BSYಗೆ ಬಿಗ್ ಶಾಕ್ : ರಾಜ್ಯದಲ್ಲಿ ಇನ್ನುಂದೆ ಮೂವರು ಉಪಮುಖ್ಯಮಂತ್ರಿಗಳು..!

ಕರ್ನಾಟಕ ಟಿವಿ : ಹೈಕಮಾಂಡ್ ಮುಂದೆ ಮಂಡಿಯೂರಿದ ಯಡಿಯೂರಪ್ಪ ಮೂವರಿಗೆ ಡಿಸಿಎಂ ಸ್ಥಾನ ನೀಡಿದ್ದಾರೆ. ಡಿಸಿಎಂ ಸ್ಥಾನ ಯಾವುದೇ ಕಾರಣಕ್ಕೂ ನೀಡಲ್ಲ ಅಂತಿದ್ದ ಯಡಿಯೂರಪ್ಪ ಹೈಕಮಾಂಡ್ ಕಠಿಣ ನಿಲುವಿಗೆ ತಲೆಬಾಗಿ ಒಪ್ಪಿಗೆ ಸೂಚಿಸಿದ್ದಾರೆ

ಮೂರು ಜಾತಿಗೆ ಡಿಸಿಎಂ ಪಟ್ಟ.!
ಇನ್ನು ಮೂವರನ್ನ ಡಿಸಿಎಂ ಆಗಿ ನೇಮಕ ಮಾಡಿರುವ ಬಿಜೆಪಿ ಹೈಕಮಾಂಡ್ ಶಾಸಕರಾಗಿ ಗೆಲ್ಲದಿದ್ದರೂ ಸಚಿವರಾಗಿದ್ದ ಲಕ್ಷ್ಮಣ ಸವದಿಗೆ ಲಿಂಗಾಯದ ಕೋಟಾದಡಿ‌ ಡಿಸಿಎಂ ಮಾಡಿದ್ರೆ, ದಲಿತ ಕೋಟಾದಡಿ ಗೋವಿಂದ ಕಾರಜೋಳ ಡಿಸಿಎಂ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಆರ್. ಅಶೋಕ್, ಸಿ.ಟಿ ರವಿ ಹಿಂದಿಕ್ಕಿದ ಮಲ್ಲೇಶ್ವರ ಶಾಸಕರ ಅಶ್ವಥ್ ನಾರಾಯಣ್ ಒಕ್ಕಲಿಗ ಕೋಟಾದಡಿ ಡಿಸಿಎಂ ಸ್ಥಾಮ ಪಡೆದಿದ್ದಾರೆ.

About The Author