Friday, November 28, 2025

theft

K.R ಪೇಟೆ ತಾಲೂಕಿನಲ್ಲಿ ಕಳ್ಳರ ಹಾವಳಿ : ದೇಗುಲ–ಮನೆ–ಅಂಗಡಿ ಎಲ್ಲೆಡೆ ಕಳ್ಳತನ!

ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲೂಕು ಬೂಕನಕೆರೆ ಹೋಬಳಿ ವ್ಯಾಪ್ತಿಯಲ್ಲಿ, ಇತ್ತೀಚೆಗೆ ನಡೆದ ಸರಣಿ ಕಳ್ಳತನಗಳಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ದೇಗುಲಗಳು, ಅಂಗಡಿಗಳು, ಹಾಗೂ ಮನೆಗಳಲ್ಲಿ ನಡೆಯುತ್ತಿರುವ ಕಳ್ಳತನಗಳಿಂದ ಸ್ಥಳೀಯರು ನಿದ್ದೆ ಕಳೆದುಕೊಂಡಿದ್ದಾರೆ. ಕಳೆದ ಒಂದು ವಾರದೊಳಗೆ ನಾಲ್ಕು-ಐದು ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಕಳ್ಳರ ಹಾವಳಿಗೆ ಗ್ರಾಮಸ್ಥರು ತತ್ತರಿಸಿದ್ದಾರೆ. ಇತ್ತೀಚಿನ ಘಟನೆಯಾಗಿ, ತಾಲೂಕಿನ ಗಂಜೀಗೆರೆ...

ಮೈಸೂರಿನಲ್ಲಿ ಕಳ್ಳರ ರಾಜ! ಒಂದೇ ರಾತ್ರಿ 19 ಲಕ್ಷ ಕಳವು

ನಗರದ ವಿವಿಧೆಡೆ ಸರಣಿ ಕಳವು ಪ್ರಕರಣಗಳು ವರದಿಯಾಗಿವೆ. ದಿವಾನ್ಸ್ ರಸ್ತೆಯ ಮೆಡಿಕಲ್ ಸ್ಟೋರ್‌ಗಳಲ್ಲಿ ಕಳ್ಳರು ಸರಣಿ ದಾಳಿ ನಡೆಸಿ, ₹9 ಲಕ್ಷ ಮೌಲ್ಯದ ಚಿನ್ನದ ಬಿಸ್ಕೆಟ್‌, ನಾಣ್ಯಗಳು ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ. ದಾಸೇಗೌಡ ಅವರ ಗೌಡ್ರು ವೆಟರ್ನರಿ ಮತ್ತು ಪೆಟ್ ಮೆಡಿಕಲ್ಸ್ ಹಾಗೂ ಶ್ರೀನಿವಾಸ ಮೆಡಿಕಲ್ಸ್ ಅಂಗಡಿಗಳಲ್ಲಿ ಈ ಕಳವು ನಡೆದಿದ್ದು, ಗೌಡ್ರು ಮೆಡಿಕಲ್ಸ್‌ನಿಂದ...

ಬ್ಯಾಂಕ್‌ ದರೋಡೆಗೈದ ಪ್ರಾಧ್ಯಪಕ – ಈತ ಬಲೆಗೆ ಬಿದ್ದಿದ್ದೇ ರೋಚಕ!

ಜೀವನದಲ್ಲಿ ನಡೆದ ಘಟನೆಗಳ ಆಧಾರದ ಮೇಲೆ ಸಿನಿಮಾ ಮಾಡೋದು ಸಾಮಾನ್ಯ. ಆದರೆ, ಕೆಲವರ ಜೀವನವೇ ನಿಜ ಜೀವನದ ಚಿತ್ರಕಥೆ ಆಗಿಬಿಟ್ಟರೆ? ಅಚ್ಚರಿಯೇನಿಲ್ಲ, ಬಿಹಾರದ ಮೂಲದ ರಸಾಯನಶಾಸ್ತ್ರ ಪ್ರಾಧ್ಯಾಪಕನೊಬ್ಬನ ಬದುಕು ಇದೇ ರೀತಿ ಸಿನಿಮಾ ಕಥೆಯನ್ನು ಹೋಲುತ್ತದೆ. ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟಗಳಿಂದಾಗಿ ವಿದ್ಯಾವಂತನಾಗಿದ್ದರೂ ಅಪರಾಧದ ದಾರಿ ಹಿಡಿದು, ಈಗ ಪೊಲೀಸರ ಅತಿಥಿಯಾಗಿರುವ ಈ ವ್ಯಕ್ತಿಯ...

