Friday, April 18, 2025

Latest Posts

ಸಿದ್ದರಾಮಯ್ಯ ಮನೆಗೆ ಹೋಗಲು 10 ಸಾವಿರ ಕಾಂಗ್ರೆಸ್ ಕಾರ್ಯಕರ್ತರ ನಿರ್ಧಾರ.. ಯಾಕೆ ಗೊತ್ತಾ..?

- Advertisement -

ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸದಂತೆ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಸೂಚಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಸಿದ್ದರಾಮಯ್ಯ ಮನೆ ಬಳಿ ಕೋಲಾರ ಕ್ಷೇತ್ರದಿಂದ ಸಾವಿರಾರು ಕಾರ್ಯಕರ್ತರು ತೆರಳಲು ಒಕ್ಕಲಿಗ ಮುಖಂಡರು ತೀರ್ಮಾನಿಸಿದ್ದಾರೆ.

ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವುದಿಲ್ಲ ಎಂಬ ಮಾಹಿತಿ ಬರುತ್ತಿದ್ದಂತೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಗೊಂದಲಕ್ಕೆ ಒಳಗಾಗಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರು ಕೋಲಾರದಲ್ಲೇ ಸ್ಪರ್ಧಿಸಬೇಕೆಂದು ಒತ್ತಾಯಿಸಿ ಒಕ್ಕಲಿಗರ ಮುಖಂಡರು, ಕುರುಬ ಸಮುದಾಯದವರು ಸೇರಿದಂತೆ ಎಲ್ಲಾ ಸಮುದಾಯದ ರೈತರು ಸಿದ್ದರಾಮಯ್ಯ ಮನೆಗೆ ತೆರಳಲು ನಿರ್ಧರಿಸಿದ್ದಾರೆ.

2 ತಿಂಗಳ ಹಳೆಯ ಸರ್ವೆಯನ್ನು ರಾಹುಲ್ ಗಾಂಧಿಗೆ ನೀಡಿದ್ದಾರೆ:

ಕೋಲಾರದಲ್ಲಿ ಸಿದ್ದರಾಮಯ್ಯ ಗೆಲುವಿನ ಬಗ್ಗೆ ಸರ್ವೇ ರಿಪೋರ್ಟ್ ಎರಡು ತಿಂಗಳು ಹಳೆಯದು. ಆಗಿನ ಕೋಲಾರ ಚಿತ್ರಣವೇ ಬೇರೆ. ಈಗಿನ ಚಿತ್ರಣವೇ ಬೇರೆ. ಈಗ ಕೋಲಾರ ಕ್ಷೇತ್ರದ ಚಿತ್ರಣ ಸಿದ್ದರಾಮಯ್ಯ ಪರವಾಗಿ ಇದೆ. 2 ತಿಂಗಳ ಹಿಂದೆ ಸಿದ್ದರಾಮಯ್ಯ ಗೆಲವು ಕಷ್ಟವಿತ್ತು ನಿಜ. ಹಾಗಾಗಿ ಸದ್ಯದ ಪರಿಸ್ಥಿತಿ ವಿವರಿಸಿ, ಸಿದ್ದರಾಮಯ್ಯ ಗಮನಕ್ಕೆ ತಂದು ಕೋಲಾರದಲ್ಲೇ ಸ್ಪರ್ಧೆಗೆ ಒತ್ತಡ ಹಾಕೋಣ. ರಾಹುಲ್ ಗಾಂಧಿ ಅವರು ನಿಮಗೆ ರಿಸ್ಕ್ ಇದೆ. ರಾಜ್ಯಾದ್ಯಂತ 224 ಕ್ಷೇತ್ರ ಸಂಚರಿಸಬೇಕು ಅಂತ ಹೇಳಿದ್ದಾರೆ, ಅದ್ರೆ ಸಿದ್ದರಾಮಯ್ಯ ಗೆಲ್ಲೋದಿಲ್ಲ ಅಂತ ಹೇಳಿಲ್ಲ.

8ರಿಂದ 10 ಸಾವಿರ ಮಂದಿ ಸಿದ್ದರಾಮಯ್ಯ ಮನೆಗೆ ತೆರಳಲು ನಿರ್ಧಾರ:

ರಾಹುಲ್ ಗಾಂಧಿ ಸಿದ್ದರಾಮಯ್ಯರಿಗೆ ಹೇಳುವಾಗ ಅಲ್ಲೇ ಇದ್ದ ಒಬ್ಬ ನಾಯಕ ಮಾಧ್ಯಮಗಳಿಗೆ ಹೇಳಿದ್ದಾರೆ. ಮಾಧ್ಯಮಗಳಲ್ಲಿ ಪ್ರಚಾರವಾಗಿರುವ ಸುದ್ದಿ ಗಮನಿಸಿ ಸಿದ್ದರಾಮಯ್ಯನವರಿಗೆ ಬೇಸರ ತಂದಿದೆ. 2 ತಿಂಗಳಿಂದ ಆಗಿರುವ ರಾಜಕೀಯ ಬದಲಾವಣೆ ರಾಹುಲ್ ಗಾಂಧಿ ಅವರಿಗೆ ತಿಳಿದಿಲ್ಲ. ಹೀಗಾಗಿ ನಾವೆಲ್ಲ ಸುಮಾರು 10 ಸಾವಿರ ಮಂದಿ ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿ ಮನವರಿಕೆ ಮಾಡಿ ಕೋಲಾರದಲ್ಲೇ ಸ್ಪರ್ಧೆಗೆ ಒತ್ತಡ ಹಾಕೋಣ ಎಂದು ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ಇದೇ ವೇಳೆ ಸಿದ್ದರಾಮಯ್ಯ ಕೋಲಾರಕ್ಕೆ ಬರಲೇ ಬೇಕು ಅಂತ ಕೈ ಎತ್ತುವ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದರು. ಕೋಲಾರದ ಮುಂದಿನ ಎಂಎಲ್ಎ ಸಿದ್ದರಾಮಯ್ಯ, ಒಕ್ಕಲಿಗರ ಒರವಾಗಿ ನಿಂತಿರುವ ಸಿದ್ದರಾಮಯ್ಯ, ಅನ್ನರಾಮಯ್ಯ, ಬೇಕೇ ಬೇಕು ಸಿದ್ದರಾಮಯ್ಯ ಬೇಕು ಎಂದು ಘೋಷಣೆಗಳನ್ನು ಕೂಗಿ ಜೈಕಾರ ಹಾಕಿದರು.

