www.karnatakatv.net : ಕೋಲ್ಕತ್ತಾ : ಬಂಗಾಳ ಚುನಾವಣೆಯ ನಂತರ ಮಹಿಳೆಯರ ಮೇಲಿನ ಅತ್ಯಾಚಾ, ಕೊಲೆ ಮತ್ತು ಅಪರಾಧಗಳ ಆರೋಪಗಳನ್ನು ಕೇಂದ್ರ ತಿನಿಕಾ ದಳವು ತನಿಖೆ ನಡೆಸಲಿದೆ ಎಂದು ಕೊಲ್ಕತ್ತಾ ಹೈಕೋರ್ಟ್ ಹೇಳಿದೆ ನೀಡಿದೆ. ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದ ಇತರ ಕ್ರಿಮಿನಲ್ ಪ್ರಕರಣಗಳನ್ನು ಬಂಗಾಳ ಪೊಲೀಸರ ವಿಶೇಷ ತನಿಖಾ ತಂಟವು ತನಿಖೆ ನಡೆಸಲಿದ್ದು ಇದರಲ್ಲಿ ಕೋಲ್ಕತ್ತಾ ಪೊಲೀಸ್ ಆಯುಕ್ತರು ಸೌಮೆನ್ ಮಿತ್ರಾ ಭಾಗವಹಿಸಲಿದ್ದಾರೆ ಎಂದು ನ್ಯಾಯಾಲಯವು ಹೇಳಿದೆ.
ಹಂಗಾಮಿ ಮುಖ್ಯ ನ್ಯಾಯಾಧೀಶ ರಾಜೇಶ್ ಬಿಂದಾಲ್ ನೇತೃತ್ವದ ಐದು ಸದಸ್ಯರ ಪೀಠವು ರಾಜ್ಯದಲ್ಲಿ ಚುನಾವಣೋತ್ತರ ಹಿಂಸಾಚಾರದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಮೇಲೆ ತೀರ್ಪು ನೀಡುತ್ತಿದೆ. ಅಗಸ್ಟ್ 3 ರಂದು ನಡೆದ ವಿಚಾರಣೆಯಲ್ಲಿ ನ್ಯಾಯಾಲಯವು ತನ್ನ ತಿರ್ಪು ಕಾಯ್ದಿರಿಸಿತ್ತು.
ರಾಷ್ಟ್ರೀಯ ಮಾನವ ಹಕ್ಕು ಆಯೋಗ ಅಥವಾ ಎನ್ ಎಚ್ ಆರ್ ಸಿ ಗೆ ಪ್ರಾಥಮಿಕ ತನಿಖೆ ನಡೆಸುವಂತೆ ನ್ಯಾಯಾಲಯವು ಈ ಹಿಂದೆ ಸೂಚಿಸಿತ್ತು. ಕಳೆದ ತಿಂಗಳು ನ್ಯಾಯಾಲಯವು ತನ್ನ ಪ್ರಭಲ ಹೇಳಿಕೆಗಳಲ್ಲಿ ರಾಜ್ಯ ಸರ್ಕಾರಕ್ಕೆ ಹೇಳಿಕೆ ನಿರಾಕಣೆಯ ಕ್ರಮದಲ್ಲಿತ್ತು ಮತ್ತು ಎನ್ ಎಚ್ ಆರ್ ಸಿಯ ಮಧ್ಯಂತರ ವರದಿಯು ಸಾಕಷ್ಟು ಸೂಚಿಸಿದೆ. ಎನ್ಎಚ್ಆರ್ಸಿ ವರದಿಯು ಭಾರೀ ವಿವಾದಾಸ್ಪದವಾಗಿದೆ ಎಂದು ಸಾಬೀತಾಯಿತು ಏಕೆಂದರೆ ಅದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಸರ್ಕಾರವನ್ನು ದೋಷಾರೋಪಣೆ ಮಾಡಿತು ಮತ್ತು ಅವರನ್ನು “ಭಯಾನಕ ನಿರಾಸಕ್ತಿ” ಎಂದು ಆರೋಪಿಸಿತು.
ಕರ್ನಾಟಕ ಟಿವಿ ಕೋಲ್ಕತ್ತಾ