Hubli News: ಹುಬ್ಬಳ್ಳಿ: ಮೋದಿ.. ಅಮಿತ್ ಶಾ ಗೆ ಎದರಲಿಲ್ಲ, ನಿಮಗೆ ಯಾಕೆ ಹೆದರಿಲಿ?.ನಾವು ಜಾತಿ ಗಣತಿಗೆ ಒತ್ತಾಯಿಸಿದ್ದಾಗ ವಿರೋಧಿಸಿದ್ರಿ. ಈಗ ಯಾಕೆ ಒಪ್ಪಿಕೊಂಡ್ರಿ? ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ..
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಮಂತ್ರಿಯ ಹೆಸರು ತೆಗೆದುಕೊಳ್ಳುವುದಿಲ್ಲ. ನಾನು ಎದರಿಕೆಯಿಂದ ಹೆಸರು ತೆಗೆದುಕೊಳ್ಳಲುತ್ತಿಲ್ಲ ಎಂದು ತಿಳಿಬೇಡಿ ಮೋದಿ ಸರ್ಕಾರ ಜಾತಿ ಗಣತಿ ಮಾಡಲು ನಿರ್ಣಯ ತೆಗೆದುಕೊಂಡಿದೆ. ಇಂತಹದ್ದೇ ನಿರ್ಣಯ ತೆಗೆದುಕೊಳ್ಳಲು ನಾನು, ರಾಹುಲ್ ಗಾಂಧಿ ಒತ್ತಾಯಿಸಿದ್ದೆವು. ಎರಡು ವರ್ಷದ ಹಿಂದೆಯೇ ಮೋದಿಯವರಿಗೆ ಒತ್ತಾಯಿಸಿದ್ದೆ. ನಾನು ಏಪ್ರಿಲ್ 16 ಕ್ಕೆ ನಾನುಪತ್ರ ಬರೆದಿದ್ದೆ ಒತ್ತಾಯಿಸಿದ್ದೆ, ಸಮಾಜಿಕ, ಆರ್ಥಿಕ , ಸ್ಥಿತಿಗತಿಗಳು ತಿಳಿಯಲು ಅನುಕೂಲ ಆಗುತ್ತೆ ಅಂತ ಹೇಳಿದ್ದೆ, ಇವತ್ತು ಮೋದಿ ಸರ್ಕಾರವೇ ಒಪ್ಪಿಕೊಂಡಿದೆ. ಈ ಮಾತನ್ನು ಯಾಕೆ ಆಗಲೇ ಹೇಳಲಿಲ್ಲ ಎಂದರು..
ಸ್ವತಂತ್ರವಾಗಿ ಮಾತನಾಡುವ ಶಕ್ತಿ ದೋರಕಿದ್ದು ಸಂವಿಧಾನದ ಮೂಲಕ ಮೋದಿಯವರು ಇದನ್ನ ಮೊಟಕುಗೋಳಿಸುತ್ತಿದ್ದಾರೆ.ಯಾರು ಮೋದಿ ಬಗ್ಗೆ ಮಾತನಾಡ್ತಾರೆ ಅಂತರವನ್ನು ಟಾರ್ಗೆಟ್ ಮಾಡಿ ಜೈಲಿಗೆ ಕಳಿಸುವ ಕೆಲಸ ಮಾಡುತ್ತಿದ್ದಾರೆ.ಯಾರು ಕಾಂಗ್ರೆಸ್ ಬೆಂಬಲಿಸ್ತಾರೆ ಅಂತರಿಗೆ ಇಡಿ-ಐಟಿ ಬೆದರಿಕೆ ತೋರಿಸಲಾಗುತ್ತಿದೆ.ದೇಶ ಉಳಿಯಬೇಕು ಎಂಬ ಉದ್ದೇಶದಿಂದ ನಾವು ಪ್ರಯತ್ನಿಸುತ್ತಿದ್ದೇವೆ,ನಾವು ಏನೇ ಕೆಲಸ ಮಾಡಿದ್ರು ಅದನ್ನು ಟಿಕಿಸುತ್ತಾರೆಂದರು..