ಹಾಸನ: ಖಾಸಗಿ ಶಾಲೆಯ ಮುಖ್ಯಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಜಿಲ್ಲೆಯ ಬೇಲೂರು ತಾಲೂಕಿನ ಖಾಸಗಿ ಶಾಲೆಯಲ್ಲಿ ಘಟನೆ ನಡೆದಿದ್ದು, ನರೇಂದ್ರ ಎಂಬ ಮುಖ್ಯ ಶಿಕ್ಷಕನಿಂದ ಕೃತ್ಯ ನಡೆದಿದೆ. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತದ್ದ ಎಂದು ಜನರು ಮುಖ್ಯ ಶಿಕ್ಷಕನಿಗೆ ಧರ್ಮದೇಟು ನೀಡಿದ್ದಾರೆ.
ವಿದ್ಯಾರ್ಥಿಯರನ್ನು ಆಫೀಸ್ ರೂಮ್ ಗೆ ಕಸ ಗೂಡಿಸಲು ಪದೇ ಪದೇ ಕರೆಯುತ್ತಿದ್ದ, ರೂಮ್ ಗೆ ಬಂದಾಗ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ವಿದ್ಯಾರ್ಥಿನಿಯರು ಸಹಪಾಠಿಗಳೊಂದಿಗ ಹೇಳಿಕೊಂಡಾಗ ವಿಷಯ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯರ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಠಾಣೆಗೆ ಹೊಗಲು ನೀರಾಕರಿಸಿದ ಮುಖ್ಯಶಿಕ್ಷಕನಿಗೆ ಪೋಷಕರೇ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕರ್ನಾಟಕದ ಆ ಗುಡಿಯಲ್ಲಿ ಚಪ್ಪಲಿಯ ದಂಡನ್ನು ಸಮರ್ಪಿಸುತ್ತಾರೆ.. ಈ ಸಂಪ್ರದಾಯದ ಹಿಂದೆ ಇರುವ ಕಾರಣಗಳೇನು ಗೊತ್ತಾ..?