Sunday, September 8, 2024

Latest Posts

Tractor Driver: ಟ್ರ್ಯಾಕ್ಟರ್ ರಿವರ್ಸ್ ಚಲಾಯಿಸಿ ಯಲ್ಲಮ್ಮನ ಗುಡ್ಡಕ್ಕೆ ಹೋದ ಯುವಕ..!

- Advertisement -

ಹುಬ್ಬಳ್ಳಿ: ಕಳೆದ ವಾರದ ಹಿಂದಷ್ಟೇ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದ ಯುವಕನೊರ್ವ ಟ್ರ್ಯಾಲಿ ಸಮೇತವಾಗಿ ರಿವರ್ಸ್ ಟ್ರ್ಯಾಕ್ಟರ್’ನ್ನು ಉಳವಿವರೆಗೆ ಚಲಾಯಿಸಿ ಹರಕೆ ತೀರಿಸಿದ್ದಾರೆ. ಅದರಂತೆ ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದ 22 ವರ್ಷದ ಯುವಕನೊರ್ವ ಇದೀಗ ರಿವರ್ಸ್ ಟ್ರ್ಯಾಕ್ಟರ್ ಓಡಿಸಿ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮನ ದರ್ಶನ ಪಡೆದಿದ್ದಾನೆ.

ಭಕ್ತರು ತಮ್ಮ ಬೇಡಿಕೆಗಳನ್ನು ಈಡೇರಿಕೆಗೆ ಹಲವು ರೀತಿಯ ಹರಕೆಗಳನ್ನು ಹೊರುತ್ತಾರೆ. ಅದರಂತೆ ಮಂಟೂರು ಗ್ರಾಮದ ಬಾಬುಗೌಡ ಪರತಗೌಡ ಎಂಬಾತ ತಮ್ಮ ಊರಿಂದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸುಪ್ರಸಿದ್ಧ ಶ್ರೀ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ಹಿಮ್ಮುಖವಾಗಿ ಟ್ರ್ಯಾಕ್ಟರ್ ಓಡಿಸಿಕೊಂಡು ತಮ್ಮ ಹರಕೆಯನ್ನು ತೀರಿಸಿದ್ದಾನೆ.

ಇನ್ನೂ ಬಾಬುಗೌಡ ಪರ್ವತಗೌಡರ ತಮ್ಮೂರು ಮಂಟೂರಿನಿಂದ ಬರೋಬರಿ 80 ಕಿ.ಮೀ ದೂರದ ಸವದತ್ತಿವರೆಗೆ ಹಿಮ್ಮುಖ ಟ್ರ್ಯಾಕ್ಟರ್ ಓಡಿಸಿದ್ದಾರೆ. ಇದಕ್ಕೆ ಅವರು ಏಳು ಗಂಟೆ ಸಮಯ ತೆಗೆದುಕೊಂಡಿದ್ದಾರೆ.

ಇನ್ನೂ ಕಳೆದ ತಿಂಗಳ ಹಿಂದೆ ನೂತನ ಟ್ರ್ಯಾಕ್ಟರ್ ತೆಗೆದುಕೊಂಡು ಶ್ರೀ ರೇಣುಕಾ ಯಲ್ಲಮ್ಮನ ದರ್ಶನ ಪಡೆಯುವ ಹರಕೆಯನ್ನು ಹೊತ್ತಿದ್ದ ಬಾಬುಗೌಡ ಅದರಂತೆ ಶನಿವಾರ ಬೆಳಿಗ್ಗೆ 6.15 ಕ್ಕೆ ಗ್ರಾಮದಿಂದ ಹೊರಟು ಮಧ್ಯಾಹ್ನ 1.15 ಕ್ಕೆ ಶ್ರೀ ಕ್ಷೇತ್ರ ಯಲ್ಲಮ್ಮನ ಕ್ಷೇತ್ರವನ್ನು ಬಾಬುಗೌಡ ತಲುಪಿದ್ದಾನೆ.

ಬಳಿಕ ಕುಟುಂಬಸ್ಥರು ಹಾಗೂ ಸ್ನೇಹತರೊಂದಿಗೆ ದೇವರ ದರ್ಶನ ಪಡೆದು ವಾಪಾಸ್ ಮಂಟೂರುಗೆ ಬಂದಿದ್ದಾರೆ. ಇನ್ನೂ ಈ ಸಾಧನೆ ಮಾಡಿದ ಯುವಕನಿಗೆ ಗ್ರಾಮಸ್ಥರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದಾರೆ.

 

 

Jagadish Shetter: ಚೀಟಿ ಎತ್ತಿಯಾದ್ರೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿ;

Lad Foundation ಲಾಡ್ ಫೌಂಡೇಶನ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ..!

Pradeep Shetter: ಲಿಂಗಾಯತ ನಾಯಕರನ್ನು ಬಿಜೆಪಿಯಲ್ಲಿ ತುಳಿಯುತ್ತಿದ್ದಾರೆ..!

- Advertisement -

Latest Posts

Don't Miss