ಕರ್ನಾಟಕ ಟಿವಿ ಮಂಡ್ಯ : ಹಳೇ ಮೈಸೂರು ಭಾಗದಲ್ಲಿ ಉಸಿರೇ ಇಲ್ಲದ ಬಿಜೆಪಿ ಕಳೆದ ಉಪಚುನಾವಣೆಯೆ ಸಂದರ್ಭದಲ್ಲಿ ಕೆ.ಆರ್ ಪೇಟೆಯಲ್ಲಿ ಗೆಲುವು ಸಾಧಿಸಿತ್ತು. ಈ ಮೂಲಕ ದಳಪತಿಗಳು ಹಾಗೂ ಕಾಂಗ್ರೆಸ್ ನಾಯಕರಿಗೆ ಶಾಕ್ ನೀಡಿತ್ತು.. ಇದೀಗ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಜಿಪಂ ಅಧ್ಯಕ್ಷೆ ನಾಗರತ್ನ ಅವರ ಪತಿ ಎಸ್ಪಿ ಸ್ವಾಮಿಗೌಡ ಬಿಜೆಪಿ ಪರ ಅಲೆ ಸೃಷ್ಟಿ ಮಾಡಿದ್ದಾರೆ.. ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಸಗರಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಜಿ.ಪಂ ಕ್ಷೇತ್ರಗಳ ಜೆಡಿಎಸ್ ಸದಸ್ಯರು ಸ್ವಾಮಿಗೌಡ ಬೆನ್ನಿಗೆ ನಿಂತಿದ್ದಾರೆ..

ಇದಲ್ಲದೇ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ನಾಲ್ವರನ್ನ ಗೆಲ್ಲಿಸಿಕೊಳ್ಳಲು ಸ್ವಾಮಿಗೌಡ ಪಣ ತೊಟ್ಟಿದ್ದಾರೆ.. ಎಂಎಲ್ಎ ಚುನಾವಣೆಗೆ ಪ್ರಚಾರ ಮಾಡುವಂತೆ ಬಿರುಸಿನ ಪ್ರಚಾರವನ್ನ ಸ್ವಾಮಿಗೌಡ ಮಾಡ್ತಿದ್ದು ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಮಲ ಪಕ್ಷದ ಕರ್ಯಕರ್ತರಲ್ಲಿ ಕಳೆ ಕಟ್ಟಿದೆ.. ಒಂದು ವೇಳೆ ಸಹಕಾರ ಸಂಘದಲ್ಲಿ ಬಿಜೆಪಿ ಬೆಂಬಲಿತರು ಗೆದ್ದಿದ್ದೇ ಆದಲ್ಲಿ ಬಿಜೆಪಿಗೆ ಬಹುದೊಡ್ಡ ಲಾಭವಾಗಲಿದೆ. ಹಾಗೆಯೇ ಇದೇ ಆಸಕ್ತಿ, ವಿಶ್ವಾಸ, ಸಕ್ರಿಯ ಓಡಾಟ ಮುಮದುವರೆಸಿದ ಪಕ್ಷದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರಿನಲ್ಲಿ ಸ್ವಾಮಿಗೌಡ ಶಾಸಕರಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.. ಅದಕ್ಕೂ ಮುನ್ನ ಬರುವ ಗ್ರಾಂ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಖಾತೆ ತೆರೆಯುವ ಸಾಧ್ಯತೆ ನಿಚ್ಚಳವಾಗಿದೆ..
ಧನುಷ್ ಗೌಡ, ಕರ್ನಾಟಕ ಟಿವಿ, ಮದ್ದೂರು