ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ತಾಲೂಕಿನಲ್ಲಿ ಪ್ರವಾಸಿ ಮಂದಿರದಲ್ಲಿ “ಕೈಮಗ್ಗ ಮತ್ತು ಜವಳಿ ಇಲಾಖೆ”ಯ ಉಪನಿರ್ದೇಶಕರಾದ ಸೌಮ್ಯ ರವರು ನೇಕಾರರ ಸಮ್ಮುಖದಲ್ಲಿ
ಪ್ರಜಾ ಧ್ವನಿ ವಿವರ್ಸ್ ಪ್ರೊಡ್ಯೂಸರ್ ಕಂಪನಿ.ಲಿಮಿಟೆಡ್.
ಸಂಸ್ಥೆಯನ್ನು ಉದ್ಘಾಟಿಸಿದರು. ನೇಕಾರಿಕೆ ಉದ್ಯಮ ಜೀವಂತವಾಗಿರಿಸಲು,ಹಾಗೂ ನೇಕಾರಿಕೆಯನ್ನು ಬಲಪಡಿಸಲು, ನೇಕಾರರಿಗೆ ಬೇಕಾಗುವ ಸವಲತ್ತುಗಳನ್ನು ಸರ್ಕಾರದ ಗಮನಕ್ಕೆ ತರಲು ಮತ್ತು ನೇಕಾರಿಕೆಯನ್ನು ಉತ್ತುಂಗಕ್ಕೇರಿಸಲು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಉದ್ಘಾಟನೆಗೊಂಡಿದೆ.
ಪ್ರಜಾ ಧ್ವನಿ ವಿವರ್ಸ್ ಪ್ರೊಡ್ಯೂಸರ್ ಕಂಪನಿ.ಲಿಮಿಟೆಡ್
ಸಂಸ್ಥೆಗೆ ಷೇರುದಾರರಗಲು 4.000 ನಿಗದಿತ ಶುಲ್ಕದೊಂದಿಗೆ , 150 ಸದಸ್ಯರನ್ನಾಗಿ ಸಂಸ್ಥೆಗೆ ಸೇರಿಸಿಕೊಳ್ಳಲು ಅವಕಾಶವಿದ್ದು, ಆಸಕ್ತಿಯುಳ್ಳ ನೇಕಾರರ ಸಂಸ್ಥೆಯ ಶೇರುದಾರರಾಗಲು ಸಂಸ್ಥೆಯ ಅಧ್ಯಕ್ಷರಾದ ಶ್ರೀನಿವಾಸ್.ಎಲ್ ನೇಕರರಿಗೆ ಮನವಿ ಮಾಡಿದರು.
ನೇಕಾರಿಕೆಯ ಉದ್ಯಮ ದಿನದಿಂದ ದಿನಕ್ಕೆ ಕಷ್ಟ ನಷ್ಟ ಗಳನ್ನು ಅನುಭವಿಸುತ್ತಲೇ ಬರುತ್ತಿದೆ ನಮ್ಮ ನೇಕಾರರೆಲ್ಲರೂ ಒಗ್ಗಟ್ಟಾಗಿ ಶ್ರಮಿಸಿದರೆ ಮಾತ್ರ ನೇಕಾರಿಕೆ ಉದ್ಯಮ ಜೀವಂತವಾಗಿರುವುದು ಎಂದು ಸಂಸ್ಥೆ ಅಧ್ಯಕ್ಷ ಶ್ರೀನಿವಾಸನ್ ಎಲ್.ತಿಳಿಸಿದರು
ಕಾರ್ಯಕ್ರಮದಲ್ಲಿಜವಳಿಉಪನಿರ್ದೇಶಕಿ ಸೌಮ್ಯ, ಪ್ರೊಫೆಸರ್ ರವಿಕಿರಣ್ ವಕೀಲ ಪ್ರಭಾಕರ್, ಹಾಗೂ ಸಂಸ್ಥೆಯ ನಿರ್ದೇಶಕ ಶಶಿಕುಮಾರ್, ನವೀನ್ ,ಮಂಜುನಾಥ್, ಕಾಲ್ಯಾಣಿ ಹಾಗೂ ನೇಕಾರರು ಮತ್ತು ನೇಕಾರ ಮುಖಂಡರು ಈ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು.
ಅಭಿಜಿತ್ ಕರ್ನಾಟಕ ಟಿವಿ ದೊಡ್ಡಬಳ್ಳಾಪುರ.