Thursday, March 12, 2026

Mysore Dasara 2025

485 ತಂಡಗಳ ವೈಭವ : ದಸರಾ ಯುವ ಸಂಭ್ರಮಕ್ಕೆ ತೆರೆ!!

ಮೈಸೂರು:ಸಾವಿರಾರು ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸಿ, ಯುವ ಮನಸ್ಸುಗಳಿಗೆ ಮನರಂಜನೆಯ ರಸದೌತಣ ನೀಡಿದ ಯುವ ಸಂಭ್ರಮಗೆ ಗುರುವಾರ ಅದ್ದೂರಿ ತೆರೆ ಬಿದ್ದಿತು. ಕೊನೆಯ ದಿನವೂ ಬಯಲು ರಂಗಮಂದಿರ ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿಕೊಂಡಿತ್ತು. ಸಾಂಸ್ಕೃತಿಕ ಪರಂಪರೆ, ದೇಶಭಕ್ತಿ, ಅಂಬಾರಿ ಆನೆ, ದಸರಾ ವೈಭವ, ಆರೋಗ್ಯ, ಜನಕೇಂದ್ರಿತ ಜೀವನ, ಪರಿಸರ ಸಂರಕ್ಷಣೆಯಲ್ಲಿ ಯುವಜನರ ಪಾತ್ರ, ಪೌರಾಣಿಕ...

ದಸರಾ ಉದ್ಘಾಟನೆ ವಿವಾದ ಸುಪ್ರೀಂನಲ್ಲೂ ಬಾನುಗೆ ಜಯ!

ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ, ಬೂಕರ್‌ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್‌ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ. ಇದರಿಂದ ಬಾನು ಮುಷ್ತಾಕ್‌ ಅವರ ಭಾಗವಹಿಸುವಿಕೆಗೆ ಸಂಬಂಧಿಸಿದ ಕಾನೂನು ತೊಡಕುಗಳೆಲ್ಲವೂ ಬಹುತೇಕ ನಿವಾರಣೆಯಾಗಿವೆ. ಇದಕ್ಕೂ ಮೊದಲು ಹೈಕೋರ್ಟ್ ಕೂಡ ಇದೇ ಅರ್ಜಿಯನ್ನು ವಜಾ ಮಾಡಿದ್ದನ್ನು ಸ್ಮರಿಸಬಹುದು. ಮೈಸೂರು–ಕೊಡಗು...

ದಸರಾಗೂ ಕಾಲ್ತುಳಿತ ಬಿಸಿ ರಾಜಕಾರಣಿಗಳ ಕೈಗೆ ಪಾಸ್!

ಈ ಬಾರಿಯ ದಸರಾದಲ್ಲಿ ಬನ್ನಿಮಂಟಪದಲ್ಲಿ ವಾರಪೂರ್ತಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಆದರೆ ಜಿಲ್ಲಾಡಳಿತವು ಪ್ರತಿಯೊಂದು ಕಾರ್ಯಕ್ರಮಕ್ಕೂ ಪಾಸ್ ಕಡ್ಡಾಯಗೊಳಿಸಿರುವುದರಿಂದ ಸಾರ್ವಜನಿಕರಿಗೆ ಪ್ರವೇಶ ಸಿಗುವುದು ಕಷ್ಟ ಎನ್ನಲಾಗುತ್ತಿದೆ. ಈ ಬಾರಿ ನಾಲ್ಕು ದಿನ ಡ್ರೋನ್ ಶೋ, ಪಂಜಿನ ಕವಾಯತು ಹಾಗೂ ವೈಮಾನಿಕ ಪ್ರದರ್ಶನಗಳು ವಿಶೇಷ ಆಕರ್ಷಣೆ ಆಗಲಿವೆ. ಇದುವರೆಗೆ ಪಂಜಿನ ಕವಾಯತು ಹೊರತುಪಡಿಸಿ ಇತರ ಕಾರ್ಯಕ್ರಮಗಳಿಗೆ ಉಚಿತ...

ಸುಪ್ರೀಂಕೋರ್ಟ್‌ ಕಟಕಟೆಗೆ ಬಾನು ಮುಷ್ತಾಕ್ ವಿರೋಧಿ ಹೋರಾಟ

ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ದಿನಗಣನೆ ಇರುವಂತೆ, ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಆದರೆ, ಉದ್ಘಾಟಕರಾಗಿ ಆಯ್ಕೆಯಾಗಿರುವ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಕುರಿತು ವಿವಾದ ಮುಂದುವರಿದಿದೆ. ಈ ಹಿಂದೆ ಹೈಕೋರ್ಟ್‌ನಲ್ಲಿ ಈ ವಿಚಾರದ ಮೇಲೆ ಸಲ್ಲಿಸಲಾದ ಅರ್ಜಿಗಳನ್ನು ವಜಾಗೊಳಿಸಿ, ಸರ್ಕಾರದ ನಿರ್ಧಾರದಲ್ಲಿ ಯಾವುದೇ...