ಕೋಲಾರದಲ್ಲಿಯೇ ನಿಲ್ಲುತ್ತೇನೆಂದು ಸಿದ್ದರಾಮಯ್ಯ ನಮಗೆ ಮಾತು ಕೊಟ್ಟಿದ್ದಾರೆ:

ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ನಂದಿನಿ ಪ್ರವೀಣ್, ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಲ್ಲ ಅಂತ ಮಾಧ್ಯಮಗಳಲ್ಲಿ ಮಾತ್ರ ಬರುತ್ತಿದೆ. ಕೋಲಾರ ಕ್ಷೇತ್ರದ ಒಕ್ಕಲಿಗ ಮುಖಂಡರೆಲ್ಲಾ ಸಿದ್ದರಾಮಯ್ಯ ಜೊತೆ ಇದ್ದೇವೆ. ಅವರು ಚುನಾವಣೆಗೆ ನಿಂತರೆ ನಾವು ಗೆಲ್ಲಿಸಿ ಕೊಡುತ್ತೇವೆ. ನಮ್ಮ ಒಗ್ಗಟ್ಟನ್ನು ರಾಹುಲ್ ಗಾಂಧಿಗೆ ಸಂದೇಶ ನೀಡುವ ಸಲುವಾಗಿ ನಾಳೆ ಬೆಂಗಳೂರಿನ ಸಿದ್ದರಾಮಯ್ಯ ಮನೆಗೆ ತೆರಳುತ್ತಿದ್ದೇವೆ. ಈ ಹಿಂದೆ ಕೋಲಾರದಲ್ಲಿ ನಿಲ್ಲುತ್ತೇನೆಂದು ಸಿದ್ದರಾಮಯ್ಯ ನಮಗೆ ಮಾತು ಕೊಟ್ಟಿದ್ದರು. ಅದಕ್ಕಾಗಿಯೇ ನಾವು ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಮಾಡಿದ್ದೇವೆ. ಎರಡು ತಿಂಗಳ ಹಿಂದೆ ನಡೆದ ಹಳೆಯ ಸಮೀಕ್ಷೆಯನ್ನಿಟ್ಟುಕೊಂಡು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಅಲ್ಲದೆ ಕೋಲಾರದಲ್ಲಿ ಸ್ಪರ್ಧೆ ಮಾಡುವುದಿಲ್ಲ ಅಂತ ನಮಗೆ ಸಿದ್ದರಾಮಯ್ಯ ಹೇಳಿಲ್ಲ. ಹಾಗಾಗಿ ಮನೆ ಬಳಿಯೇ ಹೋಗಿ ಸಿದ್ದರಾಮಯ್ಯ ಜೊತೆ ಮಾತುಕತೆ ಮಾಡುತ್ತೇವೆ. ಕೋಲಾರ ಕ್ಷೇತ್ರದಲ್ಲಿಯೇ ಸ್ಪರ್ಧಿಸುವಂತೆ ಒತ್ತಾಯಿಸುತ್ತೇವೆ. ನಮಗೆ ಸಿದ್ದರಾಮಯ್ಯ ಬಿಟ್ರೆ ಬೇರೆ ಯಾರೂ ಅಭ್ಯರ್ಥಿ ಇಲ್ಲ, ಅವರೇ ನಮ್ಮ ಅಭ್ಯರ್ಥಿ ಎಂದು ತಿಳಿಸಿದ್ದಾರೆ.

‘ನಾನು ಯಾರ ಬಿಂಬಿತ ಅಭ್ಯರ್ಥಿಯಲ್ಲ, ಎಲ್ಲಾರೂ ಒಪ್ಪಿದ್ರೆ ಅಭ್ಯರ್ಥಿ, ಇಲ್ಲಾದ್ರೆ ಯಾರ ಪರವಾಗಿಯೂ ಪ್ರಚಾರಕ್ಕೆ ಸಿದ್ಧ’

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಟಿಕೇಟ್ ಆಕಾಂಕ್ಷಿ ಶ್ರೀನಿವಾಸ್ ಹೇಳಿಕೆ..

‘ಅಲ್ಲಿ ಸಲ್ಲದವರು ಎಲ್ಲಿಯೂ ಸಲ್ಲುವುದಿಲ್ಲ ಎಂಬಂತೆ ಸಿದ್ದರಾಮಯ್ಯ ಪರಿಸ್ಥಿತಿ ಆಗಿದೆ‌’

- Advertisement -

Latest Posts

Don't Miss