www.karnatakatv.net : ರಾಯಚೂರು: ನೂತನ ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೆ ಸ್ಥಾನ ನೀಡದ ಹಿನ್ನಲೆ ಶಾಸಕ ಶಿವನಗೌಡ ನಾಯಕರಿಂದ ತೀವ್ರ ಅಸಮಧಾನ ವ್ಯಕ್ತವಾಗಿದೆ. ದೇವದುರ್ಗ ಶಾಸಕ ಶಿವನಗೌಡ ನಾಯಕ ಇಂದು ಮಾದ್ಯಮದ ಎದುರು ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ನಮಗೆ ನೋವಾಗಿದೆ ಎಂದಿದ್ದಾರೆ. ಕೇಂದ್ರದ ಒಲವಿದ್ದರೂ ರಾಜ್ಯದ ಹಿರಿಯರಿಂದ ನಮಗೆ ಅನ್ಯಾಯವಾಗಿದೆ. ಹಿರಿಯರಿಂದ ನಾನು ತುಳಿತಕ್ಕೊಳಗಾಗಿದ್ದೇನೆ ಎಂದಿದ್ದಾರೆ.
ರಾಷ್ಟ್ರೀಯ ನಾಯಕರಿಂದ ಸ್ಥಾನಮನ ಸಿಕ್ಕಿತ್ತು. ಆದ್ರೆ ರಾಜ್ಯದ ಕೆಲ ಹಿರಿಯ ನಾಯಕರು ತಡೆ ಹಿಡಿದಿದ್ದಾರೆ.. ಎಂದ ಅವರು ಆ ಹಿರಿಯ ನಾಯಕರ ಬಗ್ಗೆ ಏಳೆಂಟು ದಿನಗಳಿಂದ ಮಾಹಿತಿ ಪಡೆದಿದ್ದೇನೆ. ಪರಿಶಿಷ್ಟ ಪಂಗಡದವರು ಹಲವು ಶಾಸಕರಿದ್ದಾರೆ. ಕನಿಷ್ಠ ಮೂವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಹದಿಮೂರು ಜಿಲ್ಲೆಗೆ ಅನ್ಯಾಯವಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿವರು ಮುಂದೆಯೂ ಮತ್ತೇ ಮುಖ್ಯಮಂತ್ರಿಯಾಗಲಿದ್ದಾರೆ. ನಮಗೆ ಸಿ ಎಂ ನ್ಯಾಯ ಒದಗಿಸಬೇಕು ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ
ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು