Political news: ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ರಾಜ್ಯ ಸರ್ಕಾರವು ಹಲವು ಮಂಡನೆಗಳನ್ನು ಮಾಡಿತ್ತು. ಆದರೆ ರಾಜ್ಯಪಾಲರು ಹಲವು ವಿಧೇಯಕಕ್ಕೆ ಅಂಕಿತ ಹಾಕದೇ, ವಾಪಸ್ ಕಳುಹಿಸಿದ್ದರು. ಅದರಲ್ಲಿ ಗ್ರೇಟರ್ ಬೆಂಗಳೂರು ವಿಧೇಯಕ ಕೂಡ ಒಂದಾಗಿತ್ತು.
ಆದರೆ ಇದೀಗ ರಾಜ್ಯಪಾಲರು ಆ ವಿಧೇಯಕಕ್ಕೆ ಅಂಕಿತ ಹಾಕಿದ್ದಾರೆ. ಡಿಸಿಎಂ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಅವರ ಕನಸಿನ ಕೂಸಾಾಗಿರುವ ಈ ಪ್ರಾಜೆಕ್ಟ್ ಗೆ ರಾಜ್ಯಪಾಲರು ಈ ಮುನ್ನ ಅಂಕಿತ ಹಾಕಿರಲಿಲ್ಲ. ಆದರೆ ಇಂದು ಥಾವರ್ ಚಂದ್ ಅವರುಿ ಈ ವಿಧೇಯಕಕ್ಕೂ ಸಹಿ ಹಾಕಿದ್ದಾರೆ. ಈ ಮೂಲಕ ಡಿಕೆ ಕನಸು ನನಸಾಗುವ ದಾರಿ ಕ್ಲೀಯರ್ ಆಗಿದೆ.
ಇನ್ನು ಇದಕ್ಕೆ ಸಹಿ ಹಾಕದಿರಲು ಕಾರಣವೇನು ಎಂದರೆ, ಈ ಕೆಲಸದಿಂದ ಬೆಂಗಳೂರು ಒಡೆದು ಹೋಗುತ್ತದೆ. ಪರಭಾಷಿಕರಿಗೆ ಹೆಚ್ಚಿನ ಆದ್ಯತೆ ಸಿಗುತ್ತದೆ ಎಂಬ ಆತಂಕವಿತ್ತು. ಇದೇ ಕಾರಣಕ್ಕೆ ವಿಪಕ್ಷಗಳು ಸಹ ಈ ವಿಧೇಯಕವನ್ನು ವಿರೋಧಿಸುತ್ತಿದ್ದರು. ಈ ಕಾರಣದಿಂದಲೇ ಕಳೆದ ತಿಂಗಳೂ ಗ್ರೇtರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕದೇ, ಹಾಗೆ ಕಳುಹಿಸಿದ್ದರು. ಇದರಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನೆಡೆಯುಂtaಗಿತ್ತು. ಆದರೆ ಇದೀಗ ರಾಜ್ಯಪಾಲರು ಈ ವಿಧೇಯಕಕ್ಕೆ ಸಹಿ ಹಾಕಿದ್ದಾರೆ.