Saturday, October 19, 2024

Latest Posts

ನಾವು ಜೆಡಿಎಸ್‌ಗೆ ಮರುಜೀವ ನೀಡಿದ್ದೇವೆ, ಕುಮಾರಸ್ವಾಮಿಯವರು ಟಿಕೇಟ್ ತ್ಯಾಗ ಮಾಡಬೇಕು: ಯತ್ನಾಳ್

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಹಲವು ವಿಷಯಗಳ ಬಗ್ಗೆ ಹೇಳಿಕೆ ನೀಡಿದ್ದಾರೆ.

ಶಿಗ್ಗಾವ್ ಟಿಕೆಟ್ ಬೊಮ್ಮಾಯಿ ಮಗನಿಗೆ ನೀಡೋ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಬೊಮ್ಮಾಯಿ ಅವರನ್ನ ಯಾಕೆ ಎಳೀತೀರಿ, ಅವರದ್ದೇನು ತಪ್ಪಿಲ್ಲ. ಕರ್ನಾಟಕದಲ್ಲಿ ನಂಬರ್ 1 ಇದ್ದವರಿಂದ ಇದು ಪಾಲನೆ ಆಗಬೇಕು. ಬೊಮ್ಮಾಯಿ ಅವರನ್ನ ಯಾಕೆ ಬಲಿ ಪಶು ಮಾಡ್ತೀರಿ..? ಎಲ್ಲರಿಗೂ ಕೊಟ್ಟ ಮೇಲೆ ಅವರು ಮಗನಿಗೆ ಕೇಳಿದ್ದಾರೆ. ನಮ್ಮ ಪಕ್ಷದ ಹಿರಿಯರು ನಿರ್ಣಯ ಮಾಡ್ತಾರೆ ಎಂದು ಹೇಳಿದ್ದಾರೆ.

ಯೋಗೇಶ್ವರ್ ಗೆ ಚನ್ನಪಟ್ಟಣ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್,  ಕುಮಾರಸ್ವಾಮಿ ಅವರ ಸಹಾಯ ನಮಗೆ ಬೇಕು. ನಮ್ಮ ಶಕ್ತಿ ಕುಮಾರಸ್ವಾಮಿ ಅವರಿಗೆ ಬೇಕು. ಕುಮಾರಸ್ವಾಮಿ ಬಂದಿರೋದ್ರಿಂದ ನಮಗೆ ಲೋಕಸಭೆಯಲ್ಲಿ ಅನುಕೂಲ ಆಗಿದೆ. ಜೆಡಿಎಸ್ ಗೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ. ಎರಡು ಕಡೆಯವರಿಗೂ ಲಾಭ ಆಗಿದೆ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಕೊಡಬೇಕು ಅನ್ನೋದು ಮುಖ್ಯ. ಕುಮಾರಸ್ವಾಮಿ ಅವರು ಟಿಕೆಟ್ ತ್ಯಾಗ ಮಾಡಬೇಕು ಎಂದಿದ್ದಾರೆ.

ಒಂದು ಕಪ್ಪು ಚುಕ್ಕೆ ಇಲ್ಲಾ ಸಿಎಂ ಎಂದಿದ್ದ ಸಿದ್ದರಾಮಯ್ಯ. ಮತ್ತೆ ಈಗ ಮುಡಾ ಹಗರಣ ಯಾಕೆ ಮಾಡಿದ್ರು?
ಆವಾಗ್ಲೇ ಕೊಟ್ಟಿದ್ರೆ ಮುಗಿದು ಬಿಡ್ತಿತ್ತು. ನೈತಿಕ ಹೊಣೆ ಹೊತ್ತು, ರಾಜೀನಾಮೆ ಕೊಟ್ಟು ಮುಕ್ತ ಆಗಬೇಕು ಎಂದು ಯತ್ನಾಳ್ ಹೇಳಿದ್ದಾರೆ.

