National News: ಸದಾ ಬಿಜೆಪಿಯನ್ನ ಬೆಂಬಲಿಸುತ್ತ ಮಾತನಾಡುವ ನಟಿ ಕಂಗನಾ ರಾಣಾವತ್, ಈ ಬಾರಿ ಲೋಕಸಭಾ ಚುನಾವಣೆಗೆ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿಯಿಂದಲೇ ಸ್ಪರ್ಧಿಸುತ್ತಿದ್ದಾರೆ.
ಬಿಜೆಪಿ ಚುನಾವಣಾ ಪ್ರಚಾರದ ವೇಳೆ ಕಂಗನಾ ಜೋಶ್ನಲ್ಲಿ ಭಾಷಣ ಮಾಡಿದ್ದು, ತೇಜಸ್ವಿ ಯಾದವ್ ಮೇಲೆ ವಾಗ್ದಾಳಿ ಮಾಡುವ ಬದಲು, ತೇಜಸ್ವಿ ಸೂರ್ಯರ ಮೇಲೆ ವಾಗ್ದಾಳಿ ಮಾಡಿದ್ದಾರೆ. ಮಂಡಿಯಲ್ಲಿ ಕಂಗನಾ ಪ್ರಚಾರ ಮಾಡುವ ವೇಳೆ, ಒಂದು ಪಕ್ಷವಿದೆ ಅಲ್ಲಿದ್ದವರಿಗೆ ಸರಿಯಾದ ಗುರಿ ಇಲ್ಲ. ರಾಹುಲ್ ಗಾಂಧಿ ಚಂದ್ರನ ಮೇಲೆ ಆಲೂಗಡ್ಡೆ ಬೆಳೆಯುತ್ತೇನೆ ಅಂತಾರೆ. ತೇಜಸ್ವಿ ಸೂರ್ಯ ರೌಡಿಸಂ ಮಾಡುತ್ತಾರೆ. ಮೀನು ತಿನ್ನುತ್ತಾರೆ ಎಂದು ಕಂಗನಾ ತೇಜಸ್ವಿ ಯಾದವ್ ಹೇಳುವ ಭರದಲ್ಲಿ ತೇಜಸ್ವಿ ಸೂರ್ಯ ಎಂದಿದ್ದಾರೆ.
ಸದ್ಯ ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ತರಹೇವಾರಿಯಾಗಿ ಕಂಗನಾರನ್ನು ಟ್ರೋಲ್ ಮಾಡುತ್ತಿದ್ದಾರೆ. ಕಂಗನಾ ಈ ಮೊದಲು ಕೂಡ ಕಾಂಗ್ರೆಸ್ ಮತ್ತು ರಾಹುಲ್ ವಿರುದ್ಧ ಹಲವು ಬಾರಿ ಟೀಕೆ ಮಾಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಕಾಂಗ್ರೆಸ್ಸಿನವರು ಚುನಾವಣಾ ಸಮಯದಲ್ಲಿ ಕಾಣಿಸಿಕೊಳ್ಳುತ್ತಾರೆ. ಮತ್ತೆ ನಾಪತ್ತೆಯಾಗುತ್ತಾರೆ: ಬಿ.ವೈ.ವಿಜಯೇಂದ್ರ
ಧಾರವಾಡದಲ್ಲಿ ಪಾದಯಾತ್ರೆ ನಡೆಸಿ, ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ
ಶಿಕ್ಷಕಿ ಶಾಲೆಗೆ ಲೇಟಾಗಿ ಬಂದರೆಂದು ಹಲ್ಲೆ ಮಾಡಿ ಬಟ್ಟೆ ಹರಿದ ಪ್ರಾಂಶುಪಾಲರು