Monday, November 17, 2025

Latest Posts

ಸಿಕ್ಕ ಸಿಕ್ಕ ಪ್ರಯಾಣಿಕರಿಗೆಲ್ಲಾ ಹುಚ್ಚನಂತೆ ಮಚ್ಚಿನಿಂದ ಹಲ್ಲೆ !

- Advertisement -

ಒಡಿಶಾದ ಪುರಿಯಲ್ಲಿ ಸಾರ್ವಜನಿಕ ಬಸ್ ನಲ್ಲಿ ಭೀತಿಯ ವಾತಾವರಣ ಸೃಷ್ಟಿಯಾದ ಘಟನೆ ನಡೆದಿದೆ. ಪುರಿ ಜಿಲ್ಲೆಯ ಕನಾಸಾ ಬ್ಲಾಕ್ನ ಹರಸ್ಪದಾದಿಂದ ಸತ್ಯಬರಿ ಸುಕಲ್ ಕಡೆಗೆ ಪ್ರಯಾಣಿಸುತ್ತಿದ್ದ ಅಮಾ ಬಸ್ ಒಳಗೆ, ಒಬ್ಬ ವ್ಯಕ್ತಿ ಬಲವಂತವಾಗಿ ನುಗ್ಗಿ ಪ್ರಯಾಣಿಕರ ಮೇಲೆ ಮಚ್ಚಿನಿಂದ ದಾಳಿ ನಡೆಸಿದ್ದಾನೆ.

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಕುಡಿದ ಅಮಲಿನಲ್ಲಿದ್ದ ಆರೋಪಿ ಮೊದಲು ಪ್ರಯಾಣಿಕರೊಂದಿಗೆ ಮಾತನಾಡಿ, ಬಳಿಕ ಆಕಸ್ಮಿಕವಾಗಿ ಒಬ್ಬನ ತಲೆಗೆ ಮಚ್ಚಿನಿಂದ ಹೊಡೆದಿದ್ದಾನೆ. ಈ ಅನಿರೀಕ್ಷಿತ ದಾಳಿಯಿಂದ ಪ್ರಯಾಣಿಕರಲ್ಲಿ ಭೀತಿ ಉಂಟಾಗಿ, ಹಲವರು ತಮ್ಮ ಆಸನಗಳಿಂದ ಎದ್ದು ಆತಂಕದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ನಂತರ ಆ ವ್ಯಕ್ತಿ ಬಸ್ಸಿನಲ್ಲಿದ್ದ ಇನ್ನೂ ಕೆಲವರ ಮೇಲೂ ದಾಳಿ ಮುಂದುವರಿಸಿದ್ದಾನೆ.

ದಾಳಿಯ ನಂತರ ಪ್ರಯಾಣಿಕರು ಕೂಡಲೇ ಪ್ರತಿಕ್ರಿಯಿಸಿ, ಆರೋಪಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆರೋಪಿ ಗಾಯಗೊಂಡಿದ್ದಾನೆ. ಮತ್ತೊಂದು ದೃಶ್ಯದಲ್ಲಿ, ಆತ ಸೀಟಿನ ಮೇಲೆ ನಿಂತು ಪ್ರಯಾಣಿಕರಿಗೆ ಬಸ್ನಿಂದ ಇಳಿಯುವಂತೆ ಬೆದರಿಸುತ್ತಿರುವುದು ಗೋಚರಿಸುತ್ತದೆ. ಮೂರನೇ ಕ್ಲಿಪ್ನಲ್ಲಿ ಆತ ಬಲಗೈಯಲ್ಲಿ ಮಚ್ಚು ಹಿಡಿದುಕೊಂಡೇ ಬಸ್ಸಿನೊಳಗೆ ಸುತ್ತಾಡುತ್ತಾ ತನ್ನ ಫೋನ್ನಲ್ಲಿ ಏನನ್ನೋ ಪರಿಶೀಲಿಸುತ್ತಿರುವುದೂ ದಾಖಲಾಗಿದೆ.

ಪುರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತೀಕ್ ಸಿಂಗ್ ಮಾಹಿತಿ ನೀಡಿದ್ದು, ಆರೋಪಿ ಸೇರಿದಂತೆ ಗಾಯಾಳುಗಳನ್ನು ಮೊದಲು ಕನಾಸಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಬಳಿಕ ಇಬ್ಬರನ್ನು ಪುರಿ ಜಿಲ್ಲಾ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಆರೋಪಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಲಾಗುತ್ತಿದ್ದು, ಆತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಳಿಕ ಪುರಿ ಪೊಲೀಸರು ಬಸ್ ಮಾರ್ಗದಲ್ಲಿ ಗಸ್ತು ಬಲಪಡಿಸಿ, ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ನಿಗಾ ಇಟ್ಟಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss