- Advertisement -
ಹೊಸದಿಲ್ಲಿ: ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ತೆರೆಳಬೇಕಿದ್ದ ಅಥ್ಲೀಟ್ಗಳಾದ ಎಸ್. ಧನಲಕ್ಷ್ಮೀ ಮತ್ತು ಟ್ರಿಪಲ್ ಜಂಪರ್ ಐಶ್ವರ್ಯ ಬಾಬು ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ.
ಪ್ರತಿಷ್ಠಿತ ಕ್ರೀಡಾಕೂಟಕ್ಕೂ ಮುನ್ನ ನಿಷೇಧಿತ ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿಬಿದ್ದಿರುವುದರಿಂದ ಸ್ವಲ್ಪ ಹಿನ್ನಡೆಯಾಗಿದೆ.
ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿರುವುದರಿಂದ ಈ ಇಬ್ಬರು ಅಥ್ಲೀಟ್ಗಳು ಕ್ರೀಡಾಕೂಟದಿಂದ ಹೊರ ನಡೆದಿದ್ದಾರೆ. 24 ವರ್ಷದ ಅಥ್ಲೀಟ್ ಧನಲಕ್ಷ್ಮೀ ನಿಷೇಧಿತ ಸ್ಟಿರಿಯ್ಡ್ ಬಳಸಿರುವುದ ವಿಶ್ವ ಅಥ್ಲಿಟಿಕ್ಸ್ನ ಅಥ್ಲೆಟಿಕ್ಸ್ ಸಮಗ್ರ ತಂಡ ಖಚಿತಪಡಿಸಿದೆ. ಧನಲಕ್ಷ್ಮೀ 4-100ಮೀ. ರಿಲೆಯಲ್ಲಿ ಭಾಗವಹಿಸಬೇಕಿತ್ತು.
ಇನ್ನು ಟ್ರಿಪಲ್ ಜಂಪರ್ ರಾಷ್ಟ್ರೀಯ ಅಂತರ್ ರಾಜ್ಯ ಚಾಂಪಿಯನ್ಶಿಪ್ ವೇಳೆ ಉದ್ದಿಪಮಾ ಪರೀಕ್ಷೆ ನಡೆಸಲಾಗಿತ್ತು. ಇದೀಗ ಪಸಿಟಿವ್ ಫಲಿತಾಂಶ ಬಂದಿದೆ.
- Advertisement -