Sunday, June 1, 2025

Latest Posts

ಸಂಕ್ರಾಂತಿಯನ್ನ ಯಾಕೆ ಆಚರಿಸಲಾಗತ್ತೆ..? ಎಳ್ಳು- ಬೆಲ್ಲವನ್ನೇಕೆ ತಿನ್ನಬೇಕು..?

- Advertisement -

ಇದೇ ಜನವರಿ 14ರಂದು ಮಕರ ಸಂಕ್ರಾಂತಿ ಹಬ್ಬ ಬರಲಿದೆ. ಈ ದಿನ ನಾವು ದೇವಸ್ಥಾನಕ್ಕೆ ಹೋಗಿ ದೇವರಿಗೆ ಪೂಜೆ ಸಲ್ಲಿಸಿ, ಎಳ್ಳು ಬೆಲ್ಲ ಹಂಚಿ ಸಂಭ್ರಮಿಸುತ್ತೇವೆ. ಆದ್ರೆ ಈ ಸಂಕ್ರಾಂತಿ ಹಬ್ಬವನ್ನು ಯಾಕೆ ಆಚರಿಸುತ್ತಾರೆ..? ಈ ಹಬ್ಬದಲ್ಲಿ ಎಳ್ಳು ಬೆಲ್ಲವನ್ನೇ ಹಂಚೋದ್ಯಾಕೆ ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.

ಮಕರ ಸಂಕ್ರಾಂತಿಯ ವೇಳೆ ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಆಗಮಿಸುತ್ತಾನೆ. ಹಾಗಾಗಿ ಈ ಹಬ್ಬವನ್ನು ಉತ್ತರಾಯಣಿ ಅಂತಲೂ ಕರೀತಾರೆ. ಸಂಕ್ರಾಂತಿಯನ್ನ ಭಾರತದಾದ್ಯಂತ ಎಲ್ಲರೂ ಆಚರಿಸುತ್ತಾರೆ. ಆದ್ರೆ ಈ ಹಬ್ಬಕ್ಕೆ ಬೇರೆ ಬೇರೆ ರಾಜ್ಯದವರು, ಬೇರೆ ಬೇರೆ ರೀತಿ ಕರೆಯುತ್ತಾರೆ. ಕನ್ನಡಿಗರು ಸಂಕ್ರಾಂತಿ, ಸುಗ್ಗಿ ಹಬ್ಬ ಅಂದ್ರೆ, ಕೇರಳಿಗರು,ತಮಿಳಿಗರು ಪೊಂಗಲ್ ಅಂತಾರೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿಯೂ ಮಕರ ಸಂಕ್ರಾಂತಿ ಅಂತಾರೆ. ಮಾಘೇ ಸಂಕ್ರಾಂತಿ, ಸಕ್ರಾತ್, ಖಿಚಡಿ, ಮಾಘ ಸಾಜಿ, ಉತ್ತರಾಯಣ್, ಪೋಷ್ ಪರ್ಬೋನ್ ಎಂದೆಲ್ಲ ಕರೆಯಲಾಗುತ್ತದೆ.

ಇನ್ನು ಯಾಕೆ ಈ ದಿನವನ್ನು ಸಂಕ್ರಾಂತಿ ಎಂದು ಆಚರಿಸಲಾಗತ್ತೆ ಅಂದ್ರೆ ಸೂರ್ಯದೇವ ತಮ್ಮ ಪುತ್ರನಾದ ಶನಿ ದೇವನನ್ನು ಭೇಟಿಯಾಗಲು ತೆರಳಿದ್ದರಂತೆ. ಇದೇ ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಆಗಮಿಸಿದ ಸಮಯವಾಗಿದೆ. ಸೂರ್ಯ ಪಥ ಬದಲಿಸುವ ಈ ಸುದಿನವನ್ನ ಸಂಕ್ರಾಂತಿ ಎನ್ನಲಾಗುತ್ತದೆ.  ಇನ್ನು ಶನಿ ಮಕರ ರಾಶಿಯ ಅಧಿಪತಿಯಾಗಿದ್ದು, ಈ ಕಾರಣಕ್ಕೆ ಸಂಕ್ರಾಂತಿಯನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.

ಈ ದಿನ ರೈತರು ತಾವು ಬೆಳೆದ ಫಸಲನ್ನ ತೆಗೆದು ಪೂಜೆ ಮಾಡಿ, ಬಳಸಲು ಆರಂಭಿಸುತ್ತಾರೆ. ಈ ದಿನವನ್ನ ಸುಗ್ಗಿಯ ದಿನ ಅಂತಾ ಕರೆಯಲಾಗುತ್ತದೆ. ಉತ್ತರಾಯಣ ಎಷ್ಟು ಪವಿತ್ರವಾದ ದಿನ ಅಂದ್ರೆ ಭೀಷ್ಮರು ಇಚ್ಛಾ ಮರಣಿಯಾಗಿದ್ದು, ತಾವು ಪ್ರಾಣತ್ಯಾಗ ಮಾಡಲು ಉತ್ತರಾಯಣದ ದಿನವನ್ನೇ ಆಯ್ಕೆ ಮಾಡಿದ್ದರು. ಗಂಗಾ ಮಾತೆ ಭಗಿರಥನೊಂದಿಗೆ ಭೂಮಿಗೆ ಬಂದಿದ್ದು ಇದೇ ಉತ್ತರಾಯಣದ ಸಮಯದಲ್ಲಿ.

ಉತ್ತರ ಭಾರತದವರು ಮಕರ ಸಂಕ್ರಾಂತಿಯ ದಿನ ಪತಂಗವನ್ನು ಹಾರಿಸುವ ಮೂಲಕ ಹಬ್ಬದ ಆಚರಣೆ ಮಾಡುತ್ತಾರೆ. ನದಿಯಲ್ಲಿ ಪವಿತ್ರ ಸ್ನಾನ ಮಾಡಿ, ಅಕ್ಕಿಯ ಸಿಹಿ ಅನ್ನವನ್ನು ಮಾಡಿ,  ಹಬ್ಬ ಮಾಡಲಾಗತ್ತೆ. ಈ ದಿನ ಬಡ ಬಗ್ಗರಿಗೆ ದಾನ ಮಾಡಿದರೆ, ಒಳ್ಳೆಯದಾಗುತ್ತದೆ ಅನ್ನೋ ನಂಬಿಕೆ ಇದೆ. ಇನ್ನು ನಾವು ಕನ್ನಡಿಗರು ಎಳ್ಳು ಬೆಲ್ಲವನ್ನು ಸಂಕ್ರಾಂತಿಯ ದಿನ ಹಂಚಿ ತಿನ್ನುತ್ತೇವೆ. ಯಾಕೆ ಈ ವೇಳೆ ಎಳ್ಳು ಬೆಲ್ಲವನ್ನು ತಿನ್ನಲಾಗತ್ತೆ ಅಂದ್ರೆ, ಚಳಿಗಾಲವಾಗಿರುವುದರಿಂದ ನಮ್ಮ ಆರೋಗ್ಯವನ್ನು ಉತ್ತಮವಾಗಿ, ಸಮತೋಲನದಲ್ಲಿಡಲು ಉಷ್ಣ ಪದಾರ್ಥದ ಅವಶ್ಯಕತೆ ಇರುತ್ತದೆ. ಹಾಗಾಗಿ ಎಳ್ಳು ಮತ್ತು ಬೆಲ್ಲವನ್ನು ಸವಿಯಲಾಗತ್ತೆ.

- Advertisement -

Latest Posts

Don't Miss