ತಿರುಪತಿ ಹುಂಡಿಗೆ ಕನ್ನ ಹಾಕಿ ₹140 ಕೋಟಿ ಆಸ್ತಿ ಮಾಡಿದ ಭೂಪ

ವಿಶ್ವದ ಶ್ರೀಮಂತ ದೇವಾಲಯವೆನಿಸಿಕೊಂಡಿರುವ ತಿರುಮಲ ತಿರುಪತಿ ದೇವಸ್ಥಾನದ ಹುಂಡಿ ಹಣವನ್ನು ದುರುಪಯೋಗ ಮಾಡಿಕೊಂಡು, ಅಲ್ಲಿನ ಸಿಬ್ಬಂದಿಯೊಬ್ಬ 140 ಕೋಟಿ ರೂ. ಮೌಲ್ಯದ ಆಸ್ತಿ ಸಂಪಾದಿಸಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. 2023ರ ಏಪ್ರಿಲ್ 29ರಂದು ಸಿಸಿಟಿವಿ ಪರಿಶೀಲನೆಯ ವೇಳೆ, ರವಿಕುಮಾರ್‌ ಎಂಬ ಸಿಬ್ಬಂದಿ ಲೆಕ್ಕ ಹಾಕುವ ವೇಳೆ ಹುಂಡಿ ಹಣ ಕದ್ದಿರುವುದು ಬಯಲಾಗಿತ್ತು. ತಪಾಸಣೆಯಲ್ಲಿ ಆತನ...

ಉತ್ತರ ಕರ್ನಾಟಕ- ಕಳ್ಳರ ಅಡ್ಡೆ ಆಗಿದ್ಯಾ?

ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಸಿಸಿ ಕ್ಯಾಮೆರಾಗಳನ್ನೂ ಕಿತ್ತೆಸೆದು, ಸಿಕ್ಕಸಿಕ್ಕ ವಸ್ತುಗಳನ್ನೆಲ್ಲಾ ದೋಚಿ ಎಸ್ಕೇಪ್‌ ಆಗ್ತಿದ್ದಾರೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ, ಕಳ್ಳತನಕ್ಕೆ ಬಂದ ಖದೀಮರ ಗ್ಯಾಂಗ್‌ ಬರೀ ಗೈಯಲ್ಲಿ ವಾಪಸ್‌ ಆಗಿದೆ. ಸೆಪ್ಟೆಂಬರ್‌ 24ರ ತಡರಾತ್ರಿ ಚಿನ್ನದ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ನಾರಾಯಣ ಪೋತದಾರಗೆ ಸೇರಿದ್ದ ಚಿನ್ನಾಭರಣ...

ಹಗಲಲ್ಲಿ ಅರ್ಚಕ-ರಾತ್ರಿ ಕಳ್ಳ : ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರಿನಲ್ಲಿ ಅರ್ಚಕನ ಮುಖವಾಡದ ಹಿಂದೆ ಕಳ್ಳತನ ನಡೆಸುತ್ತಿದ್ದ ಪ್ರವೀಣ್ ಮತ್ತು ಅವನ ಸಂಗಾತಿ ಸಂತೋಷ್ ಸದ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹಗಲು ದೇವಾಲಯಗಳಲ್ಲಿ ಪೂಜೆ, ಹೋಮ-ಹವನ ಮಾಡುವ ಈ ಅರ್ಚಕ, ರಾತ್ರಿ ಬಂದ ಕೂಡಲೇ ಅದೇ ದೇವಾಲಯದ ಬೆಳ್ಳಿ, ಹಿತ್ತಾಳೆ ಹಾಗೂ ಚಿನ್ನಾಭರಣಗಳನ್ನು ಕದ್ದುಕೊಂಡು ಮಾರಾಟ ಮಾಡುತ್ತಿದ್ದ. ಪ್ರತೀ ಬಾರಿ ಕಳ್ಳತನ ಮಾಡಿದ ನಂತರ...

ತಿರುಪತಿ ‘ಹುಂಡಿ’ಯಲ್ಲಿ 100 ಕೋಟಿ ಕಳ್ಳತನ ? CCTVಯಲ್ಲಿ ಸೆರೆ

ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ, ತಿರುಪತಿಯ ತಿರುಮಲ ದೇವಸ್ಥಾನದ ಹುಂಡಿಯಲ್ಲಿ ಭಕ್ತರು ನೀಡಿದ ಹಣದಲ್ಲಿ 100 ಕೋಟಿ ರೂ.ಕ್ಕೂ ಅಧಿಕ ಲೂಟಿ ನಡೆದಿದೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ಮುಖಂಡ ಭಾನು ಪ್ರಕಾಶ್ ರೆಡ್ಡಿ ಮಾಡಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯ ಸದಸ್ಯರಾಗಿರುವ ಭಾನು ಪ್ರಕಾಶ್, ದೇವಸ್ಥಾನದ ಸಿಬ್ಬಂದಿ...

ಕೆಲಸದ ಜಾಗಕ್ಕೆ ಕನ್ನ ಹಾಕಿ ಕೆಜಿಗಟ್ಟಲೇ ಬೆಳ್ಳಿ ಕಳ್ಳತನ !