ಗಂಗಾಜಲದಿಂದ ಬಿಜೆಪಿ ಕಚೇರಿಗಳ ಶುದ್ದಿಕರಣ ವಿಚಾರದ ಬಗ್ಗೆ ಮಾತನಾಡಿದ ಯತ್ನಾಳ್, ಯಾರಾದ್ರೂ ಕೃಷ್ಣ ಹುಟ್ಟುತ್ತಾರೆ, ಮಾಡ್ತಾರೆ. ಹಳೇ ಹುಬ್ಬಳ್ಳಿ ಗಲಭೆ ವಾಪಸ್ ಪಡೆದಿರೋದು ದುರಂತ. ದೇಶದ್ರೋಹಿಗಳು ಪೊಲೀಸ್ ಠಾಣೆ ಸುಡಲು ಮುಂದಾಗಿದ್ರು. ದೇಶದಲ್ಲಿ ಯಾವುದೇ ಪಕ್ಷ ಇದ್ರು ಇಂತಹದ್ದನ್ನು ಒಪ್ಪಿಕೊಳ್ಳಬಾದಾರದು.
ಪೋಲೀಸರ ನೈತಿಕ ಫಲ ಅಡಿಗಿ ಹೋಗುತ್ತೆ. ಕೆಜೆ ಹಳ್ಳಿ ಡಿಜೆ ಹಳ್ಳಿ ನಂತರ ಹುಬ್ಬಳ್ಳಿ ಗಲಭೆ ಬಹಳ ಗಂಭೀರವಾದದ್ದು. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ ತೆಗೆದುಕೊಳ್ಳಬಾರದು. ಹಾಗೇನಾದ್ರೂ ಮಾಡಿದ್ರೆ ಹೈಕೋರ್ಟ್ ಮೆಟ್ಟಿಲು ಹತ್ತುತ್ತೇವೆ.

ಬಿಜೆಪಿ ಅವರು ಇದ್ದಾಗ ಅಮಾಯಕರ ಮೇಲಿನ ಪ್ರಕರಣ ಹಾಕಿದ್ರು. ರೈತರನ್ನ ದನಕ್ಕೆ ಹೊಡೆದಂತೆ ಹೊಡೆದು, ದೇಶದ್ರೋಹಿಗಳನ್ನು ಗುಂಡು ಹಾರಿಸಿ ಕೊಳ್ಳಬೇಕು. ಮುಸ್ಲಿಂರ ತುಷ್ಟಿಕರಣಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ವಕ್ಫ್ ಬೋರ್ಡ್ ಆಸ್ತಿ ವಿಚಾರ ನೋಡೋದಾದ್ರೆ, ಜಮೀರ್ ಅಹ್ಮದ್ ಬಂದಾಗ 11 ಸಾವಿರ ಎಕರೆ ಇತ್ತು.
ಜಿಲ್ಲಾಧಿಕಾರಿ ನನಗೆ ಕೊಟ್ಟ ಹಾಗೇ 16 ಸಾವಿರ ಎಕರೆ. ಕರ್ನಾಟಕದಲ್ಲೇ ಆರುವರೆ ಲಕ್ಷ ಎಕರೆ ಕ್ಲೇಮ್ ಮಾಡ್ತಾ ಇದ್ದಾರೆ. ರಾಜ್ಯದಲ್ಲೇ ಹೀಗಾದ್ರೆ ದೇಶದಲ್ಲಿ ಎರಡು ಪಾಕಿಸ್ತಾನ್ ಆಗುತ್ತೆ. ಹೊಸ ಪಾರ್ಲಿಮೆಂಟ್ ಕ್ಲೇಮ್ ಮಾಡ್ತಾ ಇದ್ದಾರೆ. ಈ ಆಸ್ತಿ ಜಮೀರ್ ಅಹ್ಮದ್ ಅಪ್ಪಂದ ಏನ್ರಿ? ಮೊಘಲರು ಅಯೋಗ್ಯನನ್ನ ಮಕ್ಕಳು. 1500 ವರ್ಷದ ಹಿಂದೆ ಎಲ್ಲಿ ಮುಸಲ್ಮಾನರೆಲ್ಲಿ ಇದ್ರು. ನಮ್ಮಿಂದ ಟಿಪ್ಪು ಸುಲ್ತಾನ್ ಸೇರಿ ಹಲವರಿಂದ ಹೆದರಿ ಮತಾಂತ ಆದವರಿವರು. ಇಲ್ಲಿ ಬಿತ್ತಿದ ಬೀಜಗಳು ಅಲ್ಲಾ ಇವು. ಈ ಮಕ್ಕಳಿಗೆ ಈ ದೇಶದ ಮೇಲೆ ಯಾವುದೇ ಹಕ್ಕಿಲ್ಲ. ಮಹಾತ್ಮಾ ಅನ್ನಬಾರರ್ದು ಗಾಂಧಿ ಮತ್ತು ನೆಹರು ಈ ದೇಶ ಹಾಳು ಮಾಡಿದ್ರು ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

- Advertisement -

Latest Posts

Don't Miss