ಕಾಮೇಗೌಡರ ಕೆಲಸಕ್ಕೆ ಕೈಜೋಡಿಸಿದ ಕೇಂದ್ರ ಸರ್ಕಾರ

ಕರ್ನಾಟಕ ಟವಿ ಮಂಡ್ಯ : ಮಳವಳ್ಳಿ ಕಾಮೇಗೌಡ ಜೊತೆಗೆ ಕೇಂದ್ರ ಜಲಶಕ್ತಿ ಖಾತೆ ಸಚಿವ ‌ಗಜೇಂದ್ರಸಿಂಗ್ ಶೆಖಾವತ್ ಮಾತುಕತೆ ನಡೆಸಿದ್ದಾರೆ. ವಿಡಿಯೋ ಕಾಲ್ ಮಾಡಿ ಕಾಮೇಗೌಡ ಜೊತೆಗೆ ಮಾತುಕತೆ ಸಚಿವರು ಕಾಮೇಗೌಡರಿಗೆ ಎಲ್ಲಾ ರೀತಿಯಲ್ಲಿ ಬೆಂಬಲ ನೀಡುವ ಭರವಸೆ‌ ನೀಡಿದ್ರು. ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ನಲ್ಲಿ ಕಾಮೇಗೌಡರ ಕೆರೆ ನಿರ್ಮಾಣ ಕಾರ್ಯ ಪ್ರಸ್ತಾಪಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ರು. ಕಾಮೇಗೌಡರು ಮೋದಿ ಮನ್ ಕೀ ಬಾತ್ ನಲ್ಲಿ ಮಾತನಾಡಿದ ನಂತರ ಇಡೀ ದೇಶದ ಗಮನ ಸೆಳೆದಿದ್ದು ಇವರು ಮಂಡ್ಯ ಜಿಲ್ಲೆ  ಮಳವಳ್ಳಿ ದಾಸನದೊಡ್ಡಿ ಗ್ರಾಮದವರು.

ಕರ್ನಾಟಕ ಟಿವಿ, ಮಳವಳ್ಳಿ

About The Author