ಉಂಡ ಮನೆಗೆ ಕನ್ನ ಹಾಕಿದ ಎಂಬ ಗಾದೆ ಮಾತಿನಂತೆ ಮೈಸೂರಿನಲ್ಲಿ ಒಂದು ಘಟನೆ ನಡೆದಿದೆ. ತಾನು ಕೆಲಸ ಮಾಡುತ್ತಿದ್ದ ಮಾಲೀಕರ ಗೋದಾಮಿಗೆ ನುಗ್ಗಿ ದರೋಡೆ ಮಾಡಿದ್ದಾರೆ. ಕಾರು ಚಾಲಕ ಹಾಗೂ ಆತನಿಗೆ ಸಹಾಯ ಮಾಡಿದ ಐವರನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ಗುಜರಾತ್‌ನ ಪರೇಶ್ ಕುಮಾರ್ ಮಾಳಿ, ಕಿಶೋ‌ರ್, ದಿಲೀಪ್ ಕುಮಾ‌ರ್, ಅರವಿಂದ್ ರಜಪೂತ್‌, ಹರೇಶ್ ಪುರೋಹಿತ್...

ದೇಗುಲದ ಗೋಡೆ ಮೇಲೆ ಅನ್ಯಧರ್ಮದ ಚಿಹ್ನೆ!

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕಮಾಳಿಗೆಕೊಪ್ಪಲು ಗ್ರಾಮದ ದೇವಸ್ಥಾನವೊಂದರಲ್ಲಿ ಕಳ್ಳತನ ಮಾಡಿ, ಬಳಿಕ ಗೋಡೆಯ ಮೇಲೆ ಅನ್ಯಧರ್ಮದ ಚಿಹ್ನೆ ಬರೆದು ದುಷ್ಕರ್ಮಿಗಳು ಪರಾರಿಯಾಗಿರುವ ವಿಲಕ್ಷಣ ಘಟನೆ ನಡೆದಿದೆ. ಬುಧವಾರ ರಾತ್ರಿ ದುಷ್ಕರ್ಮಿಗಳು ಚಿಕ್ಕಮಾಳಿಗೆಕೊಪ್ಪಲು ಗ್ರಾಮದ ಏಳೂರಮ್ಮ ದೇವಸ್ಥಾನಕ್ಕೆ ನುಗ್ಗಿದ್ದಾರೆ. ಈ ವೇಳೆ ಮಂಗಳಾರತಿ ತಟ್ಟೆಯಲ್ಲಿದ್ದ ಚಿಲ್ಲರೆ ಕಾಸನ್ನು ಕಳ್ಳತನ ಮಾಡಿದ್ದಾರೆ. ಬಳಿಕ ದೇವಸ್ಥಾನದ ಗೋಡೆಯ ಮೇಲೆ...

Karnataka TV Impact: ದರೋಡೆಯಾಗಿದ್ದ ಬ್ಯಾಂಕ್ ಮ್ಯಾನೇಜರ್‌ನನ್ನು ತರಾಟೆಗೆ ತೆಗೆದುಕೊಂಡ ಕಮಿಷನರ್

Hubli News: ಹುಬ್ಬಳ್ಳಿ: ಹುಬ್ಬಳ್ಳಿಯ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ದರೋಡೆ ನಡೆದಿದ್ದರೂ, ಆ ಕೇಸ್ ಮುಚ್ಚಿ ಹಾಕುವ ಪ್ರಯತ್ನ ನಡೆದಿತ್ತು. ಈ ಬಗ್ಗೆ ಕರ್ನಾಟಕ ಟಿವಿ ಎಕ್ಸ್‌ಕ್ಲೂಸಿವ್ ಸುದ್ದಿ ಬಿತ್ತರಿಸಿತ್ತು. ಕರ್ನಾಟಕ ಟಿವಿಯ ಬಿಗ್‌ ಇಂಪ್ಯಾಕ್ಟ್ ಆಗಿ, ಹುಬ್ಬಳ್ಳಿ ಕಮಿಷನರ್ ಎನ್.ಶಶಿಕುಮಾರ್ ಬ್ಯಾಂಕ್‌ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ದೂರು ನೀಡದೇ, ನಿರ್ಲಕ್ಷ್ಯ ವಹಿಸಿದ್ದ...
- Advertisement -spot_img

Latest News

ಒಂದೆಡೆ ದಲಿತ ಸಿಎಂ ಆಗಲಿ ಎಂದು ಅರೆಬೆತ್ತಲೆ ಪ್ರತಿಭಟನೆ: ಇನ್ನೊಂದೆಡೆ ಡಿಕೆಶಿ ಸಿಎಂ ಆಗಲಿ ಎಂದು ಹೋಮ

Tumakuru News: ತುಮಕೂರು: ತುಮಕೂರಿನಲ್ಲಿ ದಲಿತ ಸಿಎಂ ಆಗಲಿ ಎಂದು ಆಗ್ರಹಿಸಿ, ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿ ದಲಿತ ಸಂಘಟನೆಯವರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್...
- Advertisement -spot_img