13 ಭಾಗಗಳಲ್ಲಿ ವಿಸರ್ಜನೆ : ಮೈಸೂರು ಸಿಂಹಾಸನದ ಅಚ್ಚರಿಯ ಕಥೆ

ಮೈಸೂರು ಅರಮನೆ ದರ್ಬಾರ್ ಹಾಲಿನಲ್ಲಿ ಇಂದು ನವರಾತ್ರಿ ಪೂಜಾ ಕೈಂಕರ್ಯದ ಅಂಗವಾಗಿ ರತ್ನ ಖಚಿತ ಸ್ವರ್ಣ ಸಿಂಹಾಸನವನ್ನು ಜೋಡಿಸಲಾಯಿತು. ಮಹಾರಾಣಿ ಪ್ರಮೋದಾದೇವಿ ಒಡೆಯರ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಮತ್ತು ಗೆಜ್ಜೆಗಳ್ಳಿಯ ನಿಪುಣರು ಈ ಕಾರ್ಯವನ್ನು ನೆರವೇರಿಸಿದರು. ಇದಕ್ಕೂ ಮುನ್ನ ಗಣಪತಿ ಹೋಮ, ಚಾಮುಂಡಿ ದೇವಿಯ ಪೂಜೆ ಹಾಗೂ ಹವನಗಳನ್ನು ನಡೆಸಲಾಗಿದ್ದು, ನಂತರ ಭದ್ರತಾ ಕೊಠಡಿಯಲ್ಲಿದ್ದ...

ದಸರಾ ಜಂಬೂ ಸವಾರಿ ವೀಕ್ಷಣೆಗೆ ಹಳೆಯ ಕಟ್ಟಡಗಳಿಗೆ ಬೀಗ!

ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ದಿನ ಅರಮನೆಯಿಂದ ಬನ್ನಿಮಂಟಪ ಮೈದಾನವರೆಗೆ ಸಾಗುವ ಮಾರ್ಗದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ವಿಶೇಷ ಕ್ರಮ ಕೈಗೊಳ್ಳಲಾಗಿದೆ. ನಗರದ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ರಸ್ತೆ ಎರಡೂ ಬದಿಯ ಹಳೆಯ ಹಾಗೂ ಶಿಥಿಲ ಕಟ್ಟಡಗಳು, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಪರಿಶೀಲಿಸಿತು. ಕಟ್ಟಡ ಮಾಲೀಕರಿಗೆ ಕಟ್ಟಡಗಳ ಮೇಲ್ಛಾವಣಿ, ಟೆರೆಸ್,...

ಬಾನು ಮುಷ್ತಾಕ್ ಗೆ ಯತ್ನಾಳ್ ಸವಾಲ್!

ದಸರಾ ಮಹೋತ್ಸವ ಉದ್ಘಾಟನೆಯ ಕುರಿತು ಹೊಸ ವಿವಾದವೊಂದು ಮೈಸೂರು ರಾಜಕೀಯ ವಲಯದಲ್ಲಿ ಭುಗಿಲೆದ್ದಿದೆ. ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೂರ್ತಿ ಪೂಜೆ ಮಾಡುವವರು ಇಸ್ಲಾಂ ಪ್ರಕಾರ ಕಾಫೀರರು. ಇಸ್ಲಾಂ ಮೂರ್ತಿ...
- Advertisement -spot_img

Latest News

Health Tips: ತುಂಬಾ ತಲೆ ನೋವು ಇದೆಯಾ! ಮೈಯಲ್ಲ ತಣ್ಣಗಾದ್ರೆ LOW BP?

Health Tips: ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯಿಂದಾಗಿ ಯುವ ಪೀಳಿಗೆಯವರಲ್ಲಿಯೇ ಹೆಚ್ಚು ಬಿಪಿ, ಶುಗರ್‌ ರೋಗಗಳನ್ನು ನೋಡುತ್ತಿದ್ದೇವೆ. ಹಾಗಾದ್ರೆ ಲೋ ಬಿಪಿ ಬರಲು ಕಾರಣಗಳೇನು..? ಅದರ ಲಕ್ಷಣಗಳೇನು...
- Advertisement -spot_img