ತಿಂದ್ರೆ ತೂಕ ಹೆಚ್ಚುತ್ತಾ..? ತೂಕ ಇಳಿಯುತ್ತಾ..?: ಇಲ್ಲಿದೆ ನೋಡಿ ಉತ್ತರ..

ದಪ್ಪಗಿದ್ದವರು ಸಣ್ಣಗಾಗೋಕ್ಕೆ, ಸಣ್ಣಗಿದ್ದವರು ದಪ್ಪಗಾಗೋಕ್ಕೆ ಏನೇನೆಲ್ಲಾ ಮಾಡ್ತಾರೆ. ಈ ಎರಡೂ ಕಾರಣಕ್ಕೆ ಜಿಮ್‌ ಸೇರ್ತಾರೆ. ಮಾರ್ಕೆಟ್‌ನಲ್ಲಿ ಸಿಗೋ ಪ್ರಾಡಕ್ಟ್‌ಗಳನ್ನೆಲ್ಲ ಬಳಕೆ ಮಾಡ್ತಾರೆ. ಆದ್ರೆ ಆ ಪ್ರಾಡೆಕ್ಟ್‌ಗಳಿಂದಾಗುವ ಎಫೆಕ್ಟ್‌ಗಳಿಗಿಂತ ಸೈಡ್ ಎಫೆಕ್ಟ್‌ಗಳೇ ಹೆಚ್ಚು. ಇನ್ನು ಅದು ತಿಂದ್ರೆ ದಪ್ಪಗಾಗ್ತಾರಾ..? ಇದು ತಿಂದ್ರೆ ಸಣ್ಣ ಆಗ್ತಾರಾ ಅಂತಾ ಎಲ್ಲ ಆಹಾರಗಳ ಮೇಲೆ ಪ್ರಶ್ನೆ ಉದ್ಭವಿಸುತ್ತಿರುತ್ತೆ. ಇವುಗಳಲ್ಲಿ...

ಬಿಸಿ ನೀರಿನ ಸ್ನಾನ ಹಿತವೆನಿಸಿದರೂ ಆರೋಗ್ಯಕ್ಕೆ ಹಾನಿಕಾರಕ..!

ಬೇಸಿಗೆಯಲ್ಲಿ ಬಿಸಿಲಿನ ದಾಹ ತಡಿಯಲಾಗದೇ ಧಾರಾಳವಾಗಿ ತಣ್ಣೀರಿನ ಸ್ನಾನ ಮಾಡುವವರು, ಮಳೆಗಾಲ, ಚಳಿಗಾಲ ಬಂತೆಂದರೆ ಅಗತ್ಯಕ್ಕೂ ಹೆಚ್ಚಿನ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡುತ್ತಾರೆ. ತಂಪಿನ ವಾತಾವರಣದಲ್ಲಿ ಬಿಸಿ ನೀರಿನ ಸ್ನಾನ ಹಿತವೆನಿಸಿದರೂ ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗಿದೆ. ಬಿಸಿ ನೀರಿನ ಸ್ನಾನ ಮಾಡುವುದರಿಂದ ಆಗುವ ದುಷ್ಪರಿಣಾಮಗಳೇನು..? 1.. ಬಿಸಿ ನೀರಿನ ಸ್ನಾನದಿಂದ ಹೃದಯಸಂಬಂಧಿ ಖಾಯಿಲೆ...

ತುಪ್ಪ ತಿನ್ನುವುದರಿಂದ ದೇಹದ ಮೇಲಾಗುವ ಪರಿಣಾಮಗಳೇನು ಗೊತ್ತಾ..?

ಆಯುರ್ವೇದದಲ್ಲಿ ತುಪ್ಪಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹಲವು ಆಯುರ್ವೇದ ಔಷಧಿಗಳನ್ನು ಸಹ ತುಪ್ಪದಲ್ಲಿ ಹುರಿಯಲಾಗುತ್ತದೆ. ಆದರೆ ತುಪ್ಪವನ್ನು ಕರಿಯಲು ಅಥವಾ ಹುರಿಯಲು ಬಳಸುವುದಕ್ಕಿಂತ ಹಾಗೇ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಇನ್ನು ತುಪ್ಪ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತಾ..? ಕಮ್ಮಿಯಾಗುತ್ತಾ ಎನ್ನುವ ಪ್ರಶ್ನೆ ಹಲವರಲ್ಲಿ ಮೂಡಿದೆ. ಆಯುರ್ವೇದದ ಪ್ರಕಾರ ತುಪ್ಪ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿದೆ....
- Advertisement -spot_img

Latest News

ಯತ್ನಾಳ್ ಒಪ್ಪಿದರೆ ಶಿವಸೇನೆಗೆ ಎಂಟ್ರಿ ಖಚಿತ!

ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ...
- Advertisement -spot_img