ಮಾಜಿ ಸಂಸದ ಡಿಕೆ ಸುರೇಶ್ ತಂಗಿ ಅಂತ ಹೇಳಿಕೊಂಡು ಮಹಿಳೆಯೊಬ್ಬರು ಚಿನ್ನಾಭರಣ ಖರೀದಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರ್ ಆರ್ ನಗರ ನಿವಾಸಿ ಆಗಿರುವ ಐಶ್ವರ್ಯ ಗೌಡ ಹಾಗೂ ನಟ ಧರ್ಮೇಂದ್ರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಐಶ್ವರ್ಯ ಗೌಡ ಅವ್ರು 8.41 ಕೋಟಿ ರೂಪಾಯಿ ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ್ದಾರೆ ಅಂತ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ ನ ಓನರ್ ವನಿತಾ ಐತಾಳ್ ಆರೋಪಿಸ್ದಾರೆ. ಐಶ್ವರ್ಯ ಗೌಡ ಸೇರಿದಂತೆ ನಟ ಧರ್ಮೇಂದ್ರ ಹಾಗೂ ಹರೀಶ್ ವಿರುದ್ಧ ಚಂದ್ರಲೇಔಟ್ ಪೊಲೀಸ್ ಸ್ಟೇಷನ್ ನಲ್ಲಿ ದೂರನ್ನ ನೀಡಿದ್ದಾರೆ.
ಅಂದಹಾಗೆ ಐಶ್ವರ್ಯಾ ಗೌಡ 2023ರ ಅಕ್ಟೋಬರ್ ನಿಂದ 2024 ಏಪ್ರಿಲ್ ವರೆಗೂ ಹಂತ ಹಂತವಾಗಿ 8 ಕೋಟಿ ರೂಪಾಯಿ ಮೌಲ್ಯದ ಚಿನ್ನ ಖರೀದಿ ಮಾಡಿದ್ದಾರೆ. ಒಟ್ಟು 14.6 ಕೆಜಿಯಷ್ಟು ಚಿನ್ನಾಭರಣ ಖರೀದಿಸಿ ವಂಚನೆ ಮಾಡಿದ್ದಾರಂತೆ. ಅಷ್ಟೇ ಅಲ್ಲ ಚಿನ್ನದ ಹಣ ಪಾವತಿ ಮಾಡಲು ಕೇಳಿದಾಗ ಡಿಕೆ ಸುರೇಶ್ ವಾಯ್ಸ್ ನಲ್ಲಿ ಸಿನೆಮಾ ನಟ ಧರ್ಮೇಂದ್ರ ಕರೆ ಮಾಡಿ ಸಮಯಾವಕಾಶ ಕೇಳಿದ್ರಂತೆ. ಅದ್ರ ಜೊತೆಗೆ ನಟ ಧರ್ಮೇಂದ್ರ ಅವ್ರಿಂದ ಕರೆ ಮಾಡಿಸಿ ಬೆದರಿಕೆ ಹಾಕಿದ್ದಾರೆ. ಕೊನೆಗೆ ಧರ್ಮೇಂದ್ರ ಅವರನ್ನು ಕಳುಹಿಸಿ ಕೊಲೆ ಮಾಡಿಸುವುದಾಗಿಯೂ ಹೆದರಿಸಿದ್ದರು. ಅವಾಚ್ಯ ಶಬ್ಧಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದರು ಅಂತ ವನಿತಾ ಐತಾಳ್ ಆರೋಪಿಸಿದ್ದಾರೆ.
ಅಂದಹಾಗೆ ವನಿತಾ ಐತಾಳ್ ಗೆ ಕೇವಲ ಸಂಸದ ಡಿಕೆ ಸುರೇಶ್ ತಂಗಿ ಅಂತಷ್ಟೇ ಐಶ್ವರ್ಯಾ ಹೇಳಿಕೊಂಡಿದ್ರು. . ಆದರೆ, ಐಶ್ವರ್ಯಾ ಅವರಿಗೂ ಡಿಕೆ ಸುರೇಶ್ ಅವರಿಗೆ ಪರಿಚಯ ಇದೆಯಾ? ಸಂಬಂಧಿಯೇ ಎಂಬುದು ತನಿಖೆಯಲ್ಲಿ ತಿಳಿಯಬೇಕಿದೆ. ಇನ್ನು ಮಹಿಳೆಯ ಪತ್ತೆಗೆ ಪೊಲೀಸರು ಕ್ರಮವಹಿಸಿದ್ದು, ನಟ ಹಾಗೂ ಮತ್ತೊಬ್ಬ ಆರೋಪಿ ಹರೀಶ್ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಆದ್ರೆ ಈ ಬಗ್ಗೆ ನಟ ಧರ್ಮೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.. ವನಿತಾ ಐತಾಳ್ ಅವರಿಗೆ ನಾನು ಬೆದರಿಕೆ ಹಾಕಿಲ್ಲ, ಡಿಕೆ ಸುರೇಶ್ ಹೆಸರಲ್ಲಿ ಮಾತೇ ಆಡಿಲ್ಲ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ.. ನಾನು ನನ್ನ ಚಿನ್ನದ ಬಾಕಿ ಹಣ ಕೊಡೋ ವಿಚಾರಕ್ಕೆ ಮಾತ್ರ ಫೋನ್ ಮಾಡಿದ್ದೆ. ಆದ್ರೆ ಐಶ್ವರ್ಯ ಗೌಡ ಕೇಸ್ಗೂ ನಂಗೂ ಸಂಬಂಧ ಇಲ್ಲ ಅಂತ ಧರ್ಮೇಂದ್ರ ಸ್ಪಷ್ಟನೆ ನೀಡಿದ್ದಾರೆ.. ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ.