Monday, June 2, 2025

Latest Posts

ಕಾನೂನು ಬಾಹಿರ ಬಂಡೆ ಸಿಡಿತ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು

- Advertisement -

www.karnatakatv.net ಮಂಡ್ಯ : ಕಾನೂನು ಬಾಹಿರವಾಗಿ ಬಂಡೆ ಸಿಡಿಸುತ್ತಿರುವ ದೀಲಿಪ್ ಬಿಲ್ಡ್ ಕೌನ್ ಕಂ ರವರ ವಿರುದ್ದ ಗ್ರಾಮಸ್ಥರು ಇಂದು ಸಿಡಿದೆದ್ದಿದ್ರು. ಮದ್ದೂರು ತಾಲ್ಲೂಕಿನ ಚಂದಹಳ್ಳಿ ಗ್ರಾಮಸ್ಥರು ತಕ್ಷಣ ಬಂಡೆ ಸಿಡಿತ ವಿರುದ್ಧ ಪ್ರತಿಭಟನೆ ನಡೆಸಿದ್ರು. ಬಂಡೆ ಸಿಡಿತದಿಂದ ಗ್ರಾಮಕ್ಕೆ ತೊಂದರೆಯಾಗುತ್ತಿದೆ, ಮನೆಗಳು ಬಿರುಕು ಬಿಟ್ಟಿವೆ, ದೇವಾಲಯದ ಗೋಡೆಗಳು ಬಿರುಕು ಬಿಟ್ಟು ಹಾಳಾಗುತ್ತಿವೆ. ತಕ್ಷಣ ಬಂಡೆ ಸಿಡಿಸುವುದನ್ನ ರದ್ದುಗೊಳಿಸಬೇಕೆಂದು ಅಧಿಕಾರಿ ಹಾಗೂ ಕಂಪನಿಯ ವಿರುದ್ಧ ಧಿಕ್ಕಾರ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೇ ತಕ್ಷಣವೇ ಅಧಿಕಾರಿಗಳು ಕ್ರಮ ಜರಿಗಿಸುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ರು.

ಪ್ರಸನ್ನ, ಕರ್ನಾಟಕ ಟಿವಿ, ಮಂಡ್ಯ

- Advertisement -

Latest Posts

Don't Miss