www.karnatakatv.net : ರಾಯಚೂರು : ಶ್ರೀಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಎರಡನೇ ದಿನ ಮದ್ಯಾರಾಧನೆಯ ನಿಗದಿತ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದ್ವು. ಪ್ರತಿ ವರ್ಷಕ್ಕಿಂತ ಈ ಬಾರಿಯ ಆರಾಧನಾ ಮಹೋತ್ಸವ ಹಲವು ವಿಶೇಷತೆಗಳನ್ನು ಒಳಗೊಂಡಿದೆ.
ರಾಯರು ಬೃಂದಾವನಸ್ತರಾಗಿ 350 ವರ್ಷಳೇ ಗತಿಸಿವೆ. ಜೀವಂತವಾಗಿ ಬೃಂದಾವನಸ್ತರಾಗಿರೋ ಗುರುರಾಯರು 700 ವರ್ಷಗಳ ಬೃಂದಾವನದೊಳಗೆ ಜೀವಂತವಾಗಿರಲಿದ್ದಾರೆ. ಈ ಮೂಲಕ ರಾಯರು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ ಅನ್ನೋದು ಅಪಾರ ಭಕ್ತ ವೃಂದದ ಅಚಲ ನಂಬಿಕೆ. ಇನ್ನು ಈ ವರ್ಷ ರಾಯರ ಜೀವಿತಾವಧಿಯ ಅರ್ಧದ ವರ್ಷವಾಗಿದೆ. ಪ್ರತಿ ವರ್ಷದಂತೆಯೂ ಈ ಬಾರಿಯೂ ಸಹ ಭಕ್ತಗಣ ರಾಯರ ಬೃಂದಾವನ ದರ್ಶನ ಪಡೆದು ಪುನೀತರಾಗ್ತಿದೆ.
ತಿರುಮಲ ತಿರುಪತಿ ದೇವಾಲಯದಿಂದ ಮಂತ್ರಾಲಯಕ್ಕೆ ವೆಂಕಟೇಶ್ವರ ಸ್ವಾಮಿ ಶೇಷವಸ್ತ್ರವನ್ನು ವಾದ್ಯಗೋಷ್ಠಿಯೊಂದಿಗೆ ವಿಜ್ರಂಭಣೆಯಿಂದ ಬರಮಾಡಿಕೊಳ್ಳಲಾಯಿತು. ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಾಯರಿಗೆ ಶೇಷವಸ್ತ್ರ ಸಮರ್ಪಿಸಿ , ಮಠದ ಪ್ರಾಂಗಣದಲ್ಲಿ ಚಿನ್ನದ ರಥೋತ್ಸವ ನೆರವೇರಿಸಿದ್ರು.
ಇನ್ನು ತುಂಗಾ ನದಿಯಲ್ಲಿ ಬಾಗೀನ ಅರ್ಪಿಸಿ ಕ್ಷೇತ್ರದ ಅಧಿ ದೇವತೆ ಮಂಚಾಲಮ್ಮನ ದರ್ಶನ ಪಡೆದು ರಾಯರಲ್ಲಿ ತಮ್ಮ ಇಷ್ಟಾರ್ಥ ಗಳನ್ನ ಈಡೇರಿಸುವಂತೆ ಪ್ರಾರ್ಥಿನೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮೂರನೇ ದಿನವಾದ ನಾಳೆ ಉತ್ತರಾರಾಧನೆ ನಡೆಯಲಿದೆ. ಒಟ್ನಲ್ಲಿ ಈ ಬಾರಿಯ ಆರಾಧನಾ ಮಹೋತ್ಸವದ ಮಧ್ಯಾರಾಧನೆ ಮಾತ್ರ ಸಾಕಷ್ಟು ವಿಶೇಷವಾಗಿತ್ತು ಚಿನ್ನದ ರಥೋತ್ಸವವನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು ಧನ್ಯರಾದ್ರು.
ಅನೀಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು