westbengal News: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಇದೀಗ ಮುಂದುವರೆದಿದೆ. ಪಂಚಾಯತ್ ಚುನಾವಣೆ ವೇಳೆ ಹಿಂಸಾಚಾರ ಬುಗಿಲೆದ್ದಿದೆ. ಪೊಲೀಸರು ಪರಿಸ್ಥಿತಿ ಹತೋಟಿಗೆ ತರುವಲ್ಲಿ ಶತಾಯ ಗತಾಯ ಪ್ರಯತ್ನ ಪಟ್ಟಿದ್ದರೂ ಕೂಡಾ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.
ಪ.ಬಂಗಾಳದ ಹಿಂಸಾಚಾರ ಬಿಗಡಾಯಿಸಿದೆ. ಕಾರ್ಯಕರ್ತರು ಪೊಲೀಸರ ಮೇಲೆಯೇ ಕಲ್ಲು ತೂರಾಟ ಮಾಡಿ ಅಟ್ಟಹಾಸ ಮಾಡಿದ್ದಾರೆ. ಹಿಂಸಾಚಾರ ಭುಗಿಲೆದ್ದ ಕಾರಣ 9 ಮಂದಿ ದುರ್ಮರಣವಪ್ಪಿದ್ದಾರೆ. ಕಾರ್ಯಕರ್ತರ ಕೈಯಲ್ಲಿ ಬ್ಯಾಲೆಟ್ ಪೇಪರ್ ಬದಲಾಗಿ ಬಾಂಬ್ ಪಿಸ್ತೂಲ್ ಗಳು ಕಂಡು ಬಂದಿವೆ. 5ವರೆ ಕೋಟಿ ಜನ ತಮ್ಮ ಹಕ್ಕು ಚಲಾಯಿಸಬೇಕಿತ್ತು. ಆದರೆ ಹಿಂಸಾಚಾರ ಅತಿರೇಕಕ್ಕೆ ಹೋಗಿರೋ ಕಾರಣದಿಂದಾಗಿ ಜನರು ಮನೆಯಲ್ಲಿಯೇ ಕುಳಿತುಕೊಳ್ಳಬೇಕಾಯಿತು.
ಕಾರ್ಯಕರ್ತರು ಕಚ್ಚಾ ಬಾಂಬ್ ಗಳನ್ನು ಎಸೆದು ವಿಕೃತಿ ಮೆರೆಯುತ್ತಿದ್ದಾರೆ. ಜೊತೆಗೆ ಗನ್ ಹಿಡಿದು ಹಲ್ಲೆ ಮಾಡುತ್ತಿರುವುದು ಕಂಡು ಬಂದಿದೆ.ವಿಪರೀತಕ್ಕೆ ಹೋಗಿವೆ ಹಿಂಸಾಚಾರ. ಬ್ಯಾಲೆಟ್ ಬಾಕ್ಸ್ಗಳನ್ನೇ ಎತ್ತಿಕೊಂಡೇ ಹೋಗಿದ್ದಾರೆ. ಮತ ಬಾಕ್ಸ್ಗಳಿಗೆ ಬೆಂಕಿ ಹಚ್ಚುವ ಕೆಲಸ ಹೊಡೆದಾಟ ಬಡಿದಾಟಗಳು ನಿರಂತರವಾಗಿ ಒಂದೇ ಹಂತದ ಮತದಾನ ಸಂಪೂರ್ಣಗೊಂಡಿಲ್ಲ.
RahulGandhi : ಗದ್ದೆಯಲ್ಲಿ ರಾಗಾ ಭತ್ತದ ನಾಟಿ..! ಕಾಂಗ್ರೆಸ್ ನಾಯಕನ ಹೊಸನಡೆ..!
Tamilnadu News: ಮಾಜಿ ಸಿಎಂ ಸೀರೆ ಬೆಂಗಳೂರಿಗೆ ಹಸ್ತಾಂತರ..?! ಏನಿದು ನಾರಿ ಸೀರೆ ರಹಸ್ಯ..?!



