Monday, October 6, 2025

Latest Posts

ವಿರಾಟ್ ಕೊಹ್ಲಿಗಾಗಿ ಸ್ನೇಹಿತನ ಹತ್ಯೆ ಮಾಡಿದ ಅಭಿಮಾನಿ..!

- Advertisement -

Tamilnad News:

Virat kohili: ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿಯನ್ನು ಗೇಲಿ ಮಾಡಿದ್ದಕ್ಕೆ ಯುವಕ ಸ್ನೇಹಿತನನ್ನುಹತ್ಯೆ ಮಾಡಿದ ಘಟನೆ ತಮಿಳುನಾಡಿನ ಅರಿಯಲೂರಿನ ಪೊಯ್ಯೂರ್‌ನಲ್ಲಿ ನಡೆದಿದೆ.ವಿಘ್ನೇಶ್ ಕೊಲೆಯಾದ ವ್ಯಕ್ತಿ ಹಾಗೂ ಧರ್ಮರಾಜ್ ಕೊಲೆ ಆರೋಪಿ. ಸ್ನೇಹಿತರಾಗಿದ್ದ ಧರ್ಮರಾಜ್ ಮತ್ತು ವಿಘ್ನೇಶ್ ಇಬ್ಬರು ಸೇರಿ ಮಲ್ಲೂರು ಬಳಿಯ ಸಿಡ್ಕೊ ಇಂಡಸ್ಟ್ರಿಯಲ್ ಎಸ್ಟೇಟ್‍ಗೆ ಹೋಗಿದ್ದರು. ಈ ವೇಳೆ ಇಬ್ಬರು ಮದ್ಯ ಸೇವಿಸಿ ಪಾರ್ಟಿ ಮಾಡಿತ್ತಿದ್ದರು. ಇದನ್ನೂ ಓದಿ…“ಸೋರುತಿಹುದು ಕಾಂಗ್ರೆಸ್ ಮನೆಯ ಮಾಳಿಗೆ..?!” ಏನಿದು ಟೀಕೆ..?!

ಈ ಸಂದರ್ಭದಲ್ಲಿ ಕ್ರಿಕೆಟ್ ಕುರಿತು ಚರ್ಚೆ ನಡೆದಿದೆ. ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್  ಬೆಂಗಳೂರು ಟೀಂನಲ್ಲಿ ಯಾವುದು ಉತ್ತಮ ಎಂಬುದರ ಕುರಿತು ವಾಗ್ವಾದ ನಡೆದಿದೆ. ಈ ವೇಳೆ ವಿಘ್ನೇಶ್ ಆರ್‌ಸಿಬಿಯನ್ನು ಗೇಲಿ ಮಾಡಿ ಕೊಹ್ಲಿಯನ್ನು ಅಣಕಿಸಿದ್ದಾನೆ.

ಈ ಹಿನ್ನೆಲೆಯಲ್ಲಿ ವಿಘ್ನೇಶ್ ಹಾಗೂ ಧರ್ಮರಾಜ್ ಮಧ್ಯೆ ನಡೆಯುತ್ತಿದ್ದ ವಾಗ್ವಾದ ಮಿತಿ ಮೀರಿದೆ. ಈ ವೇಳೆ ಕೋಪಗೊಂಡಿದ್ದ ಧರ್ಮರಾಜ್ ಮದ್ಯದ ಬಾಟಲಿ ತೆಗೆದು ವಿಘ್ನೇಶ್ ಮೇಲೆ ಹಲ್ಲೆ ನಡೆಸಿದ್ದಾನೆ. ಜೊತೆಗೆ ಆತನ ತಲೆಗೆ ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದು ಹತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿ ನಿರ್ಜನ ಸ್ಥಳದಲ್ಲಿ ವಿಘ್ನೇಶ್ ಶವ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಮೊಬೈಲ್ ದಾಖಲೆಯ ಆಧಾರದ ಮೇಳೆ ರ‍್ಮ ಧರ್ಮರಾಜ್ ನನ್ನು ಬಂಧಿಸಿದ್ದಾರೆ. ಮೃತ ವಿಘ್ನೇಶ್ ಅವರು ಸಿಂಗಾಪುರಕ್ಕೆ ತೆರಳಲು ಮುಂದಾಗಿದ್ದು, ಐಟಿಐ ಮುಗಿಸಿದ್ದರು. ಈ ಘಟನೆ ನಡೆದಾಗ ಅವರು ಉದ್ಯೋಗ ವೀಸಾಕ್ಕಾಗಿ ಕಾಯುತ್ತಿದ್ದನು.ಇದನ್ನೂ ಓದಿ…ಬಳ್ಳಾರಿ: ಕಾಂಗ್ರೆಸ್ ‘ಜೋಡೋ’ ಯಾತ್ರೆ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ..!

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಸ‌ನ್ನ ಬಾಲಚಂದ್ರ ವರಳೆ..!

ಬಳ್ಳಾರಿ: ಕಾಂಗ್ರೆಸ್ ‘ಜೋಡೋ’ ಯಾತ್ರೆ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ..!

ಬಳ್ಳಾರಿ: ರಾಜ್ಯದಲ್ಲಿ 16ನೇ ದಿನದ ಕಾಂಗ್ರೆಸ್ ಭಾರತ್ ಜೋಡೋ ಪಾದಯಾತ್ರೆ..!

- Advertisement -

Latest Posts

Don't